ಮೈತ್ರಿ ಸರ್ಕಾರಕ್ಕೆ ಪೂರ್ಣ ಆಯುಷ್ಯವಿಲ್ಲ
Team Udayavani, Jun 3, 2018, 6:30 AM IST
ಕೊಪ್ಪಳ: ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಮಾಡಿದೆ. ಆದರೆ ಈ ಮೈತ್ರಿ ಸರ್ಕಾರಕ್ಕೆ
ಪೂರ್ಣ ಆಯುಷ್ಯವಿಲ್ಲ ಎಂದು ಶಾಸಕ ಬಿ. ಶ್ರೀರಾಮುಲು ಪುನರುಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಇತಿಹಾಸದಲ್ಲಿ 1947ರಿಂದಲೂ ವಿವಿಧ ಅಂಗ ಪಕ್ಷಗಳು ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಿವೆ. ಆದರೆ ಅಂತಹ ಯಾವುದೇ ಸರ್ಕಾರಗಳು ಪೂರ್ಣಾವಧಿ ಆಡಳಿತ ನಡೆಸಿಲ್ಲ.
ರಾಜ್ಯದಲ್ಲಿ ತೃತೀಯ ರಂಗ ಪ್ರದರ್ಶನ ನಡೆಸಲಿ. ಮಿತ್ರ ಪಕ್ಷಗಳು ತಮ್ಮ ಮೈತ್ರಿ ತೋರಿಸಲಿ. ಆದರೆ ಅವುಗಳು
ಕೆಲ ದಿನಗಳು ಮಾತ್ರ ಒಟ್ಟಾಗಿ ಇರುತ್ತವೆ. ನಂತರ ಬಿಟ್ಟು ಹೋಗುತ್ತವೆ ಎಂದರು. ಮೈತ್ರಿ ಸರ್ಕಾರದಲ್ಲಿ ಸಚಿವ
ಸಂಪುಟ ರಚನೆಯ ಮೇಲೆ ನಾವೇನು ಕಣ್ಣಿಟ್ಟಿಲ್ಲ.
ಯಾವುದೇ ಕಾದು ನೋಡುವ ಕೆಲಸವನ್ನೂ ನಾವು ಮಾಡಿಲ್ಲ. ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು
ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ತಮ್ಮ ಪಕ್ಷದ
ಪ್ರಣಾಳಿಕೆಯಲ್ಲಿಯೇ ಲಿಖೀತವಾಗಿ ಭರವಸೆ ನೀಡಿದ್ದರು. ಮೊದಲು ಅವರು ನುಡಿದಂತೆ ನಡೆದುಕೊಳ್ಳಲಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drought Relief: ಕಾಂಗ್ರೆಸ್-ಬಿಜೆಪಿ ಬರ ಪರಿಹಾರ ಜಟಾಪಟಿ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ