ರಾಯಚೂರು ರಸ್ತೆಯ ಅವೈಜ್ಞಾನಿಕ ವೇಬ್ರಿಡ್ಜ್ ನಿರಂತರ ಅಪಘಾತ: ಪೋಲಿಸ್ ಇಲಾಖೆ ನಿರ್ಲಕ್ಷ್ಯ
Team Udayavani, Apr 26, 2022, 1:29 PM IST
ಗಂಗಾವತಿ: ರಾಯಚೂರು ಕೊಪ್ಪಳ ರಸ್ತೆಯ ರಾಣಾಪ್ರತಾಪ್ ಸಿಂಗ್ ವೃತ್ತ ದಲ್ಲಿರುವ ಅವೈಜ್ಞಾನಿಕ ವೇ ಬ್ರಿಡ್ಜ್ ನಿಂದಾಗಿ ನಿತ್ಯವೂ ನೂರಾರು ಲಾರಿ ಬಸ್ಸುಗಳು ತಾಸುಗಟ್ಟಲೆ ನಿಲ್ಲುವುದರಿಂದ ಸಂಚಾರಕ್ಕೆ ವ್ಯತ್ಯಯವಾಗಿದೆ. ಇದರಿಂದ ನಿರಂತರ ಅಪಘಾತಗಳು ಜರುಗಿಸಿದ್ದರೂ ಸಂಚಾರಿ ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸಿದೆ.
ಇಲ್ಲಿ 2ವೇಬ್ರಿಜ್ ಗಳಿದ್ದು ಭತ್ತ ಕಟಾವು ಸಂದರ್ಭದಲ್ಲಿ ಲಾರಿಗಳು ತೂಕ ಮಾಡಿಸಲು ಆಗಮಿಸುವ ಸಂದರ್ಭದಲ್ಲಿ ನೂರಾರು ಲಾರಿಗಳು ನಿಲ್ಲುತ್ತವೆ ಅದರಿಂದ ರಾಯಚೂರು ಕೊಪ್ಪಳ ಮತ್ತು ಗಂಗಾವತಿ ನಗರ ಪ್ರವೇಶಿಸುವ ಬಸ್ ಗಳು ಕಾರ್ ಗಳು ಮತ್ತು ದ್ವಿಚಕ್ರ ವಾಹನಗಳು ತಾಸುಗಟ್ಟಲೆ ನಿಲ್ಲುವ ಪ್ರಸಂಗ ಉಂಟಾಗಿದೆ.
ಕೆಲವೊಮ್ಮೆ ಅಂಬ್ಯುಲೆನ್ಸ್ ಗಳು ಸಹ ನಿಲ್ಲುವುದರಿಂದ ರೋಗಿಗಳಿಗೆ ತೊಂದರೆಯಾಗಿದೆ. ರಾಯಚೂರು ಕೊಪ್ಪಳ ಕಂಪ್ಲಿ ಗಂಗಾವತಿ ನಗರಕ್ಕೆ ಪ್ರವೇಶ ಮಾಡುವ ವಾಹನಗಳು ಇಲ್ಲಿ ನಿಲ್ಲಬೇಕಾಗಿರುವುದರಿಂದ ಸಂಚಾರ ದಟ್ಟಣೆಯಾಗಿದೆ ಆದ್ದರಿಂದ ಎರಡೂ ವೇ ಬ್ರಿಡ್ಜ್ ಗಳನ್ನು ಸ್ಥಳಾಂತರಿಸುವಂತೆ ಸಂಘ ಸಂಸ್ಥೆಯವರು ಮನವಿ ಮಾಡಿದರೂ ಪೊಲೀಸ್ ಇಲಾಖೆ ಮತ್ತು ನಗರಸಭೆ ನಿರ್ಲಕ್ಷ್ಯ ವಹಿಸಿರುವುದು ಕಂಡು ಬರುತ್ತಿದೆ.
ದೂರದ ಊರುಗಳಿಗೆ ಹೋಗುವ ಪ್ರಯಾಣಿಕರು ಸಂಚಾರ ದಟ್ಟಣೆಯಿಂದ ತಾಸುಗಟ್ಟಲೆ ಬಸ್ ನಿಲುಗಡೆಯ ಪರಿಣಾಮ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಪ್ರವಾಸೋದ್ಯಮ ಮತ್ತು ವಾಣಿಜ್ಯವಾಗಿ ಗಳಿಸಿರುವ ಗಂಗಾವತಿ ನಗರಕ್ಕೆ ನಿತ್ಯವೂ ಸಾವಿರಾರು ವಾಹನಗಳು ಇದೇ ರಸ್ತೆಯ ಮೂಲಕ ಬರುತ್ತವೆ. ಪ್ರಮುಖವಾಗಿ ವಿದ್ಯಾನಗರದಲ್ಲಿರುವ ರೈಲ್ವೆ ನಿಲ್ದಾಣದಿಂದ ವಾಹನಗಳು ಬರುವುದರಿಂದ ಪ್ರಯಾಣಿಕರು ಸಂಚಾರ ಮಾಡುವುದರಿಂದ ಇಲ್ಲಿರುವ ಅವೈಜ್ಞಾನಿಕ ವೇ ಬ್ರಿಡ್ಜ್ ಗಳನ್ನು ಸ್ಥಳಾಂತರ ಮಾಡಿ ಸಂಚಾರ ಸುಗಮ ಮಾಡಬೇಕಿದೆ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
MUST WATCH
ಹೊಸ ಸೇರ್ಪಡೆ
Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ
Karnataka ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು
Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು
Bidar; ಹಣ ಹಂಚುವ ದೂರು: ನಾಗಮಾರಪಳ್ಳಿ ಮನೆಯಲ್ಲಿ ಪರಿಶೀಲನೆ
Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ