ಚಾಲಕನಿಲ್ಲದಾಗ ಚಲಿಸಿದ ಲಾರಿ : ನಿಲ್ಲಿಸಲು ಹೋಗಿ ಜೀವ ಕಳೆದುಕೊಂಡ ಚಾಲಕ
Team Udayavani, Dec 7, 2022, 10:12 PM IST
ಕುಷ್ಟಗಿ:ಚಾಲಕನಿಲ್ಲದೇ ಚಲಿಸುತ್ತಿದ್ದ ಲಾರಿಯನ್ನು ನಿಲ್ಲಿಸಲು ಹೋಗಿ ಇನ್ನೊಬ್ಬ ಲಾರಿ ಚಾಲಕ ದುರ್ಮರಣಕ್ಕೀಡಾದ ಘಟನೆ ರಾಷ್ಟ್ರೀಯ ಹೆದ್ದಾರಿ ವಣಗೇರಿ ಟೋಲ್ ಪ್ಲಾಜಾದಲ್ಲಿ ನಡೆದಿದೆ.
ತಮಿಳುನಾಡು ಮೂಲದ ಸೇಲಂ ನಿವಾಸಿ ಕಾಮರಾಜ್ ಜಿ (32) ಮೃತ ದುರ್ದೈವಿ. ಬುಧವಾರ ಬೆಳಗಿನ ಜಾವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ವಣಗೇರಿ ಟೋಲ್ ಪ್ಲಾಜಾದಲ್ಲಿ ಚಹಾ ಸೇವಿಸಲು ಲಾರಿಯನ್ನು ನ್ಯೂಟ್ರಲ್ ನಲ್ಲಿ ನಿಲ್ಲಿಸಿ ಚಾಲಕ ಮುರಗನ್ ಕಂದನ್ ಚಹಾ ಸೇವಿಸಲು ತೆರಳಿದ್ದ. ಅದೇ ವೇಳೆ ಇನ್ನೋರ್ವ ಚಾಲಕ ಕಾಮರಾಜ್ ಜಿ. ಮೂತ್ರ ವಿಸರ್ಜನೆಗೆ ಹೋಗಿದ್ದ. ಚಾಲಕರಿಲ್ಲದೇ ನ್ಯೂಟ್ರಲ್ ನಲ್ಲಿದ್ದ ಲಾರಿ ಮುಂದೆ ಚಲಿಸಲಾರಂಭಿಸಿತು. ಕಾಮರಾಜ್ ಕೆ. ದೌಡಾಯಿಸಿ, ಚಲಿಸುತ್ತಿದ್ದ ಲಾರಿಯನ್ನು ನಿಲ್ಲಿಸಲು ಸ್ಟೇರಿಂಗ್ ಹಿಡಿದು, ಇದ್ದಕ್ಕಿದ್ದಂತೆ ಬಲಕ್ಕೆ ತಿರುವು (ಟರ್ನ) ತೆಗೆದುಕೊಳ್ಳುವ ಸಂದರ್ಭದಲ್ಲಿ ಹರಿಯಾಣದ ಲಾರಿ ಢಿಕ್ಕಿ ಹೊಡೆದಾಗ, ಚಾಲನೆಯಲ್ಲಿ ಕುಳಿತ ಸ್ಥಳದಲ್ಲಿ ಚಾಲಕ ಕಾಮರಾಜ್ ಕೆ. ಮೃತ ಪಟ್ಟಿದ್ದಾರೆ. ಅದರೂ ಮುಂದೆ ಚಲಿಸುತ್ತಿದ್ದ ಲಾರಿಯನ್ನು ಮುರುಗನ್ ಹತ್ತಿ ಬ್ರೇಕ್ ಹಾಕಿ ಲಾರಿ ನಿಲ್ಲಿಸಿದ್ದಾನೆ.
ಹರಿಯಾಣದ ಲಾರಿ ಚಾಲಕ ಅಜ್ಮಲ್ ಜಾನ್ ಮಹ್ಮದ್ ನನ್ನು ಕುಷ್ಟಗಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರಕರಣ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
MUST WATCH
ಹೊಸ ಸೇರ್ಪಡೆ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ