ಆಸ್ಪತ್ರೆಗಳಿಗೆ ಗವಿಮಠದಿಂದ “ದಾಸೋಹ’
ಮಠದಿಂದ 200 ಬೆಡ್ ಕಾಳಜಿ ಕೇಂದ್ರ ಆರಂಭ ! ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಯೋಗ-ಧ್ಯಾನ
Team Udayavani, May 19, 2021, 6:36 PM IST
ಕೊಪ್ಪಳ: ದಾಸೋಹ, ಕಾಯಕಕ್ಕೆ ಹೆಸರಾದ ಗವಿಮಠವು ಸೋಂಕಿತರಿಗೆ ಆಕ್ಸಿಜನ್ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್ ಆರಂಭಿಸುವ ಮೂಲಕ ಸಂಜೀವಿನಿಯಾಗುವ ಜತೆಗೆ ಜನರ ಹಸಿವು ನೀಗಿಸಲು ದಾಸೋಹ ಸೇವೆಗೂ ಮುಂದಾಗಿದೆ.
ಕಳೆದ ವರ್ಷ ಕೋವಿಡ್ ಸಂದರ್ಭದಲ್ಲೂ ಖಾಸಗಿ-ಸರ್ಕಾರಿ ಆಸ್ಪತ್ರೆಗಳಿಗೆ ನಿತ್ಯ ಊಟ ತಲುಪಿಸಿತ್ತು. ಈ ವರ್ಷವೂ ಮತ್ತೆ ದಾಸೋಹ ಸೇವೆ ಆರಂಭ ಮಾಡಿದೆ. ನಗರದಲ್ಲಿ ಸರ್ಕಾರಿ ಜಿಲ್ಲಾ ಕೋವಿಡ್ ಆಸ್ಪತ್ರೆ-ನಾಲ್ಕು ಖಾಸಗಿ ಕೋವಿಡ್ ಆಸ್ಪತ್ರೆಗಳಲ್ಲಿ ಸೋಂಕಿತರ ಆರೈಕೆಯಲ್ಲಿ ತೊಡಗಿರುವವರಿಗೆ ಹಾಗೂ ಸೋಂಕಿತರ ಸಂಬಂಧಿಕರಿಗೆ ಊಟದ ವ್ಯವಸ್ಥೆ ಮಾಡಿದೆ. ಕೋವಿಡ್ ಉಲ್ಬಣದ ಹಿನ್ನೆಲೆಯಲ್ಲಿ ಲಾಕ್ಡೌನ್ ಘೋಷಣೆಯಾದ ಪರಿಣಾಮ ನಗರ ಪ್ರದೇಶದಲ್ಲಿ ಕುಡಿಯಲು ನೀರೂ ಸಿಗದ ಪರಿಸ್ಥಿತಿ ಇದೆ. ಈ ವೇಳೆ ಸೋಂಕಿತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸುವ ಸಂಬಂಧಿಕರು ನಿತ್ಯ ಊಟಕ್ಕೆ ತೊಂದರೆ ಎದುರಿಸುವಂತಾಗಿದೆ.
ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಊಟ ಕೊಟ್ಟರೂ ಅವರ ಸಂಬಂಧಿ ಕರು ಅಥವಾ ಆರೈಕೆ ಮಾಡುವವರಿಗೆ ಊಟದ ಸಮಸ್ಯೆಯಾಗದಿರಲೆಂಬ ಕಾರಣಕ್ಕೆ ನಿತ್ಯ ಗವಿಮಠದಿಂದ 600-700 ಊಟದ ಪ್ಯಾಕೆಟ್ಗಳನ್ನು ಆಸ್ಪತ್ರೆಯ ಸ್ಥಳಕ್ಕೆ ಹೋಗಿ ವಿತರಿಸಲಾಗುತ್ತಿದೆ. ಸೋಂಕಿತರು ಆಟವಾಡಲು ಕೇರಂ ವ್ಯವಸ್ಥೆ: ಬಿ.ಎಸ್. ಗುಡಿ ಕುಟುಂಬವು ಗವಿಮಠದಲ್ಲಿನ ಸೋಂಕಿತರು ಸಮಯವನ್ನು ಖುಷಿಯಿಂದ ಕಳೆಯಲು, ಆರೋಗ್ಯವಂತ ಸೋಂಕಿತರು ಎಲ್ಲರೊಟ್ಟಿಗೆ ಬೆರೆಯಲು ಎರಡು ಕೇರಂ ಬೋರ್ಡ್ಗಳನ್ನು ಗವಿಮಠಕ್ಕೆ ನೀಡಿದೆ.
ಕೇರಂ ಆಟ ಆಡುವ ಮೂಲಕ ಅವರು ಸಮಯ ಖುಷಿಯಿಂದ ಕಳೆಯಲಿ ಎನ್ನುವುದು ಅವರ ಉದ್ದೇಶ. ಅಲ್ಲದೇ, ಪಗಡೆ ಆಟ, ಹಾವು-ಏಣಿ ಆಟ, ಹ್ಯಾಂಡ್ ಬಾಲ್ ಸೇರಿ ಇತರೆ ಆಟಿಕೆ ಸಾಮಗ್ರಿಗಳನ್ನೂ ಕೊಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!
Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು
Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್ ಗರಿ
MUST WATCH
ಹೊಸ ಸೇರ್ಪಡೆ
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ