Gangavathi: ಮಲ್ಲಾಪೂರ-ಕುರಿಹಟ್ಟಿಯಲ್ಲಿ ಮೊಸಳೆ ಪ್ರತ್ಯಕ್ಷ; ಜನತೆಯಲ್ಲಿ ಆತಂಕ
ಮಕ್ಕಳು ಮೀನು ಹಿಡಿಯಲು ತೆರಳಿದ ಸಂದರ್ಭದಲ್ಲೇ ಪ್ರತ್ಯಕ್ಷ...
Team Udayavani, Jun 19, 2023, 8:16 PM IST
ಗಂಗಾವತಿ: ತಾಲೂಕಿನ ಮಲ್ಲಾಪೂರ -ಕುರಿಹಟ್ಟಿ ಗ್ರಾಮದ ಹಳ್ಳದಲ್ಲಿ ಸೋಮವಾರ ಮಧ್ಯಾಹ್ನ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು ಕೂಲಿ ಕಾರ್ಮಿಕರು ಮತ್ತು ರೈತರನ್ನು ಆತಂಕಕ್ಕೀಡು ಮಾಡಿದೆ.
ಮಲ್ಲಾಪೂರ ಕುರಿಹಟ್ಟಿ ಗ್ರಾಮದ ಪಕ್ಕದಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ಇದ್ದು ಪ್ರಸ್ತುತ ಕಾಲುವೆಯಲ್ಲಿ ನೀರು ಹರಿಯುವುದನ್ನು ನಿಲ್ಲಿಸಿರುವುದರಿಂದ ಮೊಸಳೆ ಹಳ್ಳದಲ್ಲಿ ಹರಿದು ಬಂದಿರುವ ಸಾಧ್ಯತೆ ಇದೆ. ಹಳ್ಳದಲ್ಲಿ ಕುರಿಹಟ್ಟಿ ಗ್ರಾಮದ ಮಕ್ಕಳು ಮೀನು ಹಿಡಿಯಲು ತೆರಳಿದ ಸಂದರ್ಭದಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು ಮಕ್ಕಳು ಭಯದಿಂದ ಹಳ್ಳದಿಂದ ದೂರ ಬಂದಿದ್ದಾರೆ.
View this post on Instagram
ಮೊಸಳೆ ಪ್ರತ್ಯಕ್ಷವಾದ ಬಳಿಕ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ಹಳ್ಳದ ಅಕ್ಕಪಕ್ಕ ಹೊಲಗದ್ದೆ ಕೂಲಿ ಕೆಲಸ ಮಾಡಲು ಮತ್ತು ದನಕರು, ಎಮ್ಮೆ ಮೇಯಿಸಲು ಮಕ್ಕಳು ಸೇರಿ ಜನರು ಆಗಮಿಸುವುದರಿಂದ ಮೊಸಳೆ ದಾಳಿ ಮಾಡುವ ಸಾಧ್ಯತೆ ಇದ್ದು ಅರಣ್ಯ ಇಲಾಖೆಯವರು ಸೆರೆ ಹಿಡಿಯುವಂತೆ ಕುರಿಹಟ್ಟಿ ಗ್ರಾಮದ ಗೌರೀಶ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ