ಮಾದಾಪೂರ ಶಾಲೆಗೆ ಮತ್ತೂಬ್ಬ ಅತಿಥಿ ಶಿಕ್ಷಕರ ನೇಮಕ
Team Udayavani, Jan 29, 2020, 4:24 PM IST
ಸಾಂಧರ್ಬಿಕ ಚಿತ್ರ
ದೋಟಿಹಾಳ: ಮಾದಾಪೂರ ಸರ್ಕಾರಿ ಶಾಲೆಗೆ ಸಾಸ್ವಿಹಾಳ ಶಾಲೆಯ ಅತಿಥಿ ಶಿಕ್ಷಕ ಶಿವುರಾಜ ನಾಡಗೌಡ ಅವರನ್ನು ನಿಯೋಜನೆ ಮಾಡಲಾಗಿದೆ. ಉದಯವಾಣಿ ಪತ್ರಿಕೆಯಲ್ಲಿ “ಮಾದಾಪೂರ ಶಾಲೆಯಲ್ಲಿ ಶಿಕ್ಷಕರ ಕೊರತೆ’ ಶೀರ್ಷಿಕೆಯಡಿ ಜ.24ರಂದು ಪ್ರಕಟಗೊಂಡ ವರದಿಗೆ ಎಚ್ಚೆತ್ತ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾದಾಪೂರ ಶಾಲೆಗೆ ಇನ್ನೊಬ್ಬ ಅತಿಥಿ ಶಿಕ್ಷಕರನ್ನು ನಿಯೋಜನೆ ಮಾಡಿದ್ದಾರೆ.
ಮಾದಾಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 123 ಮಕ್ಕಳಿದ್ದು, ಅವರಿಗೆ 3 ಜನ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಇದರಲ್ಲಿ ಒಬ್ಬ ಶಿಕ್ಷಕಿ ಹೆರಿಗೆ ರಜೆ ಮೇಲೆ ತೆರಳಿದ್ದಾಳೆ. ಒಬ್ಬ ಶಿಕ್ಷಕ ಶಾಲೆ ದಾಖಲಾತಿ ಸರಿಪಡಿಸಿಕೊಂಡರೆ, ಇನ್ನುಳಿದ ಇಬ್ಬರ ಅತಿಥಿ ಶಿಕ್ಷಕರ ಮೇಲೆ ಶಾಲೆ ನಡೆಯುತ್ತಿದೆ. 1-3ನೇ ತರಗತಿಗೆ ಒಟ್ಟು 63 ಮಕ್ಕಳಿದ್ದು, ಎರಡು ನಲಿ-ಕಲಿ ತರಗತಿ ಮಾಡಿಕೊಂಡು ಶಾಲಾ ಪ್ರಭಾರಿ ಮುಖ್ಯಗುರುಗಳು ಪಾಠ ಮಾಡುತ್ತಾರೆ. ಹೀಗಾಗಿ 4, 5, 6 ಮತ್ತು 7ನೇ ತರಗತಿಗಳ ಮಕ್ಕಳಿಗೆ ಅತಿಥಿ ಶಿಕ್ಷಕರೇ ಪಾಠ ಮಾಡಬೇಕಾಗಿದೆ. ಇದರಿಂದ ಮಕ್ಕಳಿಗೆ ವಿಷಯವಾರು ಶಿಕ್ಷಕರಿಲ್ಲದ ಕಾರಣ ಮಕ್ಕಳು ಉತ್ತಮ ಶಿಕ್ಷಣದಿಂದ ವಂಚಿತರಾಗುತ್ತಿರುವುದನ್ನು ಗಮನಿಸಿ ವರದಿ ಪ್ರಕಟಿಸಿತ್ತು. ಹೀಗಾಗಿ ಸಮಸ್ಯೆಗೆ ಸ್ಪಂದಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಈಗ ಮತ್ತೂಬ್ಬ ಅತಿಥಿ ಶಿಕ್ಷಕರನ್ನು ನಿಯೋಜನೆ ಮಾಡಿದೆ.
ಈ ಕುರಿತು ಪ್ರಭಾರಿ ಮುಖ್ಯಗುರು ಬಸವರಾಜ ಅಂಬಳನೂರು ಪ್ರತಿಕ್ರಿಯೆ ನೀಡಿ, ನಮ್ಮ ಶಾಲೆಗೆ ಸಾಸ್ವಿಹಾಳ ಶಾಲಾ ಅತಿಥಿ ಶಿಕ್ಷಕ ಶಿವುರಾಜ ನಾಡಗೌಡ ಅವರನ್ನು ಕಳಿಸಿದ್ದಾರೆ. ಆದರೆ ಇದುವರೆಗೂ ನಮಗೆ ಯಾವುದೇ ಆದೇಶ ಬಂದಿಲ್ಲ. ಅತಿಥಿ ಶಿಕ್ಷಕರು ಶಾಲೆಗೆ ಬಂದು ಕಳೆದೆರಡು ದಿನಗಳಿಂದ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ