ಸಮಾನತೆ, ಶಾಂತಿ ಬಯಸುವುದೇ ವೀರಶೈವ ಧರ್ಮ


Team Udayavani, Sep 12, 2022, 2:34 PM IST

tdy-11

ಬಂಗಾರಪೇಟೆ: ಸಮಾಜದಲ್ಲಿ ಜಾತಿ, ಮತ, ಧರ್ಮ, ಗಂಡು-ಹೆಣ್ಣು, ಬಡವ-ಶ್ರೀಮಂತ ಎಂಬ ಭೇದ ಭಾವವಿಲ್ಲದೆ ಮಾನವಧರ್ಮಕ್ಕೆ ಜಯವಾಗಲಿ, ವಿಶ್ವ ಸಮುದಾಯ ಶಾಂತಿಯಿಂದ ಜೀವಿಸುವಂತಾಗಲಿ ಎಂದು ಹಾರೈಸುವ ಏಕೈಕ ಧರ್ಮ ವೀರಶೈವ ಎಂದು ಬ್ರಾಹ್ಮಿಶ್ರೀ ತೇಜೇಷಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಯಳಬುರ್ಗಿ ಗ್ರಾಮದಲ್ಲಿ ಗ್ರಾಮೀಣ ವೀರೇಶೈವ ಲಿಂಗಾಯತ ಸಂಘದಿಂದ ನಡೆದ ತಾಲೂಕು ಮಟ್ಟದ ಸಮಾವೇಶದಲ್ಲಿ ಮಾತನಾಡಿ, ಪರಮಶಿವನ ಪ್ರತಿರೂಪವಾಗಿ ಲಿಂಗಾಯುತ ಧರ್ಮ ಭೂಮಂಡಲದಲ್ಲಿ ಸ್ಥಾಪಿತವಾಗಿದೆ ಎಂದರು.

3 ಶತಮಾನಗಳ ಹಿಂದೆ ಸ್ಥಾಪಿತವಾದ ವೀರಶೈವ ಲಿಂಗಾಯತ ಧರ್ಮ ತನ್ನದೆ ಆದ ಇತಿಹಾಸ ಹೊಂ ದಿದೆ. ಭೂಮಂಡಲದಲ್ಲಿ ಕೊಲೆ, ಸುಲಿಗೆ, ದರೋಡೆ, ಅಂಧಕಾರ, ಮೂಢನಂಬಿಕೆ, ಲಿಂಗ ತಾರತಮ್ಯ, ಜಾತಿ ವ್ಯವಸ್ಥೆ, ಹೀಗೆ ಅನಿಷ್ಠ ಪದ್ಧತಿಗಳು ತಾಂಡವಾಡುತ್ತಿವೆ. ಇದರಿಂದ ರೋಸಿ ಹೋಗಿದ್ದ ಭೂದೇವಿ ಸಾಕ್ಷಾತ್‌ ಪರಶಿವನನ್ನು ಜಗತ್ತನ್ನು ರಕ್ಷಿಸುವಂತೆ ಬೇಡಿಕೊಂಡಳು. ಆಗ ಪರಮಶಿವರು ರೇಣುಕಾಧಿ ಪಂಚಾಚರ್ಯರ ರೂಪದಲ್ಲಿ ಜನಿಸಿದರು ಎಂದು ಹೇಳಿದರು.

ಸಾಮರಸ್ಯ ಬದುಕಿಗೆ ನಾಂದಿ: ಇವರಲ್ಲಿ ಮೊದಲನೆ ಯವರು ರೇಣುಕಾಚಾರ್ಯ, ಏಕೋರಾದಯಾಚಾರ್ಯ, ಆಗ್ರಾಚಾರ್ಯ, ಪಂಡಿತಾರಾಧ್ಯರು ಹಾಗೂ ವಿಶ್ವಾರಾಧ್ಯರ ರೂಪದಲ್ಲಿ ಅವತಾರ ಎತ್ತಿ ಅಂಧಕಾರದಲ್ಲಿ ಮುಳುಗಿದ ಮನುಕುಲವನ್ನು ಸನ್ಮಾರ್ಗವೆಂಬ ಬೆಳಕಿನ ಕಡೆಗೆ ಕರೆದುಕೊಂಡು ಬರುವ ಕೆಲಸವನ್ನು ಮಾಡಿ ಸಾಮರಸ್ಯ ಬದುಕಿಗೆ ನಾಂದಿ ಹಾಡಿದರು ಎಂದು ವಿವರಿಸಿದರು.

ಜಾತಿ ಪದ್ಧತಿ ವಿರುದ್ಧ ಹೋರಾಟ: ವೀರಶೈವ ಎಂದರೆ ಲಿಂಗ, ಅಂಗ ಸಾಮರಸ್ಯ ಅಳವಡಿಸಿಕೊಂಡು ಲಿಂಗ ಧಾರಣೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವವನೇ ವೀರಶೈವ ಲಿಂಗಾಯತ, ಬಸವಣ್ಣನವರು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿ, ಅವರ ಸಹೋದರಿಗೆ ಸಮಾನ ಸ್ಥಾನ ಮಾನ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಲಿಂಗ ತಾರತಮ್ಯ, ಅಸ್ಪೃಶ್ಯತೆ ದೂರ ಮಾಡುವ ನಿಟ್ಟಿನಲ್ಲಿ ಕಲ್ಯಾಣ ಕ್ರಾಂತಿಯನ್ನೇ ಉಂಟು ಮಾಡಿ, ಜಾತಿ ಪದ್ಧತಿ ವಿರುದ್ಧ ಹೋರಾಡಿದ ಮಹಾನ್‌ ಚೇತನರಾಗಿದ್ದಾರೆ ಎಂದು ಹೇಳಿದರು.

ವಿಶ್ವಕ್ಕೆ ಮಾದರಿಯಾಗಬೇಕು: ಬಸವಣ್ಣರನ್ನು ವಚನ ದಂತೆ ಜಗತ್ತಿನಲ್ಲಿ ಕುಲ ಎಂಬುವುದೇ ಇಲ್ಲ, ಪ್ರತಿ ಯೊಬ್ಬರೂ ನಮ್ಮವರೇ ಆಗಿದ್ದಾರೆ. ಪರಮೇಶ್ವರನನ್ನು ಆರಾಧಿಸುವವರಾಗಿದ್ದಾರೆ. ವೀರಶೈವ ಲಿಂಗಾಯತ ಧರ್ಮವು ಅನೇಕ ಮಠಗಳನ್ನು ಸ್ಥಾಪಿಸಿ ವಿದ್ಯಾದಾನ, ಅನ್ನದಾನ ಮಾಡುವುರೊಂದಿಗೆ ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಕ್ಷೇತ್ರಗಳಲ್ಲಿ ಉದ್ಯೋನ್ಮುಖವಾಗಿ ಪ್ರಜ್ವಲಿಸುತ್ತಿದೆ. ಇಂತಹ ಸಮಾಜದಲ್ಲಿ ಜನಿಸಿದ ನಾವು ಒಗ್ಗಟ್ಟಿನಿಂದ ಇಡೀ ವಿಶ್ವಕ್ಕೆ ಮಾದರಿಯಾಗಬೇಕು ಎಂದು ಆಶೀ ರ್ವಚನ ನೀಡಿದರು.

ಐಕ್ಯಮತದೊಂದಿಗೆ ಒಟ್ಟಾಗಿ ನಿಲ್ಲಿ: ಇತ್ತೀಚಿನ ದಿನಗಳಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ವೀರಶೈವ ಲಿಂಗಾಯತ ಧರ್ಮದಲ್ಲಿ ಅನೇಕ ಉಪ ಜಾತಿಗಳನ್ನಾಗಿ ವಿಂಗಡಿಸಿ ಧರ್ಮ ಒಡೆ ಯುವ ಕೆಲಸ ಮಾಡುವುದರೊಂದಿಗೆ ನಮ್ಮಲ್ಲಿಯೇ ದ್ವೇಷ ಮತ್ತು ಅಸೂಯೆ ಹುಟ್ಟಿಸುತ್ತಿದ್ದಾರೆ. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಸಮುದಾಯದ ಯಾರೊ ಬ್ಬರೂ ಧೃತಿಗೆಡದೆ ಐಕ್ಯಮತದೊಂದಿಗೆ ಒಟ್ಟಾಗಿ ನಿಲ್ಲಬೇಕು ಎಂದು ಹೇಳಿದರು.

ಧರ್ಮದ ಉನ್ನತಿಗೆ ಕೊಡುಗೆ: ಪ್ರತಿಯೊಬ್ಬರು ಬಸವಣ್ಣನವರ ಹಾದಿಯಂತೆ ಒಂದೇ ಕುಲ, ಧರ್ಮ, ಜಾತಿ ಎಂಬಂತೆ ಸಾಗೋಣ ಎಂದು ಕರೆ ನೀಡಿದ ಅವರು, ತಾಲೂಕಿನಲ್ಲಿ ವೀರಶೈವ ಲಿಂಗಾಯತ ಸಮು ದಾಯವು ಧರ್ಮದ ಉನ್ನತಿಗಾಗಿ ತನ್ನದೇ ಆದಂತಹ ಕೊಡುಗೆ ನೀಡುತ್ತಿರುವುದು ಪ್ರಶಂಸನೀಯ ಎಂದು ಸ್ವಾಮೀಜಿ ತಿಳಿಸಿದರು. 2021-22ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುನಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಕಾರ್ಯ ಕ್ರಮದಲ್ಲಿ ಉಪತಹಶೀಲ್ದಾರ್‌ ಮುಕ್ತಾಂಭಾ, ಎಪಿಎಂಸಿ ಮಾಜಿ ನಿರ್ದೇಶಕ ಜಿ.ಎಸ್‌.ಶಿವಶಂಕರ್‌, ಪುರಸಭೆ ಮಾಜಿ ಸದಸ್ಯ ಶಿವಕುಮಾರ್‌, ಮಾಗೇರಿ ನಟರಾಜ್‌, ರಾಜಶೇಖರ್‌, ತಿಮ್ಮಾಪುರ ನಂಜಪ್ಪ, ಚಂದ್ರಯ್ಯ, ಲೋಕೇಶ್‌ ರಾಜೇಂದ್ರ, ಆನಂದ್‌, ಮಂಜುನಾಥ್‌, ಕಾಂತರಾಜು, ಕಿರಣ್‌, ಬಸವರಾಜು, ಶಿವಕುಮಾರ್‌ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

DR SUDHA

Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.