ಕುಷ್ಟಗಿ: ಪುರಸಭೆ ಅನುಮತಿ ಪಡೆಯದೇ ಖಾಸಗಿ ವಿದ್ಯುತ್ ಉತ್ಪಾದನಾ ಕಂಪೆನಿಯಿಂದ ರಸ್ತೆ ನಿರ್ಮಾಣ
Team Udayavani, Dec 27, 2022, 7:04 PM IST
ಕುಷ್ಟಗಿ: ಕುಷ್ಟಗಿ ಪಟ್ಟಣದ ಹೊರವಲಯದಲ್ಲಿ ಸ್ಥಳೀಯ ಪುರಸಭೆಯ ಗಮನಕ್ಕಿಲ್ಲದೇ 2 ಕಿ.ಮೀ. ಪರ್ಯಾಯವಾಗಿ ಪವನ ವಿದ್ಯುತ್ ಉತ್ಪದನಾ ಖಾಸಗಿ ಕಂಪನಿಯ ತಾತ್ಕಾಲಿಕ ರಸ್ತೆ ನಿರ್ಮಿಸುತ್ತಿರುವುದು ಬೆಳಕಿಗೆ ಬಂದಿದೆ.
ಈ ಹೊಸ ರಸ್ತೆಯು ಕುಷ್ಟಗಿ – ಹೊಸಪೇಟೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಿಂದ (ಕಾರ್ಗಿಲ್ ಪೆಟ್ರೋಲ್ ಬಂಕ್ ಹತ್ತಿರ) 1ನೇ ವಾರ್ಡ್ ವ್ಯಾಪ್ತಿಯ ಸಂತ ಶಿಶುನಾಳ ಷರೀಪ್ ಕಾಲೋನಿ, ಕಂದಕೂರು ರಸ್ತೆ ಕ್ರಾಸ್ ಆಗಿ, ಸಿಂಧನೂರು ರಸ್ತೆಗೆ ಸಂಪರ್ಕ ರಸ್ತೆ ಇದಾಗಿದೆ. 40 ಅಡಿ ಅಗಲೀಕರಿಸಿದ ಈ ರಸ್ತೆಯಲ್ಲಿ ಮರಮ್ ಮಣ್ಣಿನ ರಸ್ತೆ ನಿರ್ಮಿಸುವ ಕಾರ್ಯದಲ್ಲಿ ಜೆಸಿಬಿ, ಹಿಟಾಚಿ, ಟಿಪ್ಪರ್ ಟ್ರಾಕ್ಟರ್ ಗಳು ನಿರತವಾಗಿರುವುದು ಕಂಡು ಬಂದಿದೆ. ಸಂತ ಶಿಶುನಾಳ ಷರೀಫ್ ಕಾಲೋನಿಯ ಹಿಂಭಾಗದಲ್ಲಿ ರೈತರ ಕಡಲೆ, ಜೋಳದ ಬೆಳೆಯ ಮಧ್ಯೆ ಈ ರಸ್ತೆಯನ್ನು ರೈತರಿಗೆ ಬೆಳೆ ಪರಿಹಾರ ನೀಡಿ, 1 ವರ್ಷದ ಒಪ್ಪಂದದ ಆಧಾರದಲ್ಲಿ ನಿರ್ಮಿಸುತ್ತಿದ್ದಾರೆ. ಈ ತಾತ್ಕಾಲಿಕ ರಸ್ತೆಯಲ್ಲಿ ರೈತರ ಜಮೀನು, ಖಾಲಿ ಜಮೀನು, . ನಿವೇಶನಗಳಿದ್ದರೂ, ಪುರಸಭೆ ಗಮನಕ್ಕೆ ತರದೇ ಈ ರಸ್ತೆ ನಿರ್ಮಿಸಿದೆ.
ಪರ್ಯಾಯ ರಸ್ತೆ: ಪವನ ವಿದ್ಯುತ್ ಉತ್ಪಾದನಾ ಖಾಸಗಿ ಕಂಪನಿ, ಗಾಳಿಯಂತ್ರದ ಬ್ಲೇಡ್ (ರೆಕ್ಕೆ), ಟರ್ಬನ್ ಗಳನ್ನು ಒಂದೆಡೆ ಸಂಗ್ರಹಿಸಲು ಗುಮಗೇರಾ ಬಳಿ 10 ಎಕರೆ ಪ್ರದೇಶ ಸ್ಟಾಕ್ ಯಾರ್ಡ್ ನಿಗದಿಗೊಳಿಸಿದೆ. ಬೃಹತ್ ಗಾಳಿ ಯಂತ್ರಗಳ ರೆಕ್ಕೆಗಳನ್ನು ಹೊತ್ತು ತರುವ ವಾಹನಗಳು ಹೊಸಪೇಟೆ ಕಡೆಯಿಂದ, ಹೆದ್ದಾರಿ ಮೂಲಕ ಪಟ್ಟಣಕ್ಕೆ ಆಗಮಿಸಿ. ಪಟ್ಟಣದ ಸರ್ವಿಸ್ ರಸ್ತೆಯ ಮೂಲಕ ಹೆದ್ದಾರಿ ಮೇಲ್ಸೇತುವೆ ಕೆಳಗೆ ತಿರುವು ಮಾಡಿಕೊಂಡು ಸಿಂಧನೂರು ರಸ್ತೆಯ ಮೂಲಕ ಗುಮಗೇರಿಗೆ ಹೋಗುವುದು ಅಸಾಧ್ಯವಾಗಿದೆ. ಯಾಕೆಂದರೆ ಗಾಳಿಯಂತ್ರದ ರೆಕ್ಕೆಗಳು ಮೇಲ್ಸೇತುವೆಗೆ ತಾಕುವ ಹಿನ್ನೆಲೆಯಲ್ಲಿ ಬದಲಾದ ಈ ವ್ಯವಸ್ಥೆಯಾಗಿದೆ. ಹೀಗಾಗಿ ಪಟ್ಟಣದ ಹೊರವಲಯದಲ್ಲಿ ಸದ್ದಿಲ್ಲದೇ ಈ ಖಾಸಗಿ ರಸ್ತೆ 1 ವರ್ಷದ ಕಾಲಾವಧಿಗೆ ಮಾತ್ರ ಒಪ್ಪಂದವಾಗಿದೆ.
ಪುರಸಭೆ ವ್ಯಾಪ್ತಿಯಲ್ಲಿ ಪವನ ವಿದ್ಯುತ್ ಉತ್ಪಾದನಾ ಖಾಸಗಿ ರಸ್ತೆ ನಿರ್ಮಿಸುತ್ತಿರುವುದು ಸರಿ. ಇದು ಖಾಸಗಿ ಕಂಪನಿಯಾಗಿದ್ದು, ಆದರೆ ಕಡೇ ಪಕ್ಷ ಪುರಸಭೆ ಅನುಮತಿ ಪಡೆಯದೇ ತಾತ್ಕಾಲಿಕ ನಿರ್ಮಿಸಿದೆ. ಇದರಿಂದ ಕೆಲವರ ನಿವೇಶನ, ರೈತರ ಜಮೀನು ಹಾಳಾಗಿವೆ. ಸದ್ಯ ತಾತ್ಕಾಲಿಕ ರಸ್ತೆ ಇದು ಮುಂದೆ ಖಾಯಂ ರಸ್ತೆಯಾಗುವ ಸಂಭವವಿದೆ. ಸಂಬಂಧಿಸಿದ ಕಂಪನಿಯನ್ನು ವಿಚಾರಿಸಿದರೂ ಕ್ಯಾರೇ ಎನ್ನದೇ ನಿರ್ಮಿಸಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರಗೆ ದೂರು ನೀಡಿದ್ದೇವೆ.
– ಗಂಗಾಧರಸ್ವಾಮಿ ಹಿರೇಮಠ ಅಧ್ಯಕ್ಷ ಪುರಸಭೆ ಕುಷ್ಟಗಿ
ಇದನ್ನೂ ಓದಿ: ಕ್ರಿಸ್ಮಸ್, ಹೊಸ ವರ್ಷ ಸಂಭ್ರಮಾಚರಣೆ ಹಿನ್ನೆಲೆ: ಗೋವಾದಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
MUST WATCH
ಹೊಸ ಸೇರ್ಪಡೆ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ