ನೈಸರ್ಗಿಕವಾಗಿ ವರ್ತಿಸಿದರೆ ಒಳ್ಳೆಯದು; ಪ್ರಧಾನಿ ಸ್ಕೂಬಾ ಡೈವಿಂಗ್ ಗೆ ಖರ್ಗೆ ವ್ಯಂಗ್ಯ
Team Udayavani, Feb 26, 2024, 2:53 PM IST
ಕಲಬುರಗಿ: ದೇಶದಲ್ಲಿ ನೈಸರ್ಗಿಕವಾಗಿ ಇರುವುದನ್ನು ಇರುವಂತೆ ನೋಡಬೇಕು. ಆದರೆ, ನವಿಲುಗರಿಯನ್ನು ನೀರುನಾಳದಲ್ಲಿ ಹಾಕುವುದರಿಂದ ಅದೇನು ಬೆಳೆಯುತ್ತದೆಂದು ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವ್ಯಂಗವಾಡಿದರು.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತಿನ ದ್ವಾರಕಾ ಬಳಿಯ ಆಳದ ಅರಬ್ಬಿ ಸಮುದ್ರದಲ್ಲಿ ಕೃಷ್ಣನ ಪೂಜೆ ಮಾಡಿ ನವಿಲುಗರಿ ಅರ್ಪಿಸಿದ್ದನ್ನು ಟೀಕಿಸಿದರು. ಇಂತಹ ಅತಿರೇಕ ಮತ್ತು ಅನೈಸರ್ಗಿಕ ನಡೆಗಳಿಂದ ದೇಶದ ಜನತೆಗೆ ಏನು ಸಂದೇಶ ನೀಡುತ್ತಾರೆ ಎಂದು ಪ್ರಶ್ನಿಸಿದರು. ನಿಸರ್ಗವನ್ನು ಅದು ಇದ್ದಂತೆ ಸ್ವೀಕರಿಸುವ ಬುದ್ಧನ ತತ್ವವೂ ಪ್ರತಿಪಾದಿಸುತ್ತದೆ ಎಂದರು.
ರಾಜ್ಯಸಭೆಯ ಅಡ್ಡ ಮತದಾನ ಕುರಿತು ಪ್ರಸ್ತಾಪಿಸಿ, ನಮಗೆ ಅಂತಹ ಭಯವಿಲ್ಲ, ಅಡ್ಡ, ಉದ್ದ, ಎತ್ತರದ ಮತದಾನ ಆಗುವುದಿಲ್ಲ ಎಂದರು.
ದೇಶದಲ್ಲಿ ಕಾಂಗ್ರಸ್ ಸರ್ವ ನಾಶವಾಗಲಿದೆ ಎನ್ನುವ ಶಿವರಾಜ್ ಸಿಂಗ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿ, ಇಂತಹ ಹೇಳಿಕೆಗಳು ಸರಿಯಲ್ಲ, ಇಗಾಗಲೇ ಒಕ್ಕೂಟದಿಂದ ಅಲಯನ್ಸ್ ಆಗಿದೆ. ಸೀಟು ಹಂಚಿಕೆಯಾಗುತ್ತಿದೆ. ಹಲವು ರಾಜ್ಯಗಳಲ್ಲಿ ಉತ್ತಮ ನಡೆಯಿದೆ. ಇಷ್ಟಿದ್ದರೂ ಸರ್ವನಾಶವಾಗುತ್ತದೆ ಎಂದರೆ, ನಮ್ಮ ಕುರಿತು ಯಾಕೆ ಮಾತನಾಡುತ್ತೀರಿ. ಸುಮ್ಮನಿದ್ದು ಬಿಡಿ ಎಂದು ತಿರುಗೇಟು ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ