Koppala; ಮನವೊಲಿಸಿದ ಸಚಿವ ತಂಗಡಗಿ; ಉಪವಾಸ ಸತ್ಯಾಗ್ರಹ ಕೈಬಿಟ್ಟ ಸಂಗಣ್ಣ ಕರಡಿ
Team Udayavani, Nov 7, 2023, 1:26 PM IST
ಕೊಪ್ಪಳ: ರೈತರ ಪಂಪ್ ಸೆಟ್ ಗೆ ಮೂಲಸೌಕರ್ಯ ಕಲ್ಪಿಸುವ ಆದೇಶ ರದ್ದತಿ ಮುಂದುವರೆಸಬೇಕೆಂದು ಒತ್ತಾಯಿಸಿ ಕೊಪ್ಪಳ ಡಿಸಿ ಕಚೇರಿ ಮುಂದೆ ಸೋಮವಾರದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಬಿಜೆಪಿ ಸಂಸದ ಸಂಗಣ್ಣ ಕರಡಿ ಅವರು ಇಂದು ಸತ್ಯಾಗ್ರಹ ಕೈಬಿಟ್ಟಿದ್ದಾರೆ. ಸಚಿವ ಶಿವರಾಜ ತಂಗಡಗಿ ಅವರ ಮನವೊಲಿಕೆಯ ಹಿನ್ನೆಲೆಯಲ್ಲಿ ಸಂಗಣ್ಣ ಕರಡಿ ಉಪವಾಸ ಸತ್ಯಾಗ್ರಹ ಕೈ ಬಿಟ್ಟಿದ್ದಾರೆ.
ನ.9ನೇ ತಾರೀಖಿನೊಳಗೆ ಈ ಕುರಿತು ನಿರ್ಧರಿಸುವ ತಂಗಡಗಿ ಬಗೆಹರಿಸಬೇಕು. ಆ ಧೈರ್ಯ ನೀಡದಿದ್ದರೆ ಮಾತು ಕೊಡಿ ಎಂದು ಸಂಗಣ್ಣ ಕರಡಿ ಪಟ್ಟು ಹಿಡಿದರು.
ವಿದ್ಯುತ್ ಉಪಕರಣಗಳನ್ನು 500 ಮೀಟರ್ ಒಳಗೆ ಸರಕಾರ ನೀಡುತ್ತಿದೆ. 500 ಮೀಟರ್ ನಂತರ ಇರುವ ಪಂಪಸೆಟ್ಗಳಿಗೆ ಸೋಲಾರ ಅಳವಡಿಕೆಯಾಗಬೇಕು. ಈ ಕುರಿತು ಸಿಎಂ ಹಾಗು ಇಂಧನ ಸಚಿವರೊಂದಿಗೆ ಮಾತನಾಡಿದ್ದೇವೆ. ನ 9 ರಂದು ಕ್ಯಾಬಿನಟ್ ತೀರ್ಮಾನಿಸಲಾಗುವುದು. ಅಲ್ಲಿಯವರೆಗೂ ಉಪವಾಸ ಸತ್ಯಾಗ್ರಹ ನಿಲ್ಲಿಸಲು ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಸಂಸದರು ಉಪವಾಸ ಸತ್ಯಾಗ್ರಹ ಕೈ ಬಿಟ್ಟರು.
ಧರಣಿ ನಿರತ ಸಂಸದರಿಗೆ ಸಚಿವ ಶಿವರಾಜ ತಂಗಡಗಿ ಎಳೆ ನೀರು ಕುಡಿಸಿ ಸತ್ಯಾಗ್ರಹ ಅಂತ್ಯಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ