![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
Koppala; ಬಿಜೆಪಿಯವರು ಸುಳ್ಳಿನ ಗಿರಾಕಿಗಳು: ಸಚಿವ ಶಿವರಾಜ ತಂಗಡಗಿ
Team Udayavani, Mar 1, 2024, 1:17 PM IST
![Koppala; ಬಿಜೆಪಿಯವರು ಸುಳ್ಳಿನ ಗಿರಾಕಿಗಳು: ಸಚಿವ ಶಿವರಾಜ ತಂಗಡಗಿ](https://www.udayavani.com/wp-content/uploads/2024/03/tangadagi-620x342.jpg)
ಕೊಪ್ಪಳ: ನಮಗೆ ಮೊದಲು ದೇಶ, ಆ ಮೇಲೆ ಪಕ್ಷ. ಆದರೆ ಬಿಜೆಪಿಯವರಿಗೆ ಮೊದಲು ಪಕ್ಷ, ಆಮೇಲೆ ದೇಶನೂ ಇಲ್ಲ ಬರೀ ಮೋದಿ. ಬಿಜೆಪಿಯವರು ಜನರು ಮನಸ್ಸು ಕೆಡಿಸಲು ಹೊರಟಿದ್ದಾರೆ. ಜನರ ಮನಸ್ಸು ಕೆಡಲು ಸಾಧ್ಯವಿಲ್ಲ. ಜನರಿಗೂ ಬಿಜೆಪಿ ಬಗ್ಗೆ ಗೊತ್ತಾಗಿದೆ. ಇವರು ಸುಳ್ಳರು, ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ಜನರಿಗೆ ಗೊತ್ತಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಮಾತನಾಡಿದ ಅವರು, ನಳಿನ್ ಕುಮಾರ್ ಕಟೀಲ್ ಸಿಕ್ಕರೆ ನನ್ನ ಬಳಿ ಕರೆಯಿರಿ. ಒಂದು ರೂಪಾಯಿಗೆ 15 ಡಾಲರ್ ಬರುತ್ತದೆಂದು ಹೇಳಿದ್ದರು. ಇದೀಗ 1 ರೂ.ಗೆ 84 ಡಾಲರ್ ಆಗಿದೆ. ಬಿಜೆಪಿಯವರು ಒಂದು ದೊಡ್ಡದು ಸುಳ್ಳಿನ ಫ್ಯಾಕ್ಟರಿ ಕಟ್ಟಿಸಿದ್ದಾರೆ. ಆ ಸುಳ್ಳಿನ ಫ್ಯಾಕ್ಟರಿಯಲ್ಲಿ ಟ್ರೈನಿಂಗ್ ಆದ ಗಿರಾಕಿಗಳು ಈ ಬಿಜೆಪಿಯವರು. ಸಿ.ಟಿ.ರವಿ ಸೇರಿದಂತೆ ಎಲ್ಲ ನಾಯಕರು ಸುಳ್ಳಿನ ಫ್ಯಾಕ್ಟರಿಯಲ್ಲಿ ಟ್ರೈನಿಂಗ್ ಪಡೆದ ಗಿರಾಕಿಗಳು ಎಂದು ಟೀಕಿಸಿದರು.
ಜಾತಿ ಗಣತಿ ವರದಿ ಸ್ವೀಕಾರ ವಿಚಾರವಾಗಿ ಮಾತನಾಡಿದ ಅವರು, ವರದಿಯನ್ನು ಯಾರೂ ಸಹ ಓದಿಲ್ಲ. ವರದಿ ಓದಲಾರದೆ ಯಾಕೆ ವಿರೋಧ ಮಾಡುತ್ತಾರೆ. ಸಾರ್ವಜನಿಕರ ಮುಂದೆ ವರದಿ ತಂದು ಚರ್ಚೆ ಮಾಡುತ್ತೇವೆ. ಸಚಿವ ಸಂಪುಟದಲ್ಲಿ ವರದಿ ಬಗ್ಗೆ ಚರ್ಚೆಯಾಗುತ್ತದೆ. ವರದಿಯನ್ನು ಓದಲಾರದೆ ಅವೈಜ್ಞಾನಿಕವೆಂದು ಹೇಳುವುದು ತಪ್ಪು. 168 ಕೋಟಿ ಖರ್ಚು ಮಾಡಿ ವರದಿ ಮಾಡಲಾಗಿದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ಬಗ್ಗೆ ವರದಿ ಮಾಡಿದೆ. ಕೇವಲ ಜಾತಿಗಣತಿಗೆ ವರದಿ ಸೀಮಿತವಾಗಿಲ್ಲ. ಕಾಂಗ್ರೆಸ್ ಪಕ್ಷ ಎಲ್ಲಾ ಜಾತಿಗಳಿಗೆ ವಿಶ್ವಾಸ ತೋರಿಸುವ ಪಕ್ಷ. ಅಹಿಂದ ಮಾತ್ರವಲ್ಲ, ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣ ಸೇರಿದಂತೆ ಎಲ್ಲಾ ಜಾತಿಗಳಿರುವ ಪಾರ್ಟಿ ಕಾಂಗ್ರೆಸ್. ನಾನು ಬಿಜೆಪಿ ಬಗ್ಗೆ ನುಡಿದ ಭವಿಷ್ಯ ನಿಜವಾಗುತ್ತಿದೆ ಎಂದರು.
ಚುನಾವಣೆ ಬಂದಾಗ ಬಿಜೆಪಿಯವರಿಗೆ ನೆನಪಾಗುವುದು ಪಾಕಿಸ್ತಾನ. ಚುನಾವಣೆ ಬಂದಾಗ ನೆನಪಾಗುವುದು ರಾಮ, ಆಂಜನೇಯ, ಪಾಕಿಸ್ತಾನ. ಚುನಾವಣೆ ಮುಗಿದ ಮೇಲೆ ಶ್ರೀರಾಮ, ಆಂಜನೇಯ, ಪಾಕಿಸ್ತಾನವೂ ಬಿಜೆಪಿಗೆ ನೆನಪು ಆಗುವುದಿಲ್ಲ. ವಿಧಾನಸೌದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ತಪ್ಪು. ಅದನ್ನು ನಾವು ಪಾಲನೆ, ಪೋಷಣೆ ಮಾಡುವುದಿಲ್ಲ. ಯಾರೇ ಕೂಗಿದರೂ ಶಿಕ್ಷೆಗೆ ಗುರಿ ಪಡಿಸುತ್ತೇವೆ. ಬಿಜೆಪಿ ದೇಶ ಭಕ್ತಿಯ ಬಗ್ಗೆ ನಮಗೇನು ಹೇಳೂವುದು ಅವಶ್ಯಕತೆಯಿಲ್ಲ. ಬಿಜೆಪಿಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಯಾರಾದರೂ ನಾಯಕರು ಇದ್ದಾರಾ? ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರಲ್ಲಿ ಬಿಜೆಪಿಯ ಒಬ್ಬರೂ ಇಲ್ಲ. ಕಾಂಗ್ರೆಸ್ ನಲ್ಲಿ ಮಾತ್ರ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು ಇದ್ದಾರೆ ಎಂದು ತಂಗಡಗಿ ಹೇಳಿದರು.
ಟಾಪ್ ನ್ಯೂಸ್
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Koppala; ಪೊಳ್ಳು ಭರವಸೆಗಳನ್ನು ಮುಂದುವರಿಸಿದ ವಿತ್ತ ಸಚಿವರು: ತಂಗಡಗಿ ಟೀಕೆ](https://www.udayavani.com/wp-content/uploads/2024/07/shivaraj-150x83.jpg)
Budget 2024; ಪೊಳ್ಳು ಭರವಸೆಗಳನ್ನು ಮುಂದುವರಿಸಿದ ವಿತ್ತ ಸಚಿವರು: ತಂಗಡಗಿ ಟೀಕೆ
![3-koppala](https://www.udayavani.com/wp-content/uploads/2024/07/3-koppala-150x90.jpg)
Koppala: ಅಪರಿಚಿತ ವಾಹನ ಡಿಕ್ಕಿಯಾಗಿ ಕರ್ತವ್ಯನಿರತ ಎಎಸ್ಐ ಸ್ಥಳದಲ್ಲೇ ಸಾವು
![Gangavathi: ಕುಡಿದ ಮತ್ತಿನಲ್ಲಿ ರೈಲ್ವೇ ಹಳಿ ಮೇಲೆ ಮಲಗಿದ್ದ ಮೂವರು ಯುವಕರ ಮೇಲೆ ಹರಿದ ರೈಲು](https://www.udayavani.com/wp-content/uploads/2024/07/train-6-150x100.jpg)
Gangavathi: ಹಳಿ ಮೇಲೆ ಕುಳಿತು ಮದ್ಯ ಸೇವಿಸುತ್ತಿದ್ದ ಮೂವರು ಯುವಕರ ಮೇಲೆಯೇ ಹರಿದ ರೈಲು
![ಕೊಪ್ಪಳ: ಆಮೆಗತಿಗಿಂತಲೂ ನಿಧಾನ ರಂಗಮಂದಿರ ನಿರ್ಮಾಣ](https://www.udayavani.com/wp-content/uploads/2024/07/Koppal-150x72.jpg)
ಕೊಪ್ಪಳ: ಆಮೆಗತಿಗಿಂತಲೂ ನಿಧಾನ ರಂಗಮಂದಿರ ನಿರ್ಮಾಣ
![Tungabhadra Dam: Increased inflows release water to canals from June 19](https://www.udayavani.com/wp-content/uploads/2024/07/tunga-150x83.jpg)
Tungabhadra Dam: ಹೆಚ್ಚಿದ ಒಳಹರಿವು; ಜು.19 ರಿಂದ ಕಾಲುವೆಗಳಿಗೆ ನೀರು ಬಿಡುಗಡೆ
MUST WATCH
ಹೊಸ ಸೇರ್ಪಡೆ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
![1-aaasdeqweqw](https://www.udayavani.com/wp-content/uploads/2024/07/1-aaasdeqweqw-150x100.jpg)
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.