ಮಹಿಳಾ ಕಾನೂನು ದುರ್ಬಳಕೆ ಸಲ್ಲ
Team Udayavani, Feb 8, 2019, 7:24 AM IST
ಆಳಂದ: ಮಹಿಳೆಯರ ಪರ ಕಾನೂನು ಇದೆ ಎಂದು ಕ್ಷುಲ್ಲಕ ಕಾರಣಕ್ಕೆ ಕೋರ್ಟ್, ಕಚೇರಿಗೆ ಬಂದರೆ ಸಮಾಜದ ಸ್ವಾಸಸ್ಥ್ಯ ಹದಗೆಡುತ್ತದೆ. ನಾನು ನನ್ನ ಕುಟುಂಬ, ಗಂಡ, ಮಕ್ಕಳ ಅತ್ತೆ, ಮಾವ, ತಂದೆ, ತಾಯಿ, ಸೋಹದರ ಎಂಬಾರ್ಥದಲ್ಲಿ ನಡೆಯಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಪ್ರಕಾಶ ಸಿ.ಡಿ. ಮಹಿಳೆಯರಿಗೆ ಸಲಹೆ ನೀಡಿದರು.
ಪಟ್ಟಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಆಶ್ರಯದಲ್ಲಿ ಸಂಚಾರಿ ನ್ಯಾಯಾಲಯ ಹಾಗೂ ಸಾಕ್ಷರತಾ ರಥ ಜಾಥಾದ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೌರ್ಜನ್ಯ ಅಥವಾ ಲೈಂಕಿಕ ಕಿರುಕುಳ ಎದುರಾಗುವ ಮೊದಲೇ ಮಹಿಳೆ ಮೆಟ್ಟಿನಿಂತರೆ ಮುಂದಾಗುವ ಪ್ರಕರಣ
ಆರಂಭದಲ್ಲೇ ನಿವಾರಿಸಲು ಸಾಧ್ಯವಿದೆ. ಮಹಿಳೆಗಿದ್ದಷ್ಟು ಕಾಯ್ದೆಗಳು ಪುರುಷರಿಗಿಲ್ಲ. ಒಂದೊಮ್ಮೆ ಪುರುಷರಿಗಿದ್ದಿದ್ದರೆ ಅದೇಷ್ಟೋ ಪ್ರಕರಣಗಳು ದಾಖಲಾಗುತ್ತಿದ್ದವು. ಭ್ರೂಣ ಹತ್ಯೆಯಾಗಲಿ, ವರದಕ್ಷಣೆ ಕಿರುಕುಳ ಎಲ್ಲದಕ್ಕೂ ಮನೆ ಮಹಿಳೆ ಪಾಲಿರುತ್ತದೆ. ಕುಟುಂಬದಲ್ಲಿ ಮಹಿಳೆಯರಿಂದಲೇ ಮಹಿಳೆಯರಿಗೆ ಕಿರುಕುಳ ಹೆಚ್ಚಾಗಿರುತ್ತದೆ. ಒಂದರ್ಥದಲ್ಲಿ ಹೆಣ್ಣಿಗೆ ಹೆಣ್ಣೆ ಶಸುವಾಗಿದ್ದಾಳೆ. ಇಂಥವುಗಳಿಗೆ ಮನ ಪರಿವರ್ತನೆ ಜಾಗೃತಿಯೇ ಅವಶಕವಾಗಿದೆ.
ಮಹಿಳೆಯರು ಧಾರವಾಹಿ ಹಾಗೂ ಮೊಬೈಲ್ ಬಳಕೆ ಬಿಡಬೇಕು. 10ನೇ 12ನೇ ತರಗತಿಗೆ ಬಂದ ಹೆಣ್ಣು ಮಕ್ಕಳ ಬಗ್ಗೆ ಹೆಚ್ಚಿನ ಗಮನ ಕೊಡದೆ ಹೋದರೆ ಮತ್ತೂಬ್ಬರು ಗಮನ ಕೊಡುತ್ತಾರೆ. ಇದರಿಂದ ನ್ಯಾಯಕ್ಕಾಗಿ ಕೋರ್ಟ್ ಕಚೇರಿ ಅಲೆದರೆ ಕುಟುಂಬದ ಮರ್ಯಾದೆ ಹಾಳಾಗುತ್ತದೆ. ನಿಜವಾಗಿಯೂ ಅನ್ಯಾಯ, ಅತ್ಯಾಚಾರವಾಗಿದ್ದರೆ ಕೋರ್ಟ್ಗೆ ಬಂದು ಕಾನೂನು ಸೇವೆ ಮೂಲಕ ನ್ಯಾಯ ಪಡೆಯಬೇಕು ಎಂದು ಹೇಳಿದರು.
ನ್ಯಾಯವಾದಿ ದೇವಾನಂದ ಹೋದಲೂಕರ್, ಹೆಣ್ಣು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಹಾಗೂ ನ್ಯಾಯವಾದಿ ಜೋತಿ ಹಂಚಾಟೆ, ಹೆಣ್ಣು ಮಕ್ಕಳ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಗುರುಪ್ರಸಾದ ಸಿ., ನ್ಯಾಯವಾದಿ ಸಂಘದ ಅಧ್ಯಕ್ಷ ಬಾಬಾಸಾಹೇಬ ವಿ. ಪಾಟೀಲ, ಸರ್ಕಾರಿ ವಕೀಲ ಮುಕುಂದ ದೇಶಪಾಂಡೆ, ಸಂಘದ ಕಾರ್ಯದರ್ಶಿ ಬಿ.ಎಸ್. ನಿಂಬರಗಿ, ಜಿಪಂ ಮಾಜಿ ಸದಸ್ಯೆ ಪೂಜಾ ರಮೇಶ ಲೋಹಾರ, ಬಿ.ಎ. ದೇಶಪಾಂಡೆ, ಡಿ.ಎಸ್. ನಾಡಕರ್, ಅಂಗನವಾಡಿ ಮೇಲ್ವಿಚಾರಕಿ ಮೀನಾಕ್ಷಿ ಹಿರೇಮಠ, ಸೇವಾ ಸಮಿತಿಯ ಬಸವಣ್ಣಪ್ಪ ಬಿ. ಗುಡ್ಡೆವಾಡಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಸಿಡಿಪಿಒ ಶ್ರೀಕಾಂತ ಮೇಂಗಜಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಾದೇವಿ ವಚ್ಛೆ ಪ್ರಾರ್ಥನೆ ಹಾಡಿದರು. ಶಿವಶಂಕರ ಮುನ್ನಳ್ಳಿ ನಿರೂಪಿಸಿದರು. ಮುದ್ದಸರ್ ಮುಲ್ಲಾ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
MUST WATCH
ಹೊಸ ಸೇರ್ಪಡೆ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ