ಸುಗ್ಗಿ ಹಬ್ಬ ಹುತ್ತರಿ ಕೋಲಾಟದ ಸಂಭ್ರಮ


Team Udayavani, Dec 6, 2017, 12:29 PM IST

20.jpg

ಮಡಿಕೇರಿ: ಕೊಡಗಿನ ಸುಗ್ಗಿಯ ಹಬ್ಬ ಪುತ್ತರಿ ಸಂಭ್ರಮಾಚರಣೆಯೊಂದಿಗೆ ಜಿಲ್ಲಾ ಕೇಂದ್ರ ಮಡಿಕೇರಿಯ ಐತಿಹಾಸಿಕ ಕೋಟೆ ಆವರಣದಲ್ಲಿ ನಡೆದ ಪುತ್ತರಿ ಅರಮನೆ ಕೋಲಾಟ್‌ ಶ್ರೀಮಂತ ಸಂಸ್ಕೃತಿಯನ್ನು ಅನಾವರಣಗೊಳಿಸಿತು.
ಕೊಡಗನ್ನಾಳಿದ ಹಾಲೆೇರಿ ರಾಜ ವಂಶಸ್ಥರ ಆಡಳಿತಾವಧಿಯಲ್ಲಿ ಪ‌ುತ್ತರಿ ಹಬ್ಬದ ಬಳಿಕ ಕೋಟೆ ಆವರಣದಲ್ಲಿ ಪ‌ುತ್ತರಿ ಕೋಲಾಟ್‌ ಪಾಂಡೀರ ಕುಟುಂಬಸ್ಥರ ಉಸ್ತುವಾರಿಯಲ್ಲಿ ನಡೆಯುತ್ತಿತ್ತು. ಬ್ರಿಟಿಷರ ಆಳ್ವಿಕೆಯ ಆರಂಭದೊಂದಿಗೆ ಪುತ್ತರಿ ಕೋಲಾಟ್‌ ಕೋಟೆ ಆವರಣದಿಂದ ಗದ್ದುಗೆಗೆ ಸ್ಥಳಾಂತರಗೊಂಡಿತ್ತು. ಇತ್ತೀಚಿನ ವರ್ಷಗಳಲ್ಲಿ ಸಾಂಪ್ರದಾಯಿಕ ಪ‌ುತ್ತರಿ ಕೋಲಾಟ್‌ಗೆ ಪುನಶ್ಚೇತನ ನೀಡಿ, ಹಿಂದಿನಂತೆಯೆ ನಡೆಸುವ ಪರಿಪಾಠವನ್ನು ಆರಂಭಿಸಲಾಗಿದ್ದು, ಅದರಂತೆ ಇಂದು ಕೋಟೆ ಆವರಣದಲ್ಲಿ 7ನೇ ವರ್ಷದ ಪ‌ುತ್ತರಿ ಕೋಲಾಟ್‌ ಸಂಭ್ರಮ ಪಸರಿಸಿತು.

 ಜಿಲ್ಲಾಡಳಿತ, ಶ್ರೀ ಓಂಕಾರೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಆಡಳಿತ ಮಂಡಳಿಯ ಸಹಕಾರದೊಂದಿಗೆ ಪಾಂಡೀರ ಕುಟುಂಬಸ್ಥರ ವತಿಯಿಂದ ಆಯೋಜಿತ ಅರಮನೆ ಕೋಲಾಟ್‌ಗೆ ಜ್ಯೋತಿ ಬೆಳಗುವ ಮೂಲಕ ಶಾಸಕ ರಾದ ಕೆ.ಜಿ. ಬೋಪಯ್ಯ, ಎಂಎಲ್‌ಸಿಗಳಾದ ಸುನಿಲ್‌ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿಗಳಾದ ಡಾ| ರಿಚರ್ಡ್‌ ವಿನ್ಸೆಂಟ್‌ ಡಿ’ಸೋಜ, ಎಡಿಸಿ ಸತೀಶ್‌ ಕುಮಾರ್‌, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರಾದ ಕೆ.ಎಸ್‌. ದೇವಯ್ಯ ಮೊದಲಾದ ಗಣ್ಯರು ಚಾಲನೆ ನೀಡುವುದರೊಂದಿಗೆ ದುಡಿಯ ನಾದಕ್ಕೆ ತಕ್ಕಂತೆ ಕೋಲಾಟ್‌ ಪ್ರದರ್ಶನ ಆಕರ್ಷಕವಾಗಿ ಅನಾವರಣಗೊಂಡಿತು.

ಪುತ್ತರಿ ಕೋಲಾಟ್‌ ಈ ಬಾರಿ ಅನಿವಾರ್ಯ ಕಾರಣಗಳ ಹಿನ್ನೆಲೆಯಲ್ಲಿ ಪಾಂಡೀರ ಕುಟುಂಬಸ್ಥರ ಸಮಕ್ಷಮದಲ್ಲಿ ಚೆಟ್ಟಿàರ ಕುಟುಂಬಸ್ಥರ ನೇತೃತ್ವದಲ್ಲಿ ನಡೆಯಿತು. ಪಾಂಡೀರ ಕುಟುಂಬಸ್ಥರು ಶುಭಕಾರ್ಯಗಳನ್ನು ನಡೆಸಲಾಗದ ಸಂದರ್ಭಗಳಲ್ಲಿ ಈ ಹಿಂದಿನಿಂದಲೂ ಚೆಟ್ಟಿàರ ಕುಟುಂಬಸ್ಥರು ಪಾಂಡೀರ  ಕುಟುಂಬ ನಿರ್ವಹಿಸಬೇಕಾದ ಕಾರ್ಯ ವನ್ನು ನಡೆಸಿಕೊಂಡು ಬರುವುದು ಸಾಮಾನ್ಯವಾಗಿದೆಯೆಂದು ಪಾಂಡೀರ ಮುತ್ತಣ್ಣ ತಿಳಿಸಿದರು.

ಸಾಂಸ್ಕೃತಿಕ ವೈಭವ

ಸಾಂಪ್ರದಾಯಿಕ ಉಡುಪಿನೊಂದಿಗೆ ದುಡಿಯ ನಾದಕ್ಕೆ ತಕ್ಕಂತೆ ಮಡಿಕೇರಿ ಕೊಡವ ಸಮಾಜ ತಂಡಗಳು ನಡೆಸಿಕೊಟ್ಟ ಕೋಲಾಟ್‌, ಬೊಳಕಾಟ್‌, ಸಮರ ಕಲೆಯಾದ ಪರೆಯ ಕಳಿ, ಮಹಿಳೆಯರ ಉಮ್ಮತ್ತಾಟ್‌ ಕೊಡಗಿನ ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸಿತು.

ಕೋಲಾಟ್‌ನ ಅಂತ್ಯದಲ್ಲಿ ಪಾಂಡೀರ ಕುಟುಂಬದ ಪ್ರಮುಖರನ್ನು ಜಿಲ್ಲಾಧಿಕಾರಿ ಗಳಾದ ಡಾ| ರಿಚರ್ಡ್‌ ವಿನ್ಸೆಂಟ್‌ ಡಿ’ಸೋಜ ಗೌರವಿಸಿದರು.

ಪುತ್ತರಿ ಕೋಲಾಟ್‌ ಆರಂಭಕ್ಕೂ ಮುನ್ನ ಪಾಂಡೀರ ಕುಟುಂಬಸ್ಥರ ಪರವಾಗಿ ಚೆಟ್ಟಿàರ ಕುಟುಂಬಸ್ಥರು ಶ್ರೀ ಕೋಟೆ ಗಣಪತಿಗೆ ವಿಶೇಷ ಪ‌ೂಜೆಯನ್ನು ಸಲ್ಲಿಸಿದರು.

ವಿಶಿಷ್ಟ ಕಾರ್ಯಕ್ರಮದಲ್ಲಿ ಪಾಂಡೀರ ಕುಟುಂಬದ ಪಟ್ಟೆದಾರ ಪಾಂಡೀರ ಮೇದಪ್ಪ, ತಕ್ಕ ಮುಖ್ಯಸ್ಥ ಪಾಂಡೀರ ಮೊಣ್ಣಪ್ಪ, ಪಾಂಡೀರ ಕುಟುಂಬದ ಅಧ್ಯಕ್ಷ ಪಾಂಡೀರ ಕರುಂಬಯ್ಯ, ದಿನದ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಚೆಟ್ಟಿàರ ಕುಟುಂಬದ ಚೆೆಟ್ಟಿàರ ನಂಜಪ್ಪ, ಚೆಟ್ಟಿàರ ಮಾದಪ್ಪ, ಚೆಟ್ಟಿàರ ಕಾರ್ಯಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಬಿ.ಎಸ್‌.ತಮ್ಮಯ್ಯ, ಶ್ರೀ ಓಂಕಾರೇಶ್ವರ ದೇವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ರಮೇಶ್‌ ಹೊಳ್ಳ, ಸಮಿತಿಯ ಆಡಳಿತಾಧಿಕಾರಿ  ಸಂಪತ್‌ ಕುಮಾರ್‌ ಸೇರಿದಂತೆ ಹಲ ಗಣ್ಯರು ಪಾಲ್ಗೊಂಡಿದ್ದರು.

ಹೆಜ್ಜೆ ಹಾಕಿದ ಶಾಸಕರು
ಕೋಲಾಟ್‌ ಕಾರ್ಯಕ್ರಮದ ಸಮಾರೋಪದ ಬಳಿಕ ಕೊಡಗಿನ ಸಾಂಪ್ರದಾಯಿಕ ಓಲಗಕ್ಕೆ ಶಾಸಕ ಕೆ.ಜಿ. ಬೋಪಯ್ಯ, ಎಂಎಲ್‌ಸಿ ಸುನಿಲ್‌ ಸುಬ್ರಮಣಿ, ಜಿಲ್ಲಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳು ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದರು. 

ನಾಲ್ಕು ನಾಡಿನಲ್ಲಿ  ಸಂಭ್ರಮದ ಹುತ್ತರಿ

ಹುತ್ತರಿಯನ್ನು ನಾಲ್ಕುನಾಡು ನಾಪೋಕ್ಲು ವಿನಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ನಾಲ್ಕುನಾಡು ವ್ಯಾಪ್ತಿಯ ಕೊಳಕೇರಿ, ಕಕ್ಕಬ್ಬೆ, ಪಾಲೂರು, ನೆಲಜಿ ಗ್ರಾಮಗಳಲ್ಲಿ ಹುತ್ತರಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸುವ ಮೂಲಕ ಗ್ರಾಮಸ್ಥರು ಅರ್ಥಪೂರ್ಣಗೊಳಿಸಿದರು.

 ಕೊಡಗಿನ ಜನರ ಆರಾಧ್ಯ ದೈವ ಪಾಡಿ ಶ್ರೀಇಗ್ಗುತ್ತಪ್ಪ ದೇವಾಲಯದಲ್ಲಿ ನಡೆದ ಹುತ್ತರಿ ಹಬ್ಬಕ್ಕೆ ಗ್ರಾಮಸ್ಥರು ಸಾಕ್ಷಿಯಾದರು. ದೇವಾಲಯದ ಸುತ್ತಮುತ್ತಲ ಗ್ರಾಮಸ್ಥರು ತಳಿಯಕ್ಕಿ ಬೊಳಕ್‌ನೊಂದಿಗೆ ದೇವಾಲಯಕ್ಕೆ ಆಗಮಿಸಿ ದುಡಿಕೊಟ್‌ಪಾಟ್‌ ನುಡಿಸಿ ಬಳಿಕ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸಾಂಪ್ರದಾಯಿಕ ಕೊಡವ ಉಡುಪಿನಲ್ಲಿ ಗದ್ದೆಗೆ ತೆರಳಿದ ಗ್ರಾಮಸ್ಥರು ವಿವಿಧ ವಿಧಿ ವಿಧಾನಗಳನ್ನು ನೆರವೇರಿಸಿ ನಿಗದಿತ ಸಮಯದಲ್ಲಿ ಕುಶಾಲು ತೋಪು ಸಿಡಿಸಿ ಪೊಲಿ ಪೊಲಿಯೇ ಬಾ ಉದ್ಘೋಷದೊಂದಿಗೆ ಕದಿರನ್ನು ಕೊಯ್ಯಲಾಯಿತು.

ದೇವಾಲಯಕ್ಕೆ ಆಗಮಿಸಿದ ಭಕ್ತರು ಪ್ರದಕ್ಷಿಣೆ ಬಂದು ಕದಿರನ್ನು ನಮಸ್ಕಾರ ಮಂಟಪದಲ್ಲಿರಿಸಿ ಧಾನ್ಯಲಕ್ಷಿ¾ಗೆ ಪೂಜೆಯನ್ನು ಸಲ್ಲಿಸಿದರು.

 ನಾಪೋಕ್ಲು ಕೊಡವ ಸಮಾಜದ ವತಿಯಿಂದ ಕೂಡ ಸಾಂಪ್ರದಾಯಿಕ ಹುತ್ತರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. 

ಕಾಟಕೇರಿ: ಸಂಭ್ರಮದ ಹುತ್ತರಿ ಆಚರಣೆ

ವಿಶಿಷ್ಟ ಹಾಗೂ ವಿಭಿನ್ನ ಸಂಸ್ಕೃತಿಯನ್ನು ಹೊಂದಿರುವ ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದಾದ ಧಾನ್ಯಲಕ್ಷಿಯನ್ನು ಮನೆಗೆ ಬರಮಾಡಿಕೊಳ್ಳುವ ಹುತ್ತರಿ ಹಬ್ಬವನ್ನು ಕಾಟಕೇರಿಯ ಪ್ರಮೀಳ ನಂದಕುಮಾರ್‌ ಅವರ  ಗದ್ದೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಗ್ರಾಮಸ್ಥರು ಧಾನ್ಯಲಕ್ಷ್ಮೀ ಕದಿರನ್ನು ಮನೆಗೆ ಕೊಂಡೊಯ್ದು ವಿಶೇಷ ಪೂಜೆ ಸಲ್ಲಿಸಿದರು. 

ಟಾಪ್ ನ್ಯೂಸ್

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.