Congress ಶಾಸಕರು,ಎಂಎಲ್ಸಿಗಳಿಗೆ ನಿಗಮ ಮಂಡಳಿ ಬೇಡ:ಎಚ್.ಆರ್.ಶ್ರೀನಾಥ್
ಹೈಕಮಾಂಡ್ಗೆ ಪತ್ರ ಬರೆದು ಮನವಿ..
Team Udayavani, Oct 18, 2023, 6:18 PM IST
ಗಂಗಾವತಿ: ಶಾಸಕರು ಹಾಗೂ ಮೇಲ್ಮನೆ ಸದಸ್ಯರಿಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ಕೊಡದೇ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಆದ್ಯತೆ ನೀಡಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ವಿಧಾನಪರಿಷತ್ ಮಾಜಿ ಸದಸ್ಯ ಹಾಗೂ ಈಡಿಗ ಸಮಾಜದ ರಾಜ್ಯ ಮುಖಂಡ ಎಚ್.ಆರ್.ಶ್ರೀನಾಥ್ ಹೈಕಮಾಂಡ್ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಈ ಕುರಿತು ಉದಯವಾಣಿ ಜತೆ ಮಾತನಾಡಿ, ಮೂರು ದಶಕಗಳ ನಂತರ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಸೇರಿ ಎಲ್ಲಾ ಹಿರಿಯ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಸಂಘಟಿತರಾಗಿ ಪಕ್ಷದ ಸಾಮಾನ್ಯ ಕಾರ್ಯಕರ್ತರು ಹಗಲು ರಾತ್ರಿ ದುಡಿದ ಪರಿಣಾಮ ಮತ್ತು ಬಿಜೆಪಿ ಸರಕಾರ ನಡೆಸಿದ ದುರಾಳಿತದ ಪರಿಣಾಮ 136 ಕಾಂಗ್ರೆಸ್ ಶಾಸಕರು ಗೆಲುವು ಕಂಡಿದ್ದು ಇದೀಗ ಸರಕಾರ ನಿಗಮ, ಮಂಡಳಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ನೇಮಕ ಮಾಡುವ ಪ್ರಕ್ರಿಯೆ ನಡೆದಿದ್ದು ಬ್ಲಾಕ್ ಕಾಂಗ್ರೆಸ್, ತಾಲೂಕು, ಜಿಲ್ಲಾ ಕಾಂಗ್ರೆಸ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಮೊದಲ ಆದ್ಯತೆ ನೀಡಬೇಕು. ಶಾಸಕರಿಗೆ ಯಾವುದೇ ನಿಗಮ ಮಂಡಳಿ ನೀಡಬಾರದು. ಅವರಿಗೆ ಅಧಿಕಾರ ಇದ್ದು ಮತ್ತೊಂದು ಅಧಿಕಾರ ಕೊಟ್ಟರೆ ಕಾರ್ಯಕರ್ತರಿಗೆ ತಪ್ಪು ಸಂದೇಶ ಹೋಗುತ್ತದೆ.ಹೈಕಮಾಂಡ್ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಪ್ರಮುಖರಿಗೆ ಪತ್ರ ಬರೆದು ಮನವಿ ಮಾಡಲಾಗುತ್ತದೆ.
ಪ್ರಸ್ತುತ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಕೃಷಿ ಮೇಲೆ ಭಾರಿ ಪರಿಣಾಮವಾಗಿದೆ. ಸರಕಾರ ಮೊದಲಿನಂತೆ 7 ತಾಸು ವಿದ್ಯುತ್ ಪೂರೈಸಬೇಕು. ಇದರಿಂದ ಬಯಲು ನದಿ ಪಾತ್ರದ ಪಂಪಸೆಟ್ ಅವಲಂಬಿಸಿದ ಕೃಷಿಕರಿಗೆ ನೆರವಾಗುತ್ತದೆ. ಸರಕಾರ 5 ತಾಸು ವಿದ್ಯುತ್ ಕೊಡುವ ಆದೇಶ ವಾಪಸ್ ಪಡೆದು ಮೊದಲಿನಂತೆ 7 ತಾಸು ಪೂರೈಸಬೇಕು. ವಿದ್ಯುತ್ ಅಭಾವವಿದ್ದರೆ ಅನ್ಯ ರಾಜ್ಯಗಳಿಂದ ಖರೀದಿ ಮಾಡಿ ರೈತರಿಗೆ ಪೂರೈಸಬೇಕು. ಜನಸಾಮಾನ್ಯರಿಗೆ 5 ಗ್ಯಾರಂಟಿ ಯೋಜನೆ ತಲುಪಿದ್ದು ರೈತರಿಗೆ ವಿದ್ಯುತ್ ನೀಡುವ ಮೂಲಕ ಸರಕಾರ ನೆರವಿಗೆ ಬರಬೇಕೆಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್