ನೀರನು ಮಿತವಾಗಿ ಬಳಸಿ: ಶಾಸಕ
Team Udayavani, Mar 5, 2022, 2:04 PM IST
ಬಂಗಾರಪೇಟೆ: ನೀರು ಜಗತ್ತಿನ ಎಲ್ಲ ಜೀವ ಸಂಕುಲಗಳ ಬದುಕಿಗೆ ಅಗತ್ಯವಾಗಿದ್ದು, ಪ್ರತಿಯೊಬ್ಬರೂ ಈ ಜೀವಜಲವನ್ನು ಮಿತವಾಗಿ ಬಳಸಿದರೆ ಮಾತ್ರ ಭವಿಷ್ಯದ ಪೀಳಿಗೆಗೂ ಉಳಿಸಬಹುದು ಎಂದು ಶಾಸಕ ಎಸ್.ಎನ್. ನಾರಾಯಾಣಸ್ವಾಮಿ ಹೇಳಿದರು.
ತಾಲೂಕಿನ ಚಿಕ್ಕಅಂಕಂಡಹಳ್ಳಿ ಗ್ರಾಪಂ ಹುದುಕುಳ ಗ್ರಾಮದಲ್ಲಿ ಸುಸ್ಥಿರ ಅಂತರ್ಜಲ ವೃದ್ಧಿಗೆ ಅಟಲ್ ಭೂಜಲ ಯೋಜನೆಯ ಕರಿತು ಹಳ್ಳಿಗಳಲ್ಲಿ ಅರಿವು ಮೂಡಿಸುವ ಸಂಚಾರಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿ, ಬರಪೀಡಿತ ಜಿಲ್ಲೆಯಾಗಿರುವ ಕೋಲಾರದಲ್ಲಿ ನೀರನ್ನು ಮಿತವಾಗಿ ಬಳಸಬೇಕು. ಮಳೆ ನೀರನ್ನು ಸಂರಕ್ಷಣೆ ಮಾಡಿ ಮರುಪೂರ್ಣ ಮಾಡಬೇಕು. ಅದಕ್ಕಾಗಿ ಕೊಳವೆ ಬಾವಿ, ತೋಡುಬಾವಿ ಸೇರಿದಂತೆ ಅಂತರ್ಜಲ ಬಳಸಿಕೊಂಡು ನೀರಾವರಿ ಆಧಾರಿತ ಕೃಷಿ ಮಾಡುವವರಿಗೆ ಎಚ್ಚರಿಕೆಯಿಂದ ನೀರು ಬಳಸುವ ಅರಿವಿರಬೇಕು ಎಂದರು.
ದೇಶದಲ್ಲಿ ಜನಸಂಖ್ಯಾ ಸ್ಫೋಟ, ಆಧುನಿಕತೆಯ ಪ್ರಭಾವ, ವಿಸ್ತಾರಗೊಳ್ಳುತ್ತಿರುವ ನಗರೀಕರಣ ದಂತಹಬೆಳವಣಿಗೆಗಳು ಅತಿಯಾದ ಅಂತರ್ಜಲ ಬಳಕೆಗೆ ಕಾರಣವಾಗುತ್ತಿದೆ. ಕೆಸಿ ವ್ಯಾಲಿ ಯೋಜನೆ ಜಿಲ್ಲೆಗೆವರದಾನವಾಗಿದ್ದು, ಎರಡನೇ ಅಂತಹ ಕೆಸಿ ವ್ಯಾಲಿಯೋಜನೆ ಜಾರಿಗೆ 450 ಕೋಟಿ ಮಂಜೂರಾಗಿದೆ. ಇದು ಕಾರ್ಯಗತವಾದರೆ ಕಸಬಾ ಹೋಬಳಿ ಎಲ್ಲ ಗ್ರಾಮಗಳಕೆರೆಗಳು ತುಂಬಿ ರೈತರ ಕೃಷಿಗೆ ಸಮೃದ್ಧಿಯಾಗಿ ನೀರು ಲಭ್ಯವಾಗಲಿದೆ ಎಂದರು.
ಹಿರೇಕರಪನಹಳ್ಳಿ ಕಲಾವಿದ ಯಲ್ಲಪ್ಪ ತಂಡ ಬೀದಿ ನಾಟಕ ಹಾಗೂ ಹಾಡುಗಾರಿಕೆಯಿಂದ ನೀರಿನ ಮಿತ ಬಳಕೆ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಿದರು. ಚಿಕ್ಕಅಂಕಂಡಹಳ್ಳಿ ಗ್ರಾಪಂ ಅಧ್ಯಕ್ಷ ಸಿ.ಎಂ. ಹರೀಶ್ ಕುಮಾರ್, ಟ್ರೀಸ್ ಸಂಸ್ಥೆಯ ಐಪಲ್ಲಿ ನಾರಾಯಣಸ್ವಾಮಿ, ಬಾಲು, ಹುದುಕುಳ ರವಿ, ಹನುಮಪ್ಪ, ಮುಖಂಡ ಶ್ರೀರಾಮ್, ಬಸವೇಗೌಡ, ಸುಹೇಲ್, ವೆಂಕಟರಾಮಶೆಟ್ಟಿ, ಪಿಡಿಒ ಚಿತ್ರಾ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್
MUST WATCH
ಹೊಸ ಸೇರ್ಪಡೆ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ