ಗಂಗಾವತಿ: ಜಂಗಮರ ಕಲ್ಗುಡಿ; 51ಅಡಿ ಎತ್ತರದ ಶ್ರೀ ಆಂಜನೇಯ ಮೂರ್ತಿಗೆ ಕ್ಷೀರಾಭಿಷೇಕ
Team Udayavani, Mar 26, 2022, 2:40 PM IST
ಗಂಗಾವತಿ: ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿರುವ 51 ಅಡಿ ಎತ್ತರದ ಆಂಜನೇಯನ ಮೂರ್ತಿಗೆ ಶನಿವಾರದಂದು ಪೂಜಾ ಕಾರ್ಯಕ್ರಮ ಜರುಗಿತು.
ಮೂರ್ತಿ ಸ್ಥಾಪನೆಯ ದಶಮಾನೋತ್ಸವ ನಿಮಿತ್ತ ಆಂಜನಮೂರ್ತಿಗೆ ಹೊಸ ಬಣ್ಣವನ್ನು ಲೇಪನ ಮಾಡಿ ಬೆಳಗಿನ ಜಾವ ಜಲಾಭಿಷೇಕ ಕ್ಷೀರಾಭಿಷೇಕ ಮಾಡಿ ಪೂಜೆ ನೆರವೇರಿಸಲಾಯಿತು.
ಜಂಗಮರ ಕಲ್ಗುಡಿ ಗ್ರಾಮದಲ್ಲಿ ರೈತಾಪಿ ಹೆಚ್ಚಾಗಿದ್ದು ಪ್ರತಿವರ್ಷ ಆಂಜನೇಯನಿಗೆ ಕ್ಷೀರಾಭಿಷೇಕ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸುತ್ತಾರೆ. 51 ಅಡಿ ಎತ್ತರದ ಹನುಮನ ಮೂರ್ತಿಗೆ ಹೊಸದಾಗಿ ಬಣ್ಣ ಹಚ್ಚಿದ್ದು ಇದರ ನಿಮಿತ್ಯ ವಿಶೇಷ ಪೂಜೆ ಮತ್ತು ಕ್ಷೀರಾಭಿಷೇಕ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಯಡ್ಲಪಲ್ಲಿ ಆನಂದ್ರಾವ್ ಸರ್ವೇಶ್ ಮಾಂತಗೊಂಡ, ಜಾನಕಿರಾಮ್, ನಾಗೇಶ್ವರ್ ರಾವ್,ಪ್ರಸಾದ್ ,ದುರ್ಗಾ ನಾಗೇಶ್ವರ್ ರಾವ್, ಟಿ ರಾಮಕೃಷ್ಣ ,ಎನ್ ಕೃಷ್ಣ, ರಾಮಕೃಷ್ಣ ಸೇರಿದಂತೆ ಕೋದಂಡರಾಮ ಟ್ರಸ್ಟ್ ಕಮಿಟಿಯ ಸದಸ್ಯರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.