ನ್ಯಾಯಕ್ಕಾಗಿ ಅಲೆಯುತ್ತಿರುವ ಕುಟುಂಬ
Team Udayavani, Apr 30, 2019, 3:44 PM IST
ಯಲಬುರ್ಗಾ: ಪಟ್ಟಣದ ನಿವಾಸಿ ಹಾಗೂ ಅಸ್ಸಾಂ ರಾಜ್ಯದಲ್ಲಿ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಈಶ್ವರಗೌಡ ಮಾಲಿಪಾಟೀಲ ಎಂಬುವವರ ಮನೆ ಜಾಗಕ್ಕೆ ಸಂಬಂಧಿಸಿದಂತೆ ಪಪಂ ಸಿಬ್ಬಂದಿ ಕಾನೂನು ಗಾಳಿಗೆ ತೂರಿ ಮನ ಬಂದಂತೆ ವರ್ತಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ.
ಪಟ್ಟಣದ 7ನೇ ವಾರ್ಡಿನಲ್ಲಿರುವ ಆಸ್ತಿ ನಂ. 3-1-10/1 ರಲ್ಲಿ ತಮ್ಮ ಪೂರ್ವಿಕರಿಂದ ಹಾಗೂ ಹಳೆಯ ನೂಜಲು ಪ್ರಕಾರ 48 ಅಡಿ ಅಗಲ ಹಾಗೂ 70 ಅಡಿ ಉದ್ದದ ಜಾಗೆ ದಾಖಲಾತಿ ಇದೆ. ಆದರೆ ಪಪಂ ಸಿಬ್ಬಂದಿ ತಿದ್ದುಪಡಿ ಮಾಡಿ 32 ಅಡಿ ಅಗಲ ಇರಬೇಕು ಅದನ್ನು ಕೇವಲ 19 ಅಡಿ ಮಾಡಿದ್ದು ಇದರಲ್ಲಿ ಹಿರಿಯರು 16 ಅಡಿ ಜಾಗವನ್ನು ಮಾರಾಟ ಮಾಡಿದ್ದಾರೆ. ಅದರಂತೆ ಈಗ 32 ಅಡಿ ಜಾಗವಿರಬೇಕು ಅದನ್ನು ಬಿಟ್ಟು ಕೇವಲ 19 ಅಡಿ ದಾಖಲಾತಿ ಮಾಡಿದ್ದು ನಮಗೆ ತುಂಬಾ ಅನ್ಯಾಯವಾಗಿದೆ.
ಹಣದ ಆಸೆಗೆ ನಮಗೆ ಸಂಬಂಧಿಸಿದ ಜಾಗದ ವಿಸ್ತೀರ್ಣವನ್ನು ಪಂಚಾಯತಿಯ ಮೂಲ ದಾಖಲಾತಿಯಲ್ಲಿ ನಮಗೆ ಗೊತ್ತಿಲ್ಲದಂತೆ ತಿದ್ದುಪಡಿ ಮಾಡಲಾಗಿದೆ. ನನಗೆ ಸಂಬಂಧಿಸಿದ ಜಾಗವನ್ನು ಬೇರೆಯವರಿಗೆ ಹೆಸರಿಗೆ ನೋಂದಾಯಿಸಿದ್ದಾರೆ. ಸುಮಾರು 3 ತಿಂಗಳಿಂದ ಅಲೆಯುತ್ತಿದ್ದರೂ ಯಾರೂ ಸ್ಪಂದಿಸುತ್ತಿಲ್ಲ ಎಂದು ಯೋಧನ ಕುಟುಂಬಸ್ಥರು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ
Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ
Lok Sabha ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನ ಗೆಲ್ಲಲ್ಲ: ಶ್ರೀರಾಮುಲು
Congress ಪ್ರಧಾನಿ ಅಭ್ಯರ್ಥಿ ಯಾರು ಹೇಳಿ ನೋಡೋಣ: ಯಡಿಯೂರಪ್ಪ