ಜನವರಿಯಲ್ಲಿ ರಂಗಾವಲೋಕನ ಶಿಬಿರ


Team Udayavani, Dec 22, 2020, 4:27 PM IST

ಜನವರಿಯಲ್ಲಿ ರಂಗಾವಲೋಕನ ಶಿಬಿರ

ಕಲಬುರಗಿ: ಉತ್ತಮ ರಂಗ ವಿಮರ್ಶೆ ಕಾರಣಕ್ಕಾಗಿ ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ಪತ್ರಕರ್ತರು, ಪತ್ರಿಕೋದ್ಯಮ ವಿದ್ಯಾರ್ಥಿಗಳು,ಯುವ ಬರಹಗಾರರಿಗಾಗಿ ರಾಜ್ಯದ ಹತ್ತು ಭಾಗಗಳಲ್ಲಿ “ರಂಗಾವಲೋಕನ ಶಿಬಿರ’ ಆಯೋಜಿಸಲು ಉದ್ದೇಶಿಸಲಾಗಿದ್ದು, ಕಲಬುರಗಿಯಲ್ಲಿ ಜನವರಿ 5 ಮತ್ತು 6ರಂದು ಪ್ರಥಮ ಶಿಬಿರ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷ ಪ್ರೊ| ಆರ್‌.ಭೀಮಸೇನ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ ರಂಗಾಯಣ ಮತ್ತು ಪತ್ರಕರ್ತರ ಸಂಘದ ಸಹಯೋಗದಲ್ಲಿ ಶಿಬಿರದಲ್ಲಿ ನಡೆಯಲಿದೆ. ಡಾ| ಬಿ.ವಿ. ರಾಜಾರಾಂ, ರಾಜಪ್ಪ ದಳವಾಯಿ, ನಾರಾಯಣ ರಾಯಚೂರು, ದಿನೇಶ ಅಮೀನಗಡ ಪಾಲ್ಗೊಳ್ಳುವರು. ಶಿಬಿರದಲ್ಲಿ ನಾಟಕ ಕೃತಿ, ನಾಟಕ ಪ್ರದರ್ಶನಗಳ ಕುರಿತುಮಾಹಿತಿ ನೀಡಲಾಗುವುದು. ಉಳಿದಂತೆ ನಾಡಿನ ಆಯ್ದಜಿಲ್ಲೆಗಳಲ್ಲಿ ರಂಗ ಸಂಗೀತ, ರಂಗ ಪ್ರಸಾಧನ, ಪರಿಕರ,ರಂಗ ಸಜ್ಜಿಕೆ, ಧ್ವನಿ ಬೆಳಕು ಶಿಬಿರಗಳು ಪ್ರತ್ಯೇಕವಾಗಿ ನಡೆಯಲಿದೆ ಎಂದರು.

ತಾವು ಅಧ್ಯಕ್ಷರಾಗಿ ಒಂದು ವರ್ಷ ಪೂರ್ಣಗೊಂಡಿದ್ದು, ವಿಭಿನ್ನ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ಯುವ ಜನರನ್ನು ರಂಗಭೂಮಿಯತ್ತ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ವೃತ್ತಿ, ಹವ್ಯಾಸ ಮತ್ತುಗ್ರಾಮೀಣ ರಂಗಕರ್ಮಿಗಳಾಗಿ ನಾಟಕೋತ್ಸವ,ನಾಟಕ ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಯುವ ಜನತೆಗೆರಂಗ ತರಬೇತಿ ಕೊಟ್ಟು, ನಾಟಕ ಪ್ರರ್ದಶನಗಳನ್ನುಹಮ್ಮಿಕೊಳ್ಳಲಾಗಿದೆ. ಗ್ರಾಮೀಣ, ಪೌರಾಣಿಕ ಹಾಗೂ ಭಕ್ತಿಪ್ರಧಾನ ನಾಟಕೋತ್ಸವ ನಡೆಸಲಾಗಿದೆ. ಹೊರನಾಡುಕನ್ನಡಿಗರಿಗಾಗಿ ಹೈದ್ರಾಬಾದ್‌ನಲ್ಲಿ ಕನ್ನಡ ನಾಟಕೋತ್ಸವ ಆಯೋಜಿಸಲಾಗಿತ್ತು. ಅಲ್ಲಿನ ದೂರದರ್ಶನದಲ್ಲಿ ಕನ್ನಡ ಸಂದರ್ಶನ ನೀಡಲಾಗಿತ್ತು ಎಂದರು.

ಕೊರೊನಾ ಕಾರಣದಿಂದ ಸ್ಥಗಿತವಾಗಿದ್ದ ಅಕಾಡೆಮಿ ಚಟುವಟಿಕೆಗಳನ್ನು ಮತ್ತೆ ಆರಂಭಗೊಳಿಸಲಾಗಿದೆ. ಜನವರಿಯಲ್ಲಿ ಅಕಾಡೆಮಿಯಿಂದ ಕೊಡಮಾಡುವವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನುತುಮಕೂರಿನಲ್ಲಿ ಆಯೋಜಿಸಲಾಗಿದೆ. ಜೀವಮಾನದಸಾಧನೆಗಾಗಿ ರಂಗ ಗೌರವ ಪ್ರಶಸ್ತಿ, 25 ವಾರ್ಷಿಕ ರಂಗ ಪ್ರಶಸ್ತಿ ಹಾಗೂ ನಾಲ್ಕು ದತ್ತಿ ಪ್ರಶಸ್ತಿ ಸೇರಿ ಒಟ್ಟು 30 ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಹೇಳಿದರು.ಮುಂದಿನ ದಿನಗಳಲ್ಲಿ ಬಾಗಲಕೋಟೆ ಜಿಲ್ಲೆಯಗುಳೇದಗುಡ್ಡದಲ್ಲಿ ಮಹಿಳಾ ತಂಡಗಳ ನಾಟಕೋತ್ಸವ ನಡೆಯಲಿದೆ. ಮಂಗಳಮುಖೀಯರ ಆತ್ಮಸ್ಥೈರ್ಯ ಸಬಲೀಕರಣಕ್ಕಾಗಿ ರಂಗ ತರಬೇತಿ ಶಿಬಿರ ಆಯೋಜಿಸಲಾಗಿದೆ. ಅಕಾಡೆಮಿಯಿಂದ ರಂಗಭೂಮಿಗೆಸಂಬಂಧಿಸಿದ ಸುಮಾರು 3,500 ಪುಸ್ತಕಗಳ ಸಂಗ್ರಹ ಆನ್‌ಲೈನ್‌ನಲ್ಲಿ ಲಭ್ಯವಿದೆ. ಅವುಗಳನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳವ ವ್ಯವಸ್ಥೆ ಇದೆ ಎಂದರು.

ಕಲಬುರಗಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ನಾಟಕ ಅಕಾಡೆಮಿ ಸದಸ್ಯರಾದ ಪ್ರಭುದೇವ ಕಪಗಲ್‌, ಪ್ರವೀಣ ನಾಯಕ, ಕಲಬುರಗಿರಂಗತೋರಣದ ಸದಸ್ಯರಾದ ಸುನೀಲ ಬನಶೆಟ್ಟಿ, ನಾಗೇಶ ಮೂಲಗೆ ಇದ್ದರು.

ಒಂದು ಹುದ್ದೆ ಬಿಡಲು ಸಿದ್ಧ  :  ರಂಗ ಸಮಾಜ ಮತ್ತು ನಾಟಕ ಅಕಾಡೆಮಿ ಎರಡರಲ್ಲೂ ಸದಸ್ಯರಾಗಿ ಮುಂದುವರಿಯಲು ಅವಕಾಶವಿದೆ. ಇವು ಲಾಭದಾಯಕ ಹುದ್ದೆಗಳಲ್ಲ. ಹೀಗಾಗಿ ಎರಡೂ ಸದಸ್ಯ ಸ್ಥಾನ ಹೊಂದಲು ಯಾವುದೇ ಅಡ್ಡಿ ಇಲ್ಲ. ಒಂದು ವೇಳೆ ಸರ್ಕಾರ ಸೂಚಿಸಿದರೆ ಒಂದು ಸದಸ್ಯತ್ವವನ್ನು ಬಿಡಲು ಸಿದ್ಧನಿದ್ದೇನೆ ಎಂದು ಸದಸ್ಯ ಪ್ರಭುದೇವ ಕಪಗಲ್‌ತಿಳಿಸಿದ್ದಾರೆ. ಪ್ರಭುದೇವ ಕಪಗಲ್‌ ಎರಡೂ ಹುದ್ದೆಗಳಲ್ಲಿ ಮುಂದು ವರಿದಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿರುವ ಕುರಿತಂತೆ ಕೇಳಿದ ಪ್ರಶ್ನೆಗೆ ಈ ಉತ್ತರ ನೀಡಿದ್ದಾರೆ.

ಕರ್ನಾಟಕ ನಾಟಕ ಅಕಾಡೆಮಿಗೆ ಸರ್ಕಾರದಿಂದ 80 ಲಕ್ಷ ರೂ. ಅನುದಾನ ಸಿಗಲಿದೆ. ಕೋವಿಡ್ ಕಾರಣದಿಂದ ಶೇ.30ರಷ್ಟು ಅನುದಾನ ಕಡಿತಗೊಳಿಸಲು ಸರ್ಕಾರ ಮುಂದಾಗಿತ್ತು.ಆದರೆ ಈಗ ಯಾವುದೇ ಅನುದಾನ ಕಡಿತ ಮಾಡದೆ ಸಂಪೂರ್ಣ ನೀಡಲು ತೀರ್ಮಾನಿಸಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ರಾಜ್ಯದ ವೃತ್ತಿ, ಹವ್ಯಾಸಿ, ಗ್ರಾಮೀಣ,ಬೀದಿ ರಂಗಭೂಮಿಯ 2,700ಕ್ಕೂ ಅಧಿಕ ಕಲಾವಿದರಿಗೆ ಧನ ಸಹಾಯ ಕಲ್ಪಿಸಲಾಗಿದೆ.  -ಪ್ರೊ| ಆರ್‌.ಭೀಮಸೇನ, ಅಧ್ಯಕ್ಷ, ಕರ್ನಾಟಕ ನಾಟಕ ಅಕಾಡೆಮಿ

ಟಾಪ್ ನ್ಯೂಸ್

ಮುಂದಿನ 5 ವರ್ಷಗಳಲ್ಲಿ ಅಭಿವೃದ್ಧಿಯ ನೈಜ ಸಿನೆಮಾ: ಡಾ| ಧನಂಜಯ ಸರ್ಜಿ

ಮುಂದಿನ 5 ವರ್ಷಗಳಲ್ಲಿ ಅಭಿವೃದ್ಧಿಯ ನೈಜ ಸಿನೆಮಾ: ಡಾ| ಧನಂಜಯ ಸರ್ಜಿ

Wild Elephant ಚಾರ್ಮಾಡಿಯಲ್ಲಿ ನಿತ್ಯ ಕಾಡಾನೆ ದರ್ಶನ!

Wild Elephant ಚಾರ್ಮಾಡಿಯಲ್ಲಿ ನಿತ್ಯ ಕಾಡಾನೆ ದರ್ಶನ!

Bantwal ಲಾರಿ ಹರಿದು ಬೈಕ್‌ ಸವಾರ ಸಾವು; ಸಹಸವಾರ ಗಂಭೀರ

Bantwal ಲಾರಿ ಹರಿದು ಬೈಕ್‌ ಸವಾರ ಸಾವು; ಸಹಸವಾರ ಗಂಭೀರ

Padubidri ನೀರು ಪಾಲಾಗಿದ್ದ ಅಭಿಲಾಷ್‌ ಮೃತದೇಹ ಪತ್ತೆ

Padubidri ನೀರು ಪಾಲಾಗಿದ್ದ ಅಭಿಲಾಷ್‌ ಮೃತದೇಹ ಪತ್ತೆ

Belthangady ಗೇರುಕಟ್ಟೆ ಸಮೀಪ ರಸ್ತೆ ಬದಿ ದಿಬ್ಬಕ್ಕೆ ಕಾರು ಢಿಕ್ಕಿ

Belthangady ಗೇರುಕಟ್ಟೆ ಸಮೀಪ ರಸ್ತೆ ಬದಿ ದಿಬ್ಬಕ್ಕೆ ಕಾರು ಢಿಕ್ಕಿ

CM Siddaramaiah ಚುನಾವಣೆ ಅನಂತರ ಬಿಜೆಪಿಯ ಭಿನ್ನಮತದ ಮಹಾಸ್ಫೋಟ

CM Siddaramaiah ಚುನಾವಣೆ ಅನಂತರ ಬಿಜೆಪಿಯ ಭಿನ್ನಮತದ ಮಹಾಸ್ಫೋಟ

CM Siddaramaiah: ಸಿಎಂ,ಡಿಸಿಎಂ ಕಾವೇರಿ ನಿವಾಸದಲ್ಲಿ ಮಹತ್ವದ ​ಸಭೆ

CM Siddaramaiah: ಸಿಎಂ,ಡಿಸಿಎಂ ಕಾವೇರಿ ನಿವಾಸದಲ್ಲಿ ಮಹತ್ವದ ​ಸಭೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-kalburgi

Kalburgi: ಕರೆಂಟ್ ಶಾಕ್ ಪ್ರಕರಣ;ಖಂಡಿಸಿ ಹಿಂದೂ ಜಾಗೃತಿ ಸೇನೆಯಿಂದ ಸರಕಾರದ ಪ್ರತಿಕೃತಿ ದಹನ

1-wqew-ewqe

Kalaburagi: ಹಣಕ್ಕಾಗಿ ಮೂವರ ವಿವಸ್ತ್ರಗೊಳಿಸಿ ಗುಪ್ತಾಂಗಕ್ಕೆ ಶಾಕ್‌!: 7 ಮಂದಿ ಸೆರೆ

4-wadi

Revenge: 13 ವರ್ಷದ ಬಾಲಕಿ ಕುತ್ತಿಗೆಗೆ ಚೂರಿ ಇರಿತ ! ಅತ್ಯಾಚಾರಕ್ಕೆ ಅತ್ಯಾಚಾರದ ಪ್ರತಿಕಾರ?

Minchu

Chincholi: ಸಿಡಿಲು ಬಡಿದು ಕೂಲಿ‌ ಕಾರ್ಮಿಕ ಮಹಿಳೆ‌ ಮೃತ್ಯು,ಪುತ್ರನಿಗೆ ಗಂಭೀರ ಗಾಯ

ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ ಆಚರಣೆ

Kalaburagi; ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ ಆಚರಣೆ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

ಮುಂದಿನ 5 ವರ್ಷಗಳಲ್ಲಿ ಅಭಿವೃದ್ಧಿಯ ನೈಜ ಸಿನೆಮಾ: ಡಾ| ಧನಂಜಯ ಸರ್ಜಿ

ಮುಂದಿನ 5 ವರ್ಷಗಳಲ್ಲಿ ಅಭಿವೃದ್ಧಿಯ ನೈಜ ಸಿನೆಮಾ: ಡಾ| ಧನಂಜಯ ಸರ್ಜಿ

Wild Elephant ಚಾರ್ಮಾಡಿಯಲ್ಲಿ ನಿತ್ಯ ಕಾಡಾನೆ ದರ್ಶನ!

Wild Elephant ಚಾರ್ಮಾಡಿಯಲ್ಲಿ ನಿತ್ಯ ಕಾಡಾನೆ ದರ್ಶನ!

Bantwal ಲಾರಿ ಹರಿದು ಬೈಕ್‌ ಸವಾರ ಸಾವು; ಸಹಸವಾರ ಗಂಭೀರ

Bantwal ಲಾರಿ ಹರಿದು ಬೈಕ್‌ ಸವಾರ ಸಾವು; ಸಹಸವಾರ ಗಂಭೀರ

Lawsuit to stop auction of Maradona’s golden ball

Diego Maradona ಚಿನ್ನದ ಚೆಂಡಿನ ಹರಾಜು ತಡೆಯಲು ದಾವೆ

Padubidri ನೀರು ಪಾಲಾಗಿದ್ದ ಅಭಿಲಾಷ್‌ ಮೃತದೇಹ ಪತ್ತೆ

Padubidri ನೀರು ಪಾಲಾಗಿದ್ದ ಅಭಿಲಾಷ್‌ ಮೃತದೇಹ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.