ಸಮಾನತೆ ಸಮಾಜ ನಿರ್ಮಾಣಕ್ಕೆ ಮಠಗಳ ಪಾತ್ರ ಹಿರಿದು
Team Udayavani, Feb 5, 2018, 11:25 AM IST
ಮಾದನಹಿಪ್ಪರಗಿ: ಸದೃಢ ಸಮಾಜ ನಿರ್ಮಾಣRಕೆ ಮಠಗಳ ಪಾತ್ರವೂ ತುಂಬಾ ಹಿರಿದಾದು ಎಂದು ಶ್ರೀ ಪರಮಾನಂದ ಸಾಮೀಜಿ ಹೇಳಿದರು.
ಯಳಂಸಗಿ ಗ್ರಾಮದ ಸಿದ್ಧಾರೂಢ ಮಠದಲ್ಲಿ ಸಿದ್ಧಾರೂಢ ಮಹಾಸ್ವಾಮಿಗಳ ಮೂರ್ತಿ ಪ್ರತಿಷ್ಠಾಪನೆ ಹಾಗೂ ಪರಮಾನಂದ ಸ್ವಾಮಿಗಳ ಪಟ್ಟಾ ಧಿಕಾರದ 5ನೇ ವಾರ್ಷಿಕೋತ್ಸವದ ನಿಮಿತ್ತ ನಡೆದ ಸತ್ಸಂಗ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಇಂದಿನ ಸಂಕುಚಿತ ಸಮಾಜ ಬದಲಾಯಿಸುವುದು ತೀರಾ ಅಗತ್ಯವಾಗಿದೆ. ಆಚಾರ ವಿಚಾರ ಸಂಸ್ಕಾರ ತುಂಬಿದ ಸರಳ ಮಾತುಗಳಲ್ಲಿ ಜನರ ಮನಸ್ಸನ್ನು ಗೆದ್ದು ಜಾತಿ ಮತ ಪಂಥ ಎನ್ನದೆ ಎಲ್ಲರನ್ನು ಒಂದೆ ವೇದಿಕೆಯಲ್ಲಿ ಕಂಡ ಬಸವಾದಿ ಪ್ರಮಥರು ಮಾನವ ಸಮುದಾಯಕ್ಕೆ ಹೊಸ ಭಾಷೆ ಬರೆದಿದ್ದಾರೆ. ಸಿದ್ದಾರೂಢರು ಹಾಕಿ ಕೊಟ್ಟ ಆದರ್ಶಗಳ ದಾರಿಯಲ್ಲಿ ನಡೆದರೆ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು. ಪ್ರವಚನ ನೀಡಿದ ಶ್ರೀ ಅಭಿನವ ಶಿವಪುತ್ರ ಸ್ವಾಮೀಜಿ, ಗುರುಗಳಲ್ಲಿ ಯಾರು ಬೇಧಭಾವ ಎಣಿಸಬಾರದು ಎಂದು ಹೇಳಿದರು.
ಮುಚಳಾಂಬದ ಶ್ರೀ ಪ್ರಣಾವನಂದ ಸ್ವಾಮೀಜಿ, ಮುತ್ಯಾನ ಬಬಲಾದ ಗುರುಪಾದ ಸ್ವಾಮೀಜಿ ಮೈಂದರ್ಗಿ ರೇವಣಸಿದ್ದ ಪಟ್ಟದ್ದೇವರು, ಪ್ರಣವನಾಂದ ಸ್ವಾಮೀಜಿ, ಗಣೇಶಾನಂದ ಸ್ವಾಮೀಜಿ, ಗೋಪಾಲಶಾಸ್ತ್ರಿಗಳು, ಸಿದ್ರಾಮಯ್ಯ ಸ್ವಾಮೀಜಿ, ಅರುಣಕುಮಾರ ಪಾಟೀಲ, ಮಲ್ಲಿನಾಥ ನಿಂಬಾಳ ಇದ್ದರು. ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಸರಕಾರಿ ಸೇವೆಗೆ ಸೇರಿದ ಗ್ರಾಮದವರನ್ನು ಹಾಗೂ ಗಣ್ಯ ಅತಿಥಿಗಳನ್ನು ಸನ್ಮಾನಿಸಲಾಯಿತು. ಮುಖಂಡರಾದ ಎಸ್.
ಎಸ್. ಪಾಟೀಲ, ಈರಣ್ಣ ಎಲೆª, ಸಿದ್ರಾಮಯ್ಯಸ್ವಾಮಿ, ಕಾಶಿನಾಥ ಕೊಳ್ಳೆ ಗುರುನಾಥ ಜಲೆ, ಶ್ರೀಮಂತ ಎಲೆ, ಗುರುನಾಥ ಶಿವಪುರೆ, ಶಿವಪುತ್ರ ಜಲೆ, ವೀರಭದ್ರಯ್ಯ ಮಠಪತಿ, ಸೂರ್ಯಕಾಂತ ಎಲೆª ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ