ರಸ್ತೆ ಕಾಮಗಾರಿಗೆ ಚಾಲನೆ
Team Udayavani, Jun 1, 2020, 4:56 PM IST
ಕಾರಟಗಿ: ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಎಸ್ಎಫ್ಸಿ ವಿಶೇಷ ಯೋಜನೆಯಡಿ ಎರಡು ವಾರ್ಡ್ ಗಳಲ್ಲಿ ಸುಸಜ್ಜಿತ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಬಸವರಾಜ ದಢೇಸುಗೂರು ಹೇಳಿದರು.
ಶನಿವಾರ ಪಟ್ಟಣದ 12ನೇ ವಾರ್ಡ್ನ ರಾಜೀವ್ ಗಾಂಧಿ ನಗರದಲ್ಲಿ ಹಾಗೂ 9ನೇ ವಾರ್ಡ್ನ ಬಸವೇಶ್ವರ ನಗರದಲ್ಲಿ ಕಾಂಕ್ರೀಟ್ ರಸ್ತೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಪಟ್ಟಣದ 9 ಮತ್ತು 12ನೇ ವಾರ್ಡ್ ನಿವಾಸಿಗಳ ಬಹುದಿನದ ಬೇಡಿಕೆ ಮೇರೆಗೆ ವಾರ್ಡ್ನಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಉಭಯ ವಾರ್ಡ್ಗಳಲ್ಲಿ ಕೂಲಿ ಕಾರ್ಮಿಕರೇ ಸಾಕಷ್ಟು ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಅಲ್ಲಿನ ನಿವಾಸಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಸ್ತೆ ನಿರ್ಮಿಸಲಾಗುತ್ತಿದೆ. ಕಾಂಕ್ರೀಟ್ ರಸ್ತೆ ನಿರ್ಮಾಣದಲ್ಲಿ ಯಾವುದೇ ಲೋಪ ದೋಷಗಳ ನಡೆಯದಂತೆ ರಸ್ತೆ ನಿರ್ಮಿಸಲೂ ಸೂಚಿಸಲಾಗಿದೆ ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಎನ್. ಶಿವಲಿಂಗಪ್ಪ, ರಾಘವೇಂದ್ರ, ಮಂಜುನಾಥ, ನಾಗರಾಜ ತಳವಾರ, ಚನ್ನಬಸವ, ಪುರಸಭೆ ಸದಸ್ಯರಾದ ಚನ್ನಮ್ಮ ಶೀಲವಂತರ, ಜಿ. ತಿಮ್ಮನಗೌಡ, ಸಂಗನಗೌಡ, ಮಾಹಾದೇವಿ ಭಜಂತ್ರಿ, ಯೂಸುಫ್, ಪ್ರಮುಖರಾದ ಹರೆಬಸಪ್ಪ ಸಜ್ಜನ, ನಾಗರಾಜ ಬಿಲ್ಗಾರ, ಚನ್ನಬಸವ ಸುಂಕದ, ಅಮರೇಶ ಪಾಟೀಲ್, ಶಿವಶರಣೆಗೌಡ, ಜೆ. ರಾಮರಾವ್, ಶಿವು ಶೀಲವಂತರ, ಕರಿಬಸಪ್ಪ ಬೂದಗುಂಪ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ
Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ
Lok Sabha ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನ ಗೆಲ್ಲಲ್ಲ: ಶ್ರೀರಾಮುಲು
Congress ಪ್ರಧಾನಿ ಅಭ್ಯರ್ಥಿ ಯಾರು ಹೇಳಿ ನೋಡೋಣ: ಯಡಿಯೂರಪ್ಪ
Karadi Sanganna: ಬಿಜೆಪಿ ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಗೊಂಡ ಸಂಗಣ್ಣ ಕರಡಿ