Kushtagi; ಸೀಮಂತ ಸಂಭ್ರಮದಲ್ಲಿ ಭ್ರೂಣ ಹತ್ಯೆ ನಿಲ್ಲಿಸಿ ಜಾಗೃತಿ
Team Udayavani, Jan 8, 2024, 8:51 PM IST
ಕುಷ್ಟಗಿ:ತಾಲೂಕಿನ ಕಡೇಕೊಪ್ಪ ಗ್ರಾಮದ ರೇಖಾ ನಿಂಗಪ್ಪ ಜೀಗೇರಿ ಅವರ ಸೀಮಂತ ಕಾರ್ಯಕ್ರಮದಲ್ಲಿ ಹೆಣ್ಣು ಭ್ರೂಣ ಹತ್ಯೆ ಮಹಾ ಅಪರಾಧದ ಬಗ್ಗೆ ಜಾಗೃತಿ ಸಂದೇಶ ಮೂಡಿಸಿದ ಸಾಮಾಜಿಕ ಕಾಳಜಿಯ ಮಾದರಿ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ರಾಜ್ಯವನ್ನು ಬೆಚ್ಚಿ ಬೀಳಿಸಿದ ಇತ್ತೀಚಿನ ಮಂಡ್ಯ ಜಿಲ್ಲೆ ಅಲೆಮನೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ, ಈ ಬಗ್ಗೆ ಜಾಗೃತಿ ಮೂಡಿಸಲು, ಕಡೇಕೊಪ್ಪ ಗ್ರಾಮದ ನಿಂಗಪ್ಪ ಜೀಗೇರಿ ಮುಂದಾಗಿರುವುದು ಗಮನಾರ್ಹವಾಗಿದೆ.
ಹೆಣ್ಣು ಬ್ರೂಣ ಹತ್ಯೆ ತಡೆಗೆ ಕೇವಲ ಕಾಯ್ದೆ ಕಾನೂನುಗಳಿಂದ ನಿಯಂತ್ರಿಸುವುದು ಕಷ್ಟ ಸಾದ್ಯದ ಪರಿಸ್ಥಿತಿಯಲ್ಲಿ ಕಡೇಕೊಪ್ಪದ ಯುವಕ ನಿಂಗಪ್ಪ ಜೀಗೇರಿ ಅವರ ಸಾಮಾಜಿಕ ಕಾಳಜಿ ಗಮನ ಸೆಳೆದಿದೆ.
ಸೋಮವಾರ ಕಡೇಕೊಪ್ಪ ಗ್ರಾಮದಲ್ಲಿ ತಮ್ಮ ಪತ್ನಿ ರೇಖಾ ಜೀಗೇರಿ ಅವರ ಚೊಚ್ಚಲ ಸೀಮಂತದ ಕುಟುಂಬದ ಕಾರ್ಯಕ್ರಮದಲ್ಲಿ ಹೆಣ್ಣು ಭ್ರೂಣ ಹತ್ಯೆ ಮಹಾ ಅಪರಾಧ ಎನ್ನುವ ಸಾಲುಗಳನ್ನು ಬರೆಯಿಸಿ, ಚಿತ್ರದಲ್ಲಿ ಭ್ರೂಣ ಹತ್ಯೆಗೆ ತಡೆಯುವ ಚಿತ್ರಿಸಿ ಪ್ರದರ್ಶಿಸಿ ಗಮನ ಸೆಳೆದಿದ್ದಾರೆ. ಈ ಕುರಿತು ನಿಂಗಪ್ಪ ಜೀಗೇರಿ ಮಾತನಾಡಿ, ಇದು ಬರೀ ಪ್ರಚಾರಕ್ಕೆ ಅಲ್ಲ ನನ್ನ ನೈತಿಕ ಜವಾಬ್ದಾರಿ ಕೂಡ ಆಗಿದೆ. ಹೆಣ್ಣು ಭ್ರೂಣ ಹತ್ಯೆಯಂತಹ ಮಹಾಪಾಪ ಮಾಡುವವರಿಗೆ ಕಠಿಣ ಕಾನೂನು ಹಾಗೂ ಸಾಮಾಜಿಕ ಜಾಗೃತಿ ಅರಿವು ಮೂಡಿಸುವ ಎಚ್ಚರಿಕೆ ಸಂದೇಶ ಇದಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ