ರೋಟರಿ ಜತೆ ಕೋಟಿ-ನಾಟಿ ಕಾರ್ಯಕ್ರಮ ಯಶಸ್ವಿಗೊಳಿಸಿ
ಪ್ರತಿ ಗ್ರಾಮ ಪಂಚಾಯಿತಿಗೆ ಸಾವಿರ ಸಸಿ ನೆಡಿ: ಜಿಪಂ ಸಿಇಒ ಜಗದೀಶ್
Team Udayavani, May 1, 2019, 2:14 PM IST
ಕೋಲಾರ ಜಿಪಂ ಸಿಇಒ ಜಿ.ಜಗದೀಶ್ ಮಂಗಳವಾರ ನಗರದ ತಮ್ಮ ಕಚೇರಿಯಲ್ಲಿ ನಡೆದ ಕೋಟಿ-ನಾಟಿ ಕಾರ್ಯಕ್ರಮದಲ್ಲಿ ಪುಸಕ್ತ ಬಿಡುಗಡೆ ಮಾಡಿದರು.
ಕೋಲಾರ: ರೋಟರಿ ಸಂಸ್ಥೆ ಸಹಯೋಗದಲ್ಲಿ ನಡೆಸಲಾಗುತ್ತಿರುವ ಕೋಟಿ-ನಾಟಿ ಕಾರ್ಯಕ್ರಮವು ಕಳೆದ ಬಾರಿ ಯಶಸ್ವಿಯಾಗಿದ್ದು, ಈ ಬಾರಿಯೂ ಪ್ರತಿ ಗ್ರಾಪಂನಲ್ಲಿ 1000 ಗುಂಡಿಗಳನ್ನು ತೋಡಿ ಸಸಿ ನೆಡುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಜಿಪಂ ಸಿಇಒ ಜಿ.ಜಗದೀಶ್ ಸೂಚಿಸಿದರು.
ನಗರದ ತಮ್ಮ ಕಚೇರಿಯಲ್ಲಿ ಮಂಗಳವಾರ ನಡೆದ ಕೋಟಿ-ನಾಟಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಸಿಗಳನ್ನು ಹಾಕಿ ಕೈಬಿಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಸರಕಾರಿ ಸ್ಥಳಗಳು, ರಸ್ತೆ ಬದಿ, ಶಾಲಾ ಆವರಣ ಸೇರಿದಂತೆ ಇನ್ನಿತರೆ ಸ್ಥಳಗಳಲ್ಲಿಯೂ ಸಸಿ ನೆಟ್ಟು ಪೋಷಿಸಬೇಕಾಗಿದ್ದು, ಅದಕ್ಕಾಗಿ ನೋಡೆಲ್ ಅಧಿಕಾರಿಗಳನ್ನು ಈ ಕೂಡಲೇ ನೇಮಿಸಿ 2 ದಿನಗಳ ಒಳಗೆ ವರದಿ ಸಲ್ಲಿಸುವಂತೆ ತಾಪಂ ಇಒಗಳಿಗೆ ಸೂಚಿಸಿದರು.
ಕೋಲಾರವು ಬರಡು ಭೂಮಿಯಾಗುವುದನ್ನು ತಪ್ಪಿಸಲು ನರೇಗಾ ಯೋಜನೆಯೊಂದೇ ದಾರಿಯಾಗಿದೆ. ಅಲ್ಲದೆ, ಕೋಟಿ ನಾಟಿ ಆರಂಭಕ್ಕೂ ಸರಿಯಾದ ಸಮಯವಾಗಿದೆ. ಈಗಾಗಲೇ ನರೇಗಾ ಯೋಜನೆಯಡಿ 140 ಕೋಟಿ ರೂ.ನಲ್ಲಿ ಶೇ.61 ಹಣವನ್ನು ನೀರಿನ ಮೂಲಗಳ ಸಂರಕ್ಷಣೆಗೆ ವ್ಯಯ ಮಾಡಲಾಗಿದೆ. ಜಲಾಮೃತದಲ್ಲಿ ಒಂದು ಭಾಗವಾಗಿರುವ ಹಸಿರೀಕರಣವನ್ನು ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು.
ಪ್ರಚಾರ ನೀಡೋಣ: ಈಗಾಗಲೇ 25 ಲಕ್ಷ ಸಸಿಗಳನ್ನು ಯಶಸ್ವಿಯಾಗಿ ನೆಡಲಾಗಿರುವಂತೆಯೇ ಈ ಬಾರಿಯೂ ಕ್ರಮಕೈಗೊಳ್ಳಬೇಕಿದೆ. ಅಗತ್ಯವಿದ್ದರೆ ಬೇರೆ ಜಿಲ್ಲೆಗಳಿಂದಲೂ ಪಡೆದುಕೊಳ್ಳೋಣ ಎಂದ ಅವರು, ಡೆಲ್ಲಿ ಮಾದರಿ ಶಿಕ್ಷಣವನ್ನು ಜಾರಿ ಮಾಡಲು ಸದ್ಯದಲ್ಲೇ ಕಾರ್ಯಾಗಾರ ನಡೆಯಲಿದ್ದು, ಅಲ್ಲಿಯೂ ಸಹ ಕೋಟಿ-ನಾಟಿ ಬಗ್ಗೆ ಹೆಚ್ಚಿನ ಪ್ರಚಾರ ನೀಡೋಣ ಎಂದರು.
ಜಿಲ್ಲಾದ್ಯಂತ 22 ಲಕ್ಷ ಸಸಿ ನೆಡಲು ಸಂಕಲ್ಪ ನಿವೃತ್ತ ಐಎಎಸ್ ಅಕಾರಿ ಅಮರನಾರಾಯಣ ಮಾತನಾಡಿ, 22 ಲಕ್ಷ ಸಸಿಗಳನ್ನು ಈ ಬಾರಿ ನೆಡಲು ಪಣತೊಟ್ಟಿದ್ದು, ಅದಕ್ಕಾಗಿ ಅರಣ್ಯ ಇಲಾಖೆಯ ಜತೆಗೆ ತೋಟಗಾರಿಕೆ, ರೇಷ್ಮೆ ಇಲಾಖೆಗಳನ್ನು ಒಗ್ಗೂಡಿಸಿಕೊಳ್ಳಲಾಗಿದೆ ಎಂದರು.
ಹಸಿರು ಮಾಸಾಚರಣೆ: ಕೋಟಿ ನಾಟಿ ಕುರಿತಾಗಿ ಪುಸ್ತಕ ಅಲ್ಲದೆ ಸಿನಿಮಾಮಂದಿರ, ಯೂಟ್ಯೂಬ್, ಕೇಬಲ್ ಚಾನಲ್ಗಳ ಮೂಲಕವೂ ಪ್ರಚಾರ ನೀಡಲು ಕ್ರಮಕೈಗೊಳ್ಳಲಾಗಿದೆ. ಈ ಕಾರ್ಯವನ್ನು ಪ್ರತಿ ಗ್ರಾಪಂ, ಗ್ರಂಥಾಲಯಗಳಲ್ಲಿಯೂ ನಡೆಸಲಾಗುವುದು. ಒಟ್ಟಾರೆ ಜೂನ್ ತಿಂಗಳನ್ನು ಹಸಿರುಮಾಸವನ್ನಾಗಿ ಆಚರಿಸಲು ಸಿದ್ಧತೆಗಳನ್ನು ನಡೆಸಲಾಗಿದೆ ಎಂದರು.
ರೋಟರಿ ಸಂಸ್ಥೆಯು ಸತತ 35 ವರ್ಷಗಳ ಪ್ರಯತ್ನದಿಂದ ಪೋಲಿಯೋವನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಲಾಗಿದ್ದು, ಅಂತೆಯೇ ಹಸಿರೀಕರಣವನ್ನು ಈ ಭಾಗದಲ್ಲಿ ಮಾಡಬೇಕಾಗಿದೆ. ಅದಕ್ಕಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ಅರಣ್ಯ, ತೋಟಗಾರಿಕೆ, ರೇಷ್ಮೆ ಇಲಾಖೆ ಅಧಿಕಾರಿಗಳು, ತಾಪಂ ಇಒಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
MUST WATCH
ಹೊಸ ಸೇರ್ಪಡೆ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ