ಕುಷ್ಟಗಿಯಲ್ಲಿ ಜನಸಂಕಲ್ಪ ಯಾತ್ರೆ : ಸಿಎಂ ಬೊಮ್ಮಾಯಿ ಆಗಮನಕ್ಕೆ ಕ್ಷಣಗಣನೆ
Team Udayavani, Oct 12, 2022, 10:52 AM IST
ಕುಷ್ಟಗಿ : ಕುಷ್ಟಗಿ ಪಟ್ಟಣಕ್ಕೆ ಜನಸಂಕಲ್ಪ ಯಾತ್ರೆಯ ಬೃಹತ್ ಸಮಾವೇಶಕ್ಕೆ ಆಗಮಿಸಲಿರುವ ಸಿಎಂ ಬಸವರಾಜ ಬೊಮ್ಮಾಯಿ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ.
ಈ ನಡುವೆಯೂ ಮಳೆಯಿಂದ ಅಸ್ತವ್ಯಸ್ತಗೊಂಡ ವೇದಿಕೆ ಸರಿಪಡಿಸುವ ಕಾರ್ಯ ಭರದಿಂದ ಸಾಗಿದೆ. ಬೆಳಗ್ಗೆ 9 ರಿಂದ ಮಳೆ ಬಿಡುವಾಗಿದ್ದು, ಬಿಸಿಲಿನ ವಾತವರಣ ಆಯೋಜಕರು ನಿಟ್ಟುಸಿರು ಬಿಡುವಂತಾಗಿದೆ. ಇದೇ ವಾತವರಣ ಮುಂದುವರಿದರೆ ಸಿಎಂ ಬೈ ರೋಡ್ ಬದಲಿಗೆ ಹೆಲಿಕಾಪ್ಟರ್ ನಲ್ಲಿ ಬರುವ ಸಾದ್ಯತೆಗಳಿದ್ದು. ಹೆಲಿಪ್ಯಾಡ್ ನಿಂದ ಶಾಖಾಪೂರ ರಸ್ತೆಯ ಬಿಜೆಪಿ ನೂತನ ಕಛೇರಿ ಉದ್ಘಾಟನೆಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿದೆ. ಅಂದುಕೊಂಡಂತಾದರೆ ನಿಗದಿತ ಸಮಯದಲ್ಲಿ ತಾವರಗೇರಾ ರಸ್ತೆಯಲ್ಲಿ ಬೃಹತ್ ವೇದಿಕೆಯಲ್ಲಿ ಕಾರ್ಯಕ್ರಮದ ಕ್ಷಣಗಣನೆ ಆರಂಭಲಾಗಿದ್ದು ಎಲ್ಲರ ದೃಷ್ಟಿ ವೇದಿಕೆಯತ್ತ ನೆಟ್ಟಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ದೊಡ್ಡನಗೌಡ ಪಾಟೀಲ ಅವರಿಗೆ ಮುಂದಿನ ಚುನಾವಣೆಯಲ್ಲಿ ಶತಗತಾಯವಾಗಿ ಗೆಲ್ಲಲು ಈ ಕಾರ್ಯಕ್ರಮದ ಮೂಲಕ ಶಕ್ತಿ ಪ್ರದರ್ಶಿಸಲಾಗುತ್ತಿದೆ.
ಇದನ್ನೂ ಓದಿ : ಕುಷ್ಟಗಿಗೆ ಸಿಎಂ : ಹೆಲಿಕಾಪ್ಟರ್ ಬದಲಾಗಿ ರಸ್ತೆಯ ಮೂಲಕ ಬರುವ ಸಾಧ್ಯತೆ