ಪತಿಯ ಜೀವರಕ್ಷಣೆಗೆ ಮಾಂಗಲ್ಯದಲ್ಲಿನ ಹವಳ ತುಂಡರಿಸಿದರು!


Team Udayavani, Jul 6, 2017, 3:45 AM IST

Ban06071707Medn.jpg

ಕೊಪ್ಪಳ: ಮಾಂಗಲ್ಯದೊಳಗಿನ ಹವಳ ತುಂಡರಿಸದಿದ್ದಲ್ಲಿ ಪತಿ ಜೀವಕ್ಕೆ ಕಂಟಕ ಎಂಬ ಗಾಳಿ ಸುದ್ದಿ ಮಂಗಳವಾರ ರಾತ್ರಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಉತ್ತರ ಕರ್ನಾಟಕದಾದ್ಯಂತ ಸಂಚಲನ ಸೃಷ್ಟಿಸಿತು. ಇದನ್ನು ನಂಬಿದ ಮುತ್ತೈದೆಯರು ರಾತ್ರೋ ರಾತ್ರಿ ತಮ್ಮ ಮಾಂಗಲ್ಯ ಸರದಲ್ಲಿನ ಕೆಂಪು ಹರಳುಗಳನ್ನು ಒಡೆದು ಹಾಕತೊಡಗಿದರು. ಕೊಪ್ಪಳ, 
ದಾವಣಗೆರೆ, ರಾಯಚೂರು, ಬಾಗಲಕೋಟೆ ಸೇರಿದಂತೆ ಮಧ್ಯ ಉತ್ತರ ಕರ್ನಾಟಕದಾದ್ಯಂತ ಇದೊಂದು ಸಮೂಹ ಸನ್ನಿಯಂತೆ ಹರಡಿತು.

ಮಂಗಳವಾರ ರಾತ್ರಿ ಇದ್ದಕ್ಕಿದ್ದಂತೆ ಮಾಂಗಲ್ಯದಲ್ಲಿ ಕೆಂಪು ಹರಳು ಧರಿಸಿದ್ದರೆ, ಅದು ಜೀವಂತವಾಗಿರುತ್ತೆ. ನಾನಾ ರೀತಿಯಲ್ಲಿ ಶಬ್ದ ಮಾಡಿಸುತ್ತೆ. ಇದನ್ನು ಧರಿಸಿದರೆ ಪತಿಯ ಜೀವಕ್ಕೆ ಕಂಟಕವಿದೆ. ಕೂಡಲೇ ಇದನ್ನು ಒಡೆದು ಹಾಕಿ ಎನ್ನುವ ಮಾತು ಮಹಿಳೆಯರ ಕಿವಿಗೆ ಬೀಳತೊಡಗಿತು. ಹೀಗೆ ಮಾಡದಿದ್ದರೆ ಪತಿಯ ಜೀವಕ್ಕೆ ಕಂಟಕ ಎಂದು ಜ್ಯೋತಿಷಿಗಳು ಹೇಳಿದ್ದಾರೆ.

ಯಾವುದೋ ಊರಿನಲ್ಲಿ ಐವರು ಜೀವ ಕಳೆದುಕೊಂಡಿದ್ದಾರಂತೆ ಎಂಬ ಮಾತುಗಳು ಹರಿದಾಡಿದವು. ಕೆಲವರು ತಮ್ಮ
ಸಂಬಂಧಿ ಕರ ಮನೆಗೆಲ್ಲ ತಡರಾತ್ರಿ ಕರೆ ಮಾಡಿ ಮಾಹಿತಿ ನೀಡಿದರು. ಒಬ್ಬರಿಂದ ಮತ್ತೂಬ್ಬರಿಗೆ ಈ ಸುದ್ದಿ ಹರಡಿ ಬೆಳಗಿನ ಜಾವದವರೆಗೂ ಜಾಗರಣೆ ಮಾಡುವಂತೆ ಮಾಡಿತು. ಮೊಬೈಲ್‌,ವಾಟ್ಸಪ್‌ಗ್ಳಲ್ಲಿ ವಿವಿಧ ನಮೂನೆಯ ಸುದ್ದಿಗಳು ಹರಿದಾಡತೊಡಗಿದವು.ಇದನ್ನು ನಂಬಿದ ಮುತೈದೆಯರು ರಾತ್ರಿಯೆಲ್ಲ ನಿದ್ದೆಗೆಟ್ಟು ಕೊರಳಲ್ಲಿನ ತಾಳಿ ತೆಗೆದು ಅದರಲ್ಲಿ ಜೋಡಿಸಿದ್ದ ಹರಳುಗಳನ್ನು ಕೂಡಲೇ ಒಡೆದು ಹಾಕಿ ಪತಿರಾಯರಿಗೆ ಜೀವರಕ್ಷೆ ಕೊಡಲು ದೇವರ ಮೋರೆ ಹೋದ ಪ್ರಸಂಗಗಳೂ ನಡೆದವು. ಕೆಲವು ವಿದ್ಯಾವಂತ ಮಹಿಳೆಯರೂ ಮಾಂಗಲ್ಯದಲ್ಲಿದ್ದ ಹವಳ ಜಜ್ಜಿ ಮುರಿದುಕೊಂಡರು. ಬುಧವಾರ ಬೆಳಗ್ಗೆ ಈ ವಿಚಾರ ಮತ್ತಷ್ಟು ವೇಗ ಪಡೆದಿದ್ದು, ಆಗಲೂ ಸಾಕಷ್ಟು ಮಹಿಳೆಯರು ತಮ್ಮ ಮಾಂಗಲ್ಯದಲ್ಲಿದ್ದ ಹವಳ ತೆಗೆದು ಜಜ್ಜಿದ್ದಾರೆ. ಬುಧವಾರ ಮಧ್ಯಾಹ್ನದ ವೇಳೆಗೆ ಇದೊಂದು ವದಂತಿ ಎಂಬ ಸತ್ಯ ಸಂಗತಿ ಬಯಲಾಯಿತು. ಬೆಳಗ್ಗೆ ಸತ್ಯಾಂಶ ತಿಳಿದ ಬಳಿಕ ತಮ್ಮ ಕೃತ್ಯಕ್ಕೆ ಪಶ್ಚಾತ್ತಾಪ ಪಟ್ಟಿದ್ದಾರೆ.

ತಾಳಿಯಲ್ಲಿರುವ ಹವಳಗಳನ್ನು ಅರ್ಧ ಗಂಟೆಯೊಳಗೆ ಜಜ್ಜಿ ಹೊರಚೆಲ್ಲಿ. ಇಲ್ಲದಿದ್ದರೆ ನಿಮ್ಮ ಪತಿಗೆ ಸಾವು ಬರುತ್ತದೆ ಎಂದು ಸಂಬಂಧಿಕರು ಹೇಳಿದ್ದರು.ಅದಕ್ಕೆ ಹವಳ ಜಜ್ಜಲು ಹೋಗಿ ಚಿನ್ನವನ್ನೂ ಮುರಿದು ಎಸೆದಿದ್ದೇವೆ.
– ಗೀತಾ ಹಾದಿಮನಿ, ಮಾರನಬಸರಿ ನಿವಾಸಿ

ಟಾಪ್ ನ್ಯೂಸ್

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.