ಕುಷ್ಟಗಿ: ಹಾಡಹಗಲೇ ಜೆಸಿಬಿ ಬಿಡಿಭಾಗವನ್ನು ಹೊತ್ತೊಯ್ದ ಕಳ್ಳರು
Team Udayavani, Dec 22, 2021, 12:20 PM IST
ಕುಷ್ಟಗಿ: ಕುಷ್ಟಗಿ ಪಟ್ಟಣದ 1ನೇ ವಾರ್ಡಿನ ಕೃಷ್ಣಗಿರಿ ಕಾಲೋನಿಯಲ್ಲಿ ಹಾಡ ಹಗಲೇ ಜೆಸಿಬಿಯ ಭಾರವಾದ ಬಿಡಿಭಾಗವನ್ನು ಹೊತ್ತೊಯ್ದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಡಿ.5ರಂದು ಮಾಜಿ ಪುರಸಭೆ ಸದಸ್ಯ ನಾಗರಾಜ ಮೇಲಿನಮನಿ ಅವರ ಮನೆ ಎದುರಿನ ಬಯಲು ಜಾಗೆಯಲ್ಲಿ ಶರಣಪ್ಪ ಬಿಜಕಲ್ ಎಂಬುವರು ಜೆಸಿಬಿ ನಿಲ್ಲಿಸುತ್ತಿದ್ದರು. ಜೆಸಿಬಿಯ ಎರಡು ಸಣ್ಣ ಬಿಡಿಭಾಗವನ್ನು ಅಲ್ಲಿಯೇ ಇರಿಸಿದ್ದರು. ಇದರ ಮೇಲೆ ಕಣ್ಣಿಟ್ಟಿದ್ದ ಇಬ್ಬರು ಬೈಕಿನಲ್ಲಿ ಬಂದು ಭಾರವಾದ ಬಿಡಿಭಾಗವನ್ನು ಹೊತ್ತೊಯ್ದಿದ್ದಾರೆ.
ಈ ಕಳ್ಳರು ಬೈಕಿನಲ್ಲಿ ಹೊತ್ತೊಯ್ಯುವ ದೃಶ್ಯಾವಳಿಗಳು ಪಕ್ಕದ ಸಿಡಿಪಿಓ ಕಛೇರಿಯ ಸಿಸಿ ಕ್ಯಾಮರಾ ದಲ್ಲಿ ಸೆರೆಯಾಗಿವೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಜೆಸಿಬಿ ಮಾಲೀಕ ಶರಣಪ್ಪ ಬಿಜಕಲ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸಿಸಿ ಕ್ಯಾಮಾರದಲ್ಲಿ ದೃಶ್ಯಾವಳಿ ಅಸ್ಪಷ್ಟವಾಗಿದ್ದು ಪತ್ತೆ ಕಾರ್ಯಮುಂದುವರೆದಿದೆ. ಸ್ಥಳೀಯ ಹಾಗೂ ಸುತ್ತಮುತ್ತಲಿನ ಗುಜರಿ ಅಂಗಡಿಗಳಲ್ಲಿ ವಿಚಾರಣೆ ನಡೆಸಲಾಗಿದೆ. ಸಿಸಿ ಕ್ಯಾಮರಾ ಸುಳಿವು ನೀಡಿದರೂ ಈ ಚಾಲಕಿ ಕಳ್ಳರ ಸುಳಿವು ಸಿಕ್ಕಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್