Gangavati: ಕಣ್ಣು ಗುಡ್ಡೆ ಹೊರಬಂದಿದ್ದ ಬಾಲಕಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ
Team Udayavani, Sep 13, 2023, 5:34 PM IST
ಗಂಗಾವತಿ:ಕಟ್ಟಿಗೆ ಚುಚ್ಚಿ ಕಣ್ಣು ಗುಡ್ಡೆ ಹೊರಬಂದಿದ್ದ ಕಣ್ಣನ್ನು ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಶಾಶ್ವತವಾಗಿ ಎರಡು ಕಣ್ಣಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದ ಬಾಲಕಿಗೆ ಹೊಸ ಬೆಳಕನ್ನು ನೀಡುವಲ್ಲಿ ನಗರದ ಖ್ಯಾತ ನೇತ್ರ ತಜ್ಞ ಡಾ.ಮಹಾಂತೇಶ ಪಟ್ಟಣಶೆಟ್ಟಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ವಿರೂಪಾಪೂರ ಗಡ್ಡಿ ನಿವಾಸಿ ನಾಗರಾಜ ಇವರ ಪುತ್ರಿ ಧನುಬಾಯಿ(7) ಶಾಲೆಗೆ ಕಾಲುವೆಯ ಸೇತುವೆ ದಾಟಿ ಹೋಗುವ ಸಂದರ್ಭದಲ್ಲಿ ಕಾಲು ಜಾರಿ ಬಿದ್ದ ಪರಿಣಾಮವಾಗಿ ಎಡಭಾಗದ ಕಣ್ಣಿಗೆ ಕಟ್ಟಿಗೆ ತಾಕಿ ಕಣ್ಣುಗುಡ್ಡೆ ಹೊರಗೆ ಬಂದಿತ್ತು. ಗಾಬರಿಗೊಂಡ ನಾಗರಾಜ ದಂಪತಿಗಳು ಕೂಡಲೇ ನಗರದ ನೇತ್ರಜ್ಯೋತಿ ಕಣ್ಣಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪಾಲಕರ ಪರವಾನಿಗೆಯೊಂದಿಗೆ ಬಾಲಕಿಯ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿ ಒಳಗಿದ್ದ ಕಟ್ಟಿಗೆ ತುಂಡನ್ನು ಹೊರಗೆ ತೆಗೆದು ಪುನಃ ಕಣ್ಣು ಗುಡ್ಡೆಯನ್ನು ಯಥಾಸ್ಥಿತಿಲ್ಲಿಸಿರಿ ಹೊಲಿಗೆ ಹಾಕುವ ಮೂಲಕ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಮುಂದೆ ಎರಡು ಕಣ್ಣು ಕಳೆದುಕೊಂಡು ಅಂಧತ್ವಕ್ಕೊಳಗಾಗುತ್ತಿರುವುದನ್ನು ತಡೆದಿದ್ದಾರೆ.
ಮಕ್ಕಳ ಬಗ್ಗೆ ಪಾಲಕರು ಜಾಗೃತಿ ವಹಿಸಬೇಕು
ಮಕ್ಕಳ ಪ್ರತಿ ಚಲನವಲನವನ್ನು ಪಾಲಕರು ಎಚ್ಚರಿಕೆಯಿಂದ ಗಮನಿಸಬೇಕು. ಧನುಬಾಯಿ ಎಡಗಣ್ಣಿಗೆ ಕಟ್ಟಿಗೆ ಬಡಿದ ಪರಿಣಾಮ ಕಣ್ಣುಗುಡ್ಡೆ ಹೊರಗೆ ಬಂದಿತ್ತು. ಪಾಲಕರು ಕೂಡಲೇ ಆಗಮಿಸಿದ್ದರಿಂದ ಸೂಕ್ತ ಶಸ್ತ್ರಚಿಕಿತ್ಸೆ ಮೂಲಕ ಕಟ್ಟಿಗೆ ಚೂರನ್ನು ಹೊರಗೆ ತೆಗೆದು ಮುಂದೆ ಎರಡು ಕಣ್ಣಿನ ದೃಷ್ಠಿದೋಷವಾಗುವುದನ್ನು ತಡೆಯಲಾಗಿದೆ. ಸಣ್ಣ ಮಕ್ಕಳಲ್ಲಿ ಇಂತಹ ಅನಾಹುತಗಳಾಗುವುದು ಸಾಮಾನ್ಯವಾಗಿದ್ದು ಕೂಡಲೇ ತಜ್ಞ ನೇತ್ರ ವೈದ್ಯರನ್ನು ಸಂಪರ್ಕಿಸಬೇಕೆಂದು ನೇತ್ರ ವೈದ್ಯ ಡಾ.ಮಹಾಂತೇಶ ಪಟ್ಟಣಶೆಟ್ಟಿ ಉದಯವಾಣಿಗೆ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
MUST WATCH
ಹೊಸ ಸೇರ್ಪಡೆ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ