ಕವಿಗಳು ಎಚ್ಚರದ ಪರಿವೆಯ ಕರೆ ಗಂಟೆ

ಸಂಸ್ಕೃತಿ, ಚರಿತ್ರೆ, ಪ್ರಭುತ್ವವನ್ನು ಪುನರುಜ್ಜೀವನಗೊಳಿಸುವ ಆಶಯ ಹೊಂದಿದ

Team Udayavani, Dec 21, 2021, 5:50 PM IST

ಕವಿಗಳು ಎಚ್ಚರದ ಪರಿವೆಯ ಕರೆ ಗಂಟೆ

ಕಲಬುರಗಿ: ಕಾವ್ಯ ಈ ಕ್ಷಣದ ವೀಕ್ಷಣೆಯಿಂದ ಅದೇನನ್ನೋ ದರ್ಶಿಸುವಂತಿರಬೇಕು. ಕವಿಗಳಾದವರು ಎಚ್ಚರದ ಪರಿವೆಯ ಕರೆ ಗಂಟೆಗಳಾಗಬೇಕು ಎಂದು ಹಿರಿಯ ಕವಿ ಡಾ|ಎಚ್‌.ಎಸ್‌. ಶಿವಪ್ರಕಾಶ ಹೇಳಿದರು.

ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ “ಹೋಗಿ ಬನ್ನಿ ಋತುಗಳೇ’ (ನಾಲ್ಕು ದಶಕದ ಕವಿತೆಗಳು) ಸಂವಾದ ಮತ್ತು ಚರ್ಚೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿಶ್ವ ಮಾರುಕಟ್ಟೆಯ ಸಂದರ್ಭದಲ್ಲಿ ಬದುಕುತ್ತಿರುವ ಈ ಸಮಯದಲ್ಲಿ ಪುಣ್ಯಕೋಟಿ ಬರೆದ ಕವಿ “ದೇಶಿ ಕವಿ’ಯೋ ಅಥವಾ “ವಿಶ್ವ ಕವಿ’ಯೋ ಎಂಬುದು ನಿರ್ಣಯಿಸಬಾರದು. ನಾವೇ ವಿಶ್ವದ ಭಾಗವಾದಾಗ ಮಾತ್ರ ಅದು ಕಾಣುತ್ತದೆ. ಎಲ್ಲವೂ ಇಲ್ಲಿ ಅನಿಮಿತ್ತವಾಗಿದೆ. ನಾವು ಏನಿದ್ದೇವೆ?, ಹೇಗಿದ್ದೇವೆ ಎಂಬುದನ್ನು ಜನ ಗಮನಿಸುತ್ತಾರೆ ಎಂದು ತಿಳಿಸಿದರು.

ಇಲ್ಲಿ ಎಲ್ಲವೂ ಇದೆ, ಏನೂ ಇಲ್ಲ. ಅಕ್ಕಮಹಾದೇವಿ, ಕಾರ್ಲ್ ಮಾರ್ಕ್ಸ್ನಂತವರ ಸಾಹಿತ್ಯ ಸಾರ್ವಕಾಲಿಕವಾಗಿದೆ. ಕವಿಗಳು ಮರಗಿಡಗಳ ಜತೆಗೆ ಬದುಕುತ್ತಾರೆ, ಸಂವಹನ ಮಾಡುತ್ತಾರೆ. ಆಗ ಮಾತ್ರ ಸಾರ್ವಕಾಲಿಕರಾಗಬಹುದು. ಚರಿತ್ರೆ ಒಂದು ಸ್ಥಿತಿಯಿಂದ ಉನ್ನತ ಸ್ಥಿತಿಗೆ ಹೋಗುತ್ತದೆ. ಬುದ್ಧ, ಬಸವ, ಏಸುಕ್ರಿಸ್ತರ ಸಾವಿರಾರು ವರ್ಷಗಳ ತತ್ವಗಳು ಸ್ಥಾನಪಲ್ಲಟವಾದರೂ ಹೊಸ ಚರಿತ್ರೆಯೊಂದಿಗೆ ಜೋಡಿಸಿಕೊಂಡು ಔನ್ನತ್ಯಕ್ಕೆ ಏರುತ್ತವೆ ಎಂದರು.

ಕೃತಿ ಕುರಿತು ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಡಾ|ಸಿರಾಜ್‌ ಅಹ್ಮದ್‌ ಮಾತನಾಡಿ, ಶಿವಪ್ರಕಾಶ ಅವರ ವೈವಿಧ್ಯಮಯ ಕಾವ್ಯಗಳಲ್ಲಿ ಸಾರ್ವಕಾಲಿಕ. ಸರ್ವವ್ಯಾಪಿ ಗುಣಗಳಿದ್ದು, ಕನ್ನಡ ಕಾವ್ಯ ವಿಸ್ತಾರಗೊಳಿಸಿದ ಕೀರ್ತಿಗೆ ಭಾಜನರಾಗಿದ್ದಾರೆ ಎಂದರು. ಎಚ್‌. ಎಸ್‌. ಶಿವಪ್ರಕಾಶರ ಕಾವ್ಯಕ್ಕೆ ಚಲಿಸುವ, ಹರಿಯುವ ಆಹ್ವಾನೆಗೊಳಿಸುವ ಶಕ್ತಿಯಿದೆ. ಕನ್ನಡ ಸಂವೇದನೆ ಸಂವರ್ಧನೆಗೊಂಡಿದೆ. ಕಾವ್ಯ ಬದುಕಿನ ಎಲ್ಲವನ್ನು ಹಾಸು ಹೊಕ್ಕು, ಮಿಳಿತಗೊಂಡಂತಿದೆ. ಇವರ ದೇಶಿ ಅನುಭವಕ್ಕೆ ಪರಿಯೇ ಇಲ್ಲ. ಆಯುಧಗಳಿಲ್ಲದ, ಹಿಂಸೆ ಇಲ್ಲದ ಸಂಸ್ಕತಿಯನ್ನು ಹುಡುಕಾಡುವ ಗುಣ ಲಕ್ಷಣಗಳು ಇವರ ಕಾವ್ಯಕ್ಕಿದ್ದು, ಸಂಸ್ಕೃತಿ, ಚರಿತ್ರೆ, ಪ್ರಭುತ್ವವನ್ನು ಪುನರುಜ್ಜೀವನಗೊಳಿಸುವ ಆಶಯ ಹೊಂದಿದ “ಅಮೆಜಾನ್‌’ ಕವಿ ಶಿವಪ್ರಕಾಶ ಎಂದು ವರ್ಣಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಳ್ಳಾರಿಯ ಲೋಹಿಯಾ ಪ್ರಕಾಶನದ ಸಿ.ಚೆನ್ನಬಸವಣ್ಣ, ಶಿವಪ್ರಕಾಶರ ಶತಮಾನದ ಕಾವ್ಯ ಹಾಗೂ ಈಗಿನ ನಾಲ್ಕು ದಶಕದ ಕಾವ್ಯ ಅವಲೋಕಿಸಿದಾಗ, ಅವರೊಬ್ಬ ಎಚ್ಚರದ ಕವಿ ಎಂಬುದು ರುಜುವಾತಾದಂತಿದೆ. ಯಾವುದೇ ಎಲ್ಲೆ, ಚೌಕಟ್ಟಿಗೆ ಒಳಪಡದ ಸೀಮಾತೀತ ಕವಿಯಾಗಿದ್ದು, ತಮ್ಮದೇ ಆದ ಕಾವ್ಯ ಮಾರ್ಗವನ್ನು ಅವರು ಕಂಡುಕೊಂಡಿದ್ದಾರೆ ಎಂದರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ
ಡಾ|ಬಸವರಾಜ ಡೋಣೂರ, ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ|ಎಚ್‌.ಟಿ. ಪೋತೆ ಮಾತನಾಡಿದರು. ಪ್ರಾಧ್ಯಾಪಕ ಡಾ|ವಿಕ್ರಮ್‌ ವಿಸಾಜಿ ಪ್ರಾಸ್ತಾವಿಕ ಮಾತನಾಡಿದರು. ಸಿದ್ರಾಮ ಹೊಲ್ಕಲ್‌ ಶ್ರೀಶೈಲ್‌ ನಾಗರಾಳ ಸೇರಿ ಹಲವರು ಪಾಲ್ಗೊಂಡಿದ್ದರು.

ಬಹುತ್ವ ಮತ್ತು ಏಕತ್ವದ ಕುರಿತು ನಮ್ಮಲ್ಲಿ ಇನ್ನೂ ಸ್ಪಷ್ಟತೆಗಳಿಲ್ಲ. ಹೀಗಾಗಿ ದ್ವಂದ್ವಾತ್ಮಕ ಭಾಷೆಗಳನ್ನು ಬಳಸುತ್ತಿದ್ದೇವೆ. ಡೋಂಗಿತನ ಬಹುದೊಡ್ಡದಾಗಿ ಕಾಣುತ್ತಿದೆ. ಆದರೆ, ಏಕತ್ವ ಇಲ್ಲದೆ ಬಹುತ್ವ ಇರಲು ಸಾಧ್ಯವೇ ಇಲ್ಲ.
ಡಾ|ಎಚ್‌.ಎಸ್‌.ಶಿವಪ್ರಕಾಶ,
ಹಿರಿಯ ಕವಿ

ಕನ್ನಡಕ್ಕೆ ವಿಶ್ವಮನ್ನಣೆ ತಂದು ಕೊಟ್ಟವರಲ್ಲಿ ಡಾ|ಎಚ್‌.ಎಸ್‌. ಶಿವಪ್ರಕಾಶ ಕೂಡ ಒಬ್ಬರಾಗಿದ್ದು, ಬಹುತ್ವವನ್ನು ಕಾವ್ಯಾನುಭವವಾಗಿಸಿಕೊಂಡು ಕನ್ನಡದ ಸಮದರ್ಶಿತ್ವವನ್ನು ಪ್ರಕಟಿಸಿದ್ದಾರೆ.
ಪ್ರೊ|ಎಚ್‌.ಟಿ.ಪೋತೆ,
ನಿರ್ದೇಶಕ, ಕನ್ನಡ ಅಧ್ಯಯನ ಸಂಸ್ಥೆ, ಗುವಿವಿ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.