ಓಡಾಡದಂತಾದ ಗ್ರಾಮೀಣ ಭಾಗದ ರಸ್ತೆಗಳು
Team Udayavani, Sep 5, 2022, 2:49 PM IST
ಬಂಗಾರಪೇಟೆ: ತಾಲೂಕು ಕೇಂದ್ರ ಸ್ಥಾನದಿಂದ ಇತಿಹಾಸ ಪ್ರಸಿದ್ಧ ಹೈದರಾಲಿ ಹುಟ್ಟಿದ ಬೂದಿಕೋಟೆಯಿಂದ ತಮಿಳುನಾಡು ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮಗಳ ಮಾರ್ಗ ಹಾಗೂ ಬಂಗಾರಪೇಟೆ-ಕಾಮಸಮುದ್ರ ಮಾರ್ಗದ ಮೂಲಕ ತಮಿಳುನಾಡು ಗಡಿಭಾಗಕ್ಕೆ ಹೋಗುವಂತಹ ಈ ರಸೆಗಳು ಸುಮಾರು ಐದಾರು ವರ್ಷಗಳಿಂದಲೂ ಅಭಿವೃದ್ಧಿಯಾಗದೆ ಹಾಗೇ ಉಳಿದಿವೆ.
ತಾಲೂಕಿನ ಬಲಮಂದೆ ಗ್ರಾಪಂ ವ್ಯಾಪ್ತಿಯ ಕೊಳಮೊರು ಗ್ರಾಮದಿಂದ ತಮಿಳುನಾಡಿಗೆ ಹೋಗುವ ರಸ್ತೆ ಸುಮಾರು ದಿನಗಳಿಂದ ಹದಗೆಟ್ಟಿದ್ದು ರಾಜಕಾರಣಿಗಳಿಗೆ, ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಹ ರಸ್ತೆ ದುರಸ್ತಿ ಕಾರ್ಯ ಮರೀಚಿಕೆಯಾಗಿದೆ. ಗುರುವಾರಬೆಳಗಿನ ಜಾವ ಟೊಮೆಟೋ ಹಾಕಿಕೊಂಡು ರಸ್ತೆಯಲ್ಲಿ ಹೋಗುತ್ತಿದ್ದ ವಾಹನ ಬಿದ್ದು ವಾಹನ ಚಾಲಕ ಸಾವಿನಿಂದ ಪಾರಾಗಿದ್ದಾನೆ. ತಮಿಳುನಾಡು ಗಡಿ ಯಾವ ಕಡೆ ವಾಹನಗಳು ಹೊಗಲು ರಸ್ತೆ ದುರಸ್ತಿ ಮಾಡುವವರೆಗೂ ಸಾಧ್ಯವೇ ಇಲ್ಲ. ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ರಸ್ತೆಯಲ್ಲಿ ಹೆಚ್ಚಾಗಿ ಭಾರೀ ತೂಕ ಹೊತ್ತ ವಾಹನಗಳು ಓಡಾಡುವುದರಿಂದ ಕಿತ್ತುಹೋಗಿರುವ ರಸ್ತೆಯು ಇನ್ನೂ ಹೆಚ್ಚಾಗಿ ಹದೆಗೆಟ್ಟಿರುವುದಕ್ಕೆಸಾಕ್ಷಿಯಾಗಿದೆ. 10 ವರ್ಷಗಳಿಂದ ಡಾಂಬರು ಹಾಗೂ ಪ್ಯಾಚ್ ವರ್ಕ್ ಕಾಣದ ಈ ರಸ್ತೆಯಉದ್ದಕ್ಕೂ ಹಳ್ಳ ಗುಂಡಿಗಳು ಸಾರ್ವಜನಿಕರು ದ್ವಿಚಕ್ರಹಾಗೂ ಇತರೆ ಯಾವುದೇ ವಾಹನಗಳು ಓಡಾಡಲುಸಾಧ್ಯವೇ ಇಲ್ಲದಂತಾಗಿದೆ.
ಸಾರ್ವಜನಿಕರಿಗೆ ತೀವ್ರ ಅನುಕೂಲವಾಗಿರುವ ಈ ರಸ್ತೆಯು ಜನಪ್ರತಿನಿಧಿಗಳು ಹಾಗೂ ಇಲಾಖೆಯಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದೇ ಇರುವುದರಿಂದ ಮಳೆಗಾಲ ಪ್ರಾರಂಭಗೊಂಡರೆ ದ್ವಿಚಕ್ರ ವಾಹನಗಳು ಸೇರಿದಂತೆ ವಾಹನಗಳು ಓಡಾಡಲು ತೀವ್ರ ಕಷ್ಠವೇ ಆಗಿದ್ದರೂ ಜನಪ್ರತಿನಿಧಿಗಳು ಜಾಣಮೌನ ವಹಿಸಿದ್ದಾರೆ.
ತಾಲೂಕಿನ ಕಳೆದ 3 ವರ್ಷಗಳಿಂದ ಪ್ರತಿವರ್ಷವೂ ಮಳೆ ಬರುತ್ತಿದೆ. ಈ ವೇಳೆ ರಸ್ತೆಗಳ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ದಶಕದ ಹಿಂದೆ ಈ ಮಾರ್ಗಗಳಲ್ಲಿನಿರ್ಮಾಣ ಮಾಡಿರುವ ಮೋರಿಗಳು ತೀರಾ ಹದೆಗೆಟ್ಟಿದ್ದರೂ ಯಾವ ಅಧಿಕಾರಿಗಳೂ ಕ್ರಮಕೈಗೊಂಡಿಲ್ಲ ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ತಾಲೂಕಿನ ಗಡಿಭಾಗವಾಗಿರುವ ಕಾಮಸಮುದ್ರ ಹೋಬಳಿಯ ರಸ್ತೆಗಳಲ್ಲಿ ಓಡಾಡುವವರ ಸಂಖ್ಯೆ ಹೆಚ್ಚಾಗಿದ್ದರೂ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಿಲ್ಲ.ವಿದ್ಯಾರ್ಥಿಗಳು ಹಾಗೂ ಜನರು ಓಡಾಡಲುತೀವ್ರ ಕಷ್ಠವೇ ಆಗಿದೆ. ಮಳೆ ಬಂದರೆ ರಸ್ತೆಗಳೇ ಕೆರೆಯಂತಾಗುತ್ತಿವೆ. -ಶ್ರೀರಾಮ್ ವಿರಾಟ್, ಸ್ಥಳೀಯರು,
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್
MUST WATCH
ಹೊಸ ಸೇರ್ಪಡೆ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ