ಕೊನೆಯುಸಿರಲ್ಲೂ ಕಾಂಗ್ರೆಸ್ಗೆ ಮಿಡಿದ ಮನ
Team Udayavani, Aug 9, 2017, 3:24 PM IST
ಕಲಬುರಗಿ: ಕಳೆದ ಜುಲೈ 27ರಂದು ಬೆಳಗ್ಗೆ ಕಲಬುರಗಿಯಿಂದ ಹೈದ್ರಾಬಾದ್ ಮೂಲಕ ಬೆಂಗಳೂರಿಗೆ ತೆರಳಲು ಹೊರಡುತ್ತಿದ್ದೆ,
ಅಂದು ಬೆಳಗ್ಗೆ 7:24 ಧರ್ಮಸಿಂಗ್ ರು ನನಗೆ ಮೊಬೈಲ್ ಕರೆ ಮಾಡಿ ಬಿಹಾರದಲ್ಲಿ ನಿತೀಶಕುಮಾರ ಅವರು ಮಹಾಘಟ ಬಂಧನ್
ಒಡೆದು ಬಿಜೆಪಿ ಜತೆ ಸೇರಿಕೊಂಡು ಸರ್ಕಾರ ರಚಿಸುವ ಬಗ್ಗೆ ಚರ್ಚಿಸಿದರು. ದೇಶದಲ್ಲಿ ಒಂದೊಂದು ರಾಜ್ಯವನ್ನು ಕಾಂಗ್ರೆಸ್ ಪಕ್ಷ ಆಡಳಿತ ಕಳೆದುಕೊಳ್ಳುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದರು. ಇದು ಒಬ್ಬ ವ್ಯಕ್ತಿ ಪಕ್ಷವನ್ನು ನೆಚ್ಚಿಕೊಂಡಿರುವ ಪರಿ ವಿವರಿಸುತ್ತದೆ. ಧರ್ಮಸಿಂಗ್ ಅವರ ಉಸಿರೇ ಕಾಂಗ್ರೆಸ್ ಎನ್ನುವುದನ್ನು ಬಲಪಡಿಸುತ್ತದೆ. ಆಗ ಅವರು ಮಾತನಾಡುವ ಸಂದರ್ಭದಲ್ಲೇ ಧ್ವನಿಯಲ್ಲಿ ಏನೋ ಆತಂಕ ಕಾಡುತ್ತಿತ್ತು. ಇದಾದ ಎರಡು ಗಂಟೆಗಳ ನಂತರ ಅವರ ಸಾವಿನ ಸುದ್ದಿ
ನನ್ನ ಕಿವಿಗೆ ಬೀಳುತ್ತದೆ ಎನ್ನುವುದನ್ನು ಕನಸು ಮನಸ್ಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಅವರ ನಿಧನ ಸುದ್ದಿ ಎದೆ ಒಡೆದಂತೆ ಆಗಿತ್ತು. ತಕ್ಷಣ ವಾಹನ ನಿಲ್ಲಿಸಿ ಅರ್ಧ ಗಂಟೆಗೂ ಹೆಚ್ಚಿನ ಕಾಲ ಬಿಕ್ಕಿ ಅತ್ತಿದ್ದೆ. ಧರ್ಮಸಿಂಗ್ ಅವರು ಓದಿದ್ದು ಹೈದ್ರಾಬಾದ್ನ ಉಸ್ಮಾನಿಯಾ
ವಿವಿಯಲ್ಲಿ ಹಿಂದಿ ಎಂ.ಎ., ಆಗ ವಿವಿಯಲ್ಲಿ ಎಡ ವಿಚಾರಬಾದಿಗಳ ಪ್ರಭಾವ ಬಹಳ ಇತ್ತು. ಎಡ ವಿಚಾರವಾದಿಗಳ ಪ್ರಭಾವಕ್ಕೆ
ಒಳಗಾಗದೆ ಮಾರ್ಕ್ಸ್ವಾದ, ಮಾವೋ ವಿಚಾರಧಾರೆ ಮೈಗೂಢಿಸಿಕೊಂಡಿದ್ದರು. ನಂತರ ಶಹಾಬಜಾರ ದಯಾನಂದ ಹಿಂದಿ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿ ಸೇವೆಗೆ ಸೇರಿಕೊಂಡರು. ಒಂದು ವೇಳೆ ರಾಜಕೀಯಕ್ಕೆ ಬಾರದಿದ್ದರೆ ಶಿಕ್ಷಕರಾಗಿ ನಿವೃತ್ತಿಯಾಗುತ್ತಿದ್ದರು. ಇದನ್ನು
ಅವರು ಆಗಾಗ ಹೇಳುತ್ತಿದ್ದರು. ನಟ ದಿಲೀಪಕುಮಾರ ಅವರನ್ನು ನೆಚ್ಚಿಕೊಂಡಿದ್ದರೆ, ಸಾಹಿತಿಯಾಗಿ ಪ್ರೇಮಚಂದ ಅವರನ್ನು
ಮೆಚ್ಚಿಕೊಂಡಿದ್ದರು. ಪ್ರೇಮಚಂದ ಅವರ ಗೋದಾನ ಕೃತಿಯನ್ನು ಪರಿಣಾಮಕಾರಿಯಾಗಿ ಓದಿದ್ದರು. ಅನೇಕ ಸಲ ಉದಾಹರಿಸುತ್ತಿದ್ದರು. ರಾಷ್ಟ್ರಮಟ್ಟದಲ್ಲಿ ಮಹಾತ್ಮಾಗಾಂಧೀಜಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಲೆನಿನ್ ಅವರನ್ನು ಸಹ ಮೆಚ್ಚಿಕೊಂಡಿದ್ದರು. ಇಷ್ಟದ ಊರು ನೆಲೋಗಿ ಎನ್ನುತ್ತಿದ್ದರು.
ಸಿ.ಬಿ.ಪಾಟೀಲ ಓಕಳಿ, ಕೆಪಿಸಿಸಿ ಕಾರ್ಯದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
MUST WATCH
ಹೊಸ ಸೇರ್ಪಡೆ
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ