ಹಸಿರು ಪಟಾಕಿಗೂ ಸಮಯದ ಲಗಾಮು
ರಾತ್ರಿ 8ರಿಂದ 10 ಗಂಟೆಯೊಳಗೆ ಸಿಡಿಸಲು ಅವಕಾಶ
Team Udayavani, Nov 12, 2020, 3:03 PM IST
ಕಲಬುರಗಿ: ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಹಸಿರು ಪಟಾಕಿ ಮಳಿಗೆಗಳ ಸ್ಥಾಪನೆ ಸಿದ್ಧತಾ ಕಾರ್ಯ ನಡೆದಿದೆ.
ಕಲಬುರಗಿ: ಬಹುದೊಡ್ಡ ದೀಪಾವಳಿ ಹಬ್ಬಕ್ಕೂ ಕೋವಿಡ್ ಕರಿಛಾಯೆ ಬಿಡದೆ ಕಾಡುತ್ತಿದೆ. ಪಾಸಿಟಿವ್ ಪ್ರಕರಣಗಳಲ್ಲಿ ಕುಸಿತಗೊಂಡಿದ್ದರೂ ಕೆಟ್ಟ ವಾತಾವರಣದಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಉಲ್ಬಣಿಸುವ ಹಿನ್ನೆಲೆಯಲ್ಲಿ ಪರಿಸರ ಮಾರಕಪಟಾಕಿಗೆ ಸರ್ಕಾರ ನಿಷೇಧ ಹೇರಿದೆ. ಹಸಿರು ಪಟಾಕಿಗೆ ಮಾತ್ರ ಹಸಿರು ನಿಶಾನೆ ತೋರಿದೆ. ಆದರೆ, ಇದಕ್ಕೂ ಸಮಯದ ಲಗಾಮು ಹಾಕಿದೆ.
ಲಾಕ್ಡೌನ್ನಿಂದ ವ್ಯಾಪಾರಿಗಳಕೈಸುಟ್ಟುಕೊಂಡಿದ್ದು, ದೀಪಾವಳಿ ಹಬ್ಬ ಬಂತೆಂದು ಪ್ರತಿ ವರ್ಷದಂತೆ ಮಳಿಗೆ ತೆರೆದು ಮಾರಾಟಕ್ಕೆ ಸಿದ್ಧತೆ ನಡೆಸಿದ್ದರು.ಶಿವಕಾಶಿಯಿಂದ ಪಟಾಕಿಗಳನ್ನು ತರಿಸಲು ಮುಂಗಡ ಹಣ ಪಾವತಿಸಿದ್ದರು. ಈಗಾಗಲೇ ಕೆಲವರ ಪಟಾಕಿಗಳ ಲೋಡ್ಗಳು ನಗರಕ್ಕೆಆಗಮಿಸಿವೆ. ಇದರ ನಡುವೆ ನ.6ರಂದುಮುಖ್ಯಮಂತ್ರಿ ಯಡಿಯೂರಪ್ಪ ಈ ಬಾರಿ ದೀಪಾವಳಿಗೆ ಹಸಿರು ಪಟಾಕಿ ಮಾತ್ರವೇಮಾರಾಟಕ್ಕೆ ಮತ್ತು ಸಿಡಿಸಲು ಅನುಮತಿ ನೀಡಲಾಗುವುದು ಎಂದು ದಿಢೀರನೆ ಪ್ರಕಟಿಸಿದರು. ಇದರಿಂದ ವ್ಯಾಪಾರಸ್ಥರು ಕೊಂಚ ಚಿಂತಿತರಾದರೂ ಹಸಿರು ಪಟಾಕಿ ಮಾರಾಟಕ್ಕೆ ಸಜ್ಜಾಗಿದ್ದಾರೆ.
ನಗರದ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಜಿಲ್ಲಾಡಳಿತದ ಅನುಮತಿ ಪಡೆದು 34 ಪಟಾಕಿ ಮಳಿಗೆ ಹಾಕಲಾಗಿದೆ. ನೆಲ ಸಮದಟ್ಟು ಮಾಡಿ ಲೈಟಿಂಗ್ ಸೇರಿಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅಲ್ಲದೇ, ಈ ಬಾರಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಳಿಗೆಗಳ ನಡುವೆಯೂ “ಅಂತರ’ ಬಿಡಲಾಗಿದೆ.
ಪಟಾಕಿ ಮಾರಾಟ ಮೈದಾನ ಸಿದ್ಧತೆಗಾಗಿಯೇ 20 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಪ್ರತಿ ಮಳಿಗೆಯವರಿಂದ ತಲಾ 50 ಸಾವಿರ ರೂ. ಸಂಗ್ರಹಿಸಿ ಪಟಾಕಿ ಮಾರಾಟಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮೇಲಾಗಿ ಮಳಿಗೆ ಸ್ಥಾಪನೆಗಾಗಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ. ಜತೆಗೆ ನಿಯಮದಂತೆ ಅಗ್ನಿಶಾಮಕ, ಪಾಲಿಕೆ, ಇಂಧನ, ಲೋಕೋಪಯೋಗಿ ಸೇರಿದಂತೆ ಎಲ್ಲ ಇಲಾಖೆಗಳಿಂದ ನಿರಾಕ್ಷೇಪಣ ಪ್ರಮಾಣ ಪತ್ರ ಪಡೆದುಕೊಳ್ಳಲಾಗಿದೆ ಎನ್ನುತ್ತಾರೆ ಪಟಾಕಿ ವ್ಯಾಪಾರಿಗಳಲ್ಲೊಬ್ಬರಾದ ವೀರೆಂದ್ರ ಕಡಾಳೆ.
ಪಟಾಕಿ ಸಿಡಿಸಲು ಎರಡೇ ಗಂಟೆ: ದೀಪಾವಳಿ ಹಬ್ಬದಲ್ಲಿ ಹಸಿರು ಪಟಾಕಿ ಮಾತ್ರ ಮಾರಾಟ ಮತ್ತು ಸಿಡಿಸಲು ಅನುಮತಿ ಕಲ್ಪಿಸಲಾಗಿದೆ. ಆದರೂ, ಹಸಿರು ಪಟಾಕಿ ಹಚ್ಚುವ ಮತ್ತು ಸಿಡಿಸುವ ಸಮಯವನ್ನು ಕೇವಲ ಎರಡು ಗಂಟೆ ಮಾತ್ರ ನೀಡಲಾಗಿದೆ. ರಾತ್ರಿ 8ರಿಂದ 10 ಗಂಟೆಯೊಳಗೆ ಮಾತ್ರ ಸಿಡಿಸಲು ಅವಕಾಶ ಇರುತ್ತದೆ ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ತಿಳಿಸಿದ್ದಾರೆ.
ದೀಪಾವಳಿ ಹಬ್ಬ ಆಚರಣೆ ಸಂಬಂಧ ರಾಜ್ಯ ಸರ್ಕಾರದ ಹೊರಡಿಸಿರುವ ಮಾರ್ಗಸೂಚಿಗಳು ನ.9ರ ಮಧ್ಯರಾತ್ರಿ ಯಿಂದ ಜಾರಿಯಲ್ಲಿದ್ದು, ನ.30ರ ಮಧ್ಯರಾತ್ರಿಯವರಗೆ ಚಾಲ್ತಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಪಟಾಕಿ ಮಾರಾಟ ಮಾಡಲು ಮಾರಾಟಗಾರರರಿಗೆ ಪರವಾನಗಿ ಅಥವಾನಿರಾಕ್ಷೇಪಣಾ ಪ್ರಮಾಣಪತ್ರ ನೀಡುವಾಗ ಹಸಿರು ಪಟಾಕಿ ಮಾತ್ರ ಮಾರಾಟ ಮಾಡುವುದಾಗಿ ವ್ಯಾಪಾರಸ್ಥರಿಂದ ಖಚಿತ ಪಡಿಸಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿ ಗಳಿಗೆ ಸೂಚಿಸಲಾಗಿದೆ. ಸರ್ಕಾರದ ಮಾರ್ಗ ಸೂಚಿ ಉಲ್ಲಂಘಿಸಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಹಸಿರು ಪಟಾಕಿ ಯಾವ್ಯಾವು? : ಪಟಾಕಿಗಳು ಎಂದರೆ ಎಲ್ಲವೂ ಒಂದೇ. ಇದರಲ್ಲಿ ಹಸಿರು ಪಟಾಕಿಮತ್ತು ಸಾಮಾನ್ಯ ಪಟಾಕಿಗಳ ನಡುವೆ ವ್ಯತ್ಯಾಸ ಏನು ಎನ್ನುವ ಗೊಂದಲ ಜನ ಸಾಮಾನ್ಯರಲ್ಲಿ ಇದೆ. ಕೇಂದ್ರ ಸರ್ಕಾರ ಹಾಗೂ ಸುಪ್ರೀಂಕೋರ್ಟ್ ನಿಯಮಾವಳಿಯಂತೆ ಪರವಾನಗಿ ಪಡೆದುಕೊಂಡು ಹಸಿರು ಪಟಾಕಿ ಉತ್ಪಾದಿಸಲಾಗುತ್ತದೆ. ಪಟಾಕಿ ಸಿಡಿಸಿದಾಗ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬೆಳಕು ಮತ್ತುಶಬ್ದ ಹೊರ ಬರುತ್ತದೆ. ಜತೆಗೆ ಗಂಧಕ, ನೈಟ್ರೋಜನ್ ಆಕ್ಸೈಡ್, ಪೋಟ್ಯಾಸಿಯಂ ನೈಟ್ರೇಟ್ ಅತ್ಯಲ್ಪ ಮಾತ್ರ ಇರುತ್ತದೆ. ಇದರಿಂದ ಕಡಿಮೆಪ್ರಮಾಣದ ಹೊಗೆ ಹೊರ ಬರುವ ಪಟಾಕಿಗಳೇ ಹಸಿರು ಪಟಾಕಿಗಳು.
ಹಸಿರು ಪಟಾಕಿ ಮಾರಾಟಕ್ಕೆ ಬೇಕಾದ ಅಗತ್ಯ ಅನುಮತಿ ಪಡೆದು 34 ಪಟಾಕಿ ಮಳಿಗೆಸ್ಥಾಪಿಸಲಾಗಿದೆ. ಪ್ರತಿ ಬಾರಿ ಮಳಿಗೆಗಳ ಮಧ್ಯೆ ಯಾವುದೇ ಅಂತರ ಇರುತ್ತಿರಲಿಲ್ಲ. ಈ ಬಾರಿ 8-10 ಅಡಿಅಂತರ ಮಳಿಗೆ ಹಾಕಲಾಗಿದೆ. ಪಟಾಕಿ ಖರೀದಿಗೆ ಬರುವ ಗ್ರಾಹಕರಿಗೆ ಮಾಸ್ಕ್ಕಡ್ಡಾಯ ಮಾಡಲಾಗುತ್ತಿದೆ. ಪ್ರತಿ ಮಳಿಗೆಯಲ್ಲಿ ಸ್ಯಾನಿಟೈಜರ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ವ್ಯವಸ್ಥೆ ಮಾಡಲಾಗುತ್ತಿದೆ. –ಚಂದ್ರಕಾಂತ ಚವ್ಹಾಣ, ಪಟಾಕಿ ವ್ಯಾಪಾರಿ
ಪ್ರಧಾನ ಹಸಿರು ನ್ಯಾಯ ಪೀಠದ ನಿರ್ದೇಶನ ಹಾಗೂ ಕೋವಿಡ್-19 ನಿಯಂತ್ರಣ ನಿಟ್ಟಿನಲ್ಲಿ ದೀಪಾವಳಿ ಹಬ್ಬವನ್ನು ಸರಳವಾಗಿ ಆಚರಿಸಲು ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ಹಸಿರು ಪಟಾಕಿ ಸಿಬ್ಬಂದಿ ನ.6ರಂದು ಹೊರಡಿಸಿದ್ದ ಆದೇಶಕ್ಕೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರ ಹಸಿರು ಪಟಾಕಿ ಸಿಡಿಸಲು ಸಮಯ ನಿಗದಿಗೊಳಿಸಿದೆ. ರಾತ್ರಿ 8ರಿಂದ 10 ಗಂಟೆ ವರೆಗೆ ಮಾತ್ರ ಸೀಮಿತಿಗೊಳಿಸಿ ಅವಕಾಶ ನೀಡಲಾಗಿದೆ. –ವಿ.ವಿ.ಜ್ಯೋತ್ಸ್ನಾ, ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು
Siddaramaiah ಸಿಎಂ ಆದ ಬಳಿಕ ರಾಜ್ಯಕ್ಕೆ ಬರಗಾಲ: ವಿಜಯೇಂದ್ರ
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ