ಮಂತ್ರಾಲಯಕ್ಕೆ ಭಕ್ತರ ಪಾದಯಾತ್ರೆ
Team Udayavani, Jan 11, 2020, 3:48 PM IST
ಕನಕಗಿರಿ: ಪ್ರತಿವರ್ಷ ಮಕರ ಸಂಕ್ರಾತಿ ನಿಮಿತ್ತ ಸ್ಥಳೀಯ ಪ್ರತಾಪರಾಯ ಕನಕಾಚಲ ಭಜನಾ ಸಂಘದ ಆಶ್ರಯದಲ್ಲಿ ಶ್ರೀಕ್ಷೇತ್ರ ಮಂತ್ರಾಲಯಕ್ಕೆ ಸತತ 19ನೇ ವರ್ಷದ ಪಾದಯಾತ್ರೆಗೆ ಭಕ್ತರು ಶುಕ್ರವಾರ ತೆರಳಿದರು. ಪಟ್ಟಣದ ಅಗಸಿ ಹನುಮಂತ ದೇಗುಲದಿಂದ ಪ್ರಮುಖ ರಾಜಬೀದಿಯ ಮೂಲಕ ಪ್ರತಾಪರಾಯ ಹಾಗೂ ಕನಕಾಚಲಪತಿ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ ದರ್ಶನ ಪಡೆದರು. ಬಳಿಕ ವಾಲ್ಮೀಕಿ ವೃತದ ಮಾರ್ಗವಾಗಿ ಸಾಗಿದರು.
ಸಂಘದ ಅಧ್ಯಕ್ಷ ಗೋಪಾಲರೆಡ್ಡಿ ಮಾತನಾಡಿ, ಇತ್ತೀಚೆಗೆ ಜಾಗತೀಕರಣದಲ್ಲಿ ಸಾಕಷ್ಟು ಜನರು ಧಾರ್ಮಿಕ ಕಾರ್ಯಾಕ್ರಮದಲ್ಲಿ ಪಾಲ್ಗೊಳ್ಳುವುದುಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ಶ್ರದ್ಧಾಭಕ್ತಿಯಿಂದ 19 ವರ್ಷಗಳವರೆಗೆ ಪಾದಯಾತ್ರೆ ಹಮ್ಮಿಕೊಂಡು ಬಂದಿರುವುದು ಸಂತೋಷದ ವಿಷಯ. ಮುಂದಿನ ದಿನಮಾನಗಳಲ್ಲಿ ಮಳೆ ಚೆನ್ನಾಗಿ ಆಗಿ ರೈತರು ಹರುಷದಿಂದ ಬಾಳುವಂತಾಗಲಿ ಎಂದು ಗುರುರಾಯರ ಸನ್ನಿಧಿಯಲ್ಲಿ ಹರಕೆ ಮಾಡಿಕೊಳ್ಳುವುದಾಗಿ ಹೇಳಿದರು. ಕೇಸರಿ ಧ್ವಜ ಹಿಡಿದು ಚಿಕ್ಕಮಕ್ಕಳು ಪಾದಯಾತ್ರೆಮೆರವಣಿಗೆಗೆ ಮೆರಗು ತಂದರು. ಹನುಮಂತರೆಡ್ಡಿ ಚಿತ್ರಕಿ, ಪರಂದಾಮರೆಡ್ಡಿ ಬೀರಳ್ಳಿ, ಕಂಠಿರಂಗ ಪೂಜಾರ,ವಿರೂಪಾಕ್ಷರೆಡ್ಡಿ ಓಣಿಮನಿ, ಕೃಷ್ಣ ನಾಯಕ, ಸಂತೋಷ ಅಕ್ಕನವರ್, ರಾಮಣ್ಣ ಪೂಜಾರಿ, ನಾಗರಾಜ ಮಹಿಪತಿ,ಭೀಮರೆಡ್ಡಿ ಓಣಿಮನಿ, ಗುಂಡಪ್ಪ ಚಿತ್ರಗಾರ, ಶರಣಪ್ಪ ಕುಂಬಾರ, ಸುಮಣ್ಣ ಆಚಾರ್ಯ ತೊಂಡಿಹಾಳ ಸೇರಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ