Caste census; ಮರುಗಣತಿ ಮಾಡಲಿ ತಪ್ಪೇನಿದೆ ?: ಬಸವರಾಜ ರಾಯರೆಡ್ಡಿ


Team Udayavani, Dec 26, 2023, 6:11 PM IST

Caste census; ಮರುಗಣತಿ ಮಾಡಲಿ ತಪ್ಪೇನಿದೆ ?: ಬಸವರಾಜ ರಾಯರೆಡ್ಡಿ

ಕೊಪ್ಪಳ: ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಿ ಎಂದು ಹೇಳಿದ್ದು ನಿಜಾ ಅದು ಒಳ್ಳೆಯದು. ಅದು ಜಾತಿ ಗಣತಿಯಲ್ಲ, ಸಮಾಜಿಕ ಸ್ಥಿತಿಗತಿಯ ಗಣತಿ, ಈ ಗಣತಿ ಸರಿಯಿಲ್ಲವೆಂದರೆ ಮತ್ತೊಮ್ಮೆ ಮಾಡಿಸಲಿ ತಪ್ಪೇನಿದೆ ಎಂದು ಯಲಬುರ್ಗಾ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.

ಜಿಲ್ಲೆಯ ಬೇವೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಜಾತಿ ಪಟ್ಟಿಯಲ್ಲಿ ಇದು ಮೊದಲಿಂದಲೂ ಇದೆ. ನಾವು ಇದನ್ನ ಒಪ್ಪಿದ್ದೇವೆ. ಈಗಷ್ಟೆ ಕೆಲವರು ಉಪಜಾತಿಗಳ ಹೆಸರು ಬರೆಸುತ್ತಿದ್ದಾರೆ. ಗಣತಿ ವಿಚಾರದಲ್ಲಿ ಬಿಡುಗಡೆ ಮಾಡುವುದರಲ್ಲಿ ತಪ್ಪಿಲ್ಲ. ಸಾಮಾಜಿಕ ಸ್ಥಿತಿಗತಿ ಗಣತಿಯಲ್ಲಿ ಒಂದು ಜಾತಿ ಕಾಲಂ ಸೇರಿದೆ. ಇದರಿಂದ ಕೆಲವರಿಗೆ ಆತಂಕವಾಗಿದೆ. ಸಿಎಂ ಅವರೇ ಗಣತಿ ವರದಿ ನನ್ನ ಕೈ ಸೇರಲಿ ಎಂದಿದ್ದಾರೆ. ಬಳಿಕ ನೋಡೋಣವೆಂದಿದ್ದಾರೆ. ಜಾತಿ ಗಣತಿ ಹೊರಗಡೆ ಬರಲಿ, ಸರಿಯಿಲ್ಲ ಎಂದಾದ್ರೆ ಇನ್ನೊಮ್ಮೆ ಮಾಡೋಣ. ಮರು ಗಣತಿ ಮಾಡಲಿ ತಪ್ಪೆನಿದೆ ? ಎರಡು ತಿಂಗಳಲ್ಲಿ ಮರುಗಣತಿ ಮಾಡಲಿ ಎನ್ನುವುದು ನನ್ನ ಸಲಹೆ ಎಂದರು.

ಈಗಿನ ಸಮಿಕ್ಷೆಗೂ ಲೋಕಸಭೆಯಲ್ಲಿ ಚುನಾವಣೆಗೆ ಸಂಬಂಧವಿಲ್ಲ. ಜನ ಯಾವತ್ತೂ ಜಾತಿ, ಹಣಕ್ಕೆ ಓಟ್ ಹಾಕಲ್ಲ. ನಾವು ರಾಜಕಾರಣಿಗಳು ಜಾಣರಿದ್ದೇವೆ. ಜಾತಿ ಗಣತಿಗೂ ಚುನಾವಣೆಗೆ ಸಂಬಂಧ ಇಲ್ಲ. ಇನ್ನೊಮ್ಮೆ ಜಾತಿ ಜನಗಣತಿ ಮಾಡಿದ್ರೆ ತಪ್ಪೆನಿಲ್ಲ. ಲಿಂಗಾಯತರಲ್ಲಿ ಉಪಜಾತಿಗಳನ್ನ ಮೆನ್ಶೆನ್ ಮಾಡಿರೋದು ಆತಂಕವಿದೆ. ಅದನ್ನ ಸರಿ ಮಾಡೋಕೆ ವೀರಶೈವ ಲಿಂಗಾಯತ ಎಂದು ಬರೆಯಿಸಿ ಎಂದಿರೋದು ಸರಿಯಿದೆ ಎಂದರು.

2004ರಿಂದ ಚುನಾವಣೆ ಭ್ರಷ್ಟಾಚಾರ ಜಾಸ್ತಿಯಾಗಿದೆ. ಇದರಿಂದ ರಾಜಕಿಯ ಕಷ್ಟವಾಗಿದೆ. ರಾಜಕಾರಣಕ್ಕೆ ರಿಯಲ್ ಎಸ್ಟೇಟ್, ಎಕ್ಸೈಸ್, ಗುತ್ತಿಗೆದಾರರು ಬಂದಿದ್ದಾರೆ. ಎಲ್ಲಾ ರಾಜಕೀಯ ಪಕ್ಷದಲ್ಲಿ ಎಲ್ಲರೂ ಕುಟುಂಬಸ್ಥರೆ ಇದ್ದಾರೆ. ಜಾತಿ, ಹಣ ಹಾಗೂ ಕುಟುಂಬ ರಾಜಕಾರಣದಿಂದ ಕಷ್ಟವಾಗಿದೆ. ಸಾಮಾಜಿಕ ಕಾರ್ಯಕರ್ತರು ಈಗ ರಾಜಕಿಯದಿಂದ ದೂರವಾಗಿದ್ದಾರೆ. ಪಕ್ಷದ ಕಾರ್ಯಕರ್ತರು ಗುತ್ತಿಗೆದಾರರೇ ಆಗುತ್ತಿದ್ದಾರೆ. ಇದರಿಂದ ರಾಜಕಿಯ ಕಲುಷಿತವಾಗಿದೆ. ಇದರಿಂದ ನಾವು ನಿವೃತ್ತಿಯಾಗಬೇಕು ಎಂದೆನಿಸುತ್ತಿದೆ. ಇದಕ್ಕೆ ಸಿಎಂ ಹಾಗು ಪಿಎಂ ಅವರು ಬದಲಾವಣೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಭ್ರಷ್ಟಾಚಾರ ದೇಶದಲ್ಲಿ ವ್ಯಾಪಕವಾಗಿ ಹರಡಿದೆ. ಭ್ರಷ್ಟಾಚಾರ ಹಿಂದೆಯಿದೆ, ಮುಂದೆನೂ ಇರತ್ತೆ, ಇದು ವ್ಯಾಪಕವಾಗಿ ಹಬ್ಬಿದೆ. ಈಗ ಭ್ರಷ್ಟಾಚಾರ ಕೊನೆ ಹಂತಕ್ಕೆ ತಲುಪಿದೆ. ಚುನಾವಣೆ ದಿನವೇ ಭ್ರಷ್ಟಾಚಾರ ನಡೆಯುತ್ತೆ. ಇದಕ್ಕೆ ಸೀನಿಯರ್ ಲೀಡರ್ಸ್ ಎಲ್ಲರೂ ಕುಳಿತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಸೆಗಣಿ ಪುಟ್ಟಿ ಎಲ್ಲವೂ ವಾಸನೆ ಒಂದೆ, ಇದನ್ನ ತಡೆಗಟ್ಟಲು ಸಿಎಂ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ ಎಂದರು.

ಸಂಸತ್ ದಾಳಿಯ ಬಗ್ಗೆ ಮಾತನಾಡಲು ಅವಕಾಶ ಕೊಡದೆ ಇರೋದು ತಪ್ಪು. ಈ ರೀತಿ ಮಾಡೋದು ಸರಿಯಲ್ಲ. ನನಗೆ ಸಚಿವ ಸ್ಥಾನ ಸಿಗೋದು ಬಿಡೋದು ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ. ಹಿಜಾಬ್ ಮತ್ತು ಕೇಸರಿ ಶಾಲು ಹಾಕಿಕೊಳ್ಳುವುದು ಕಡ್ಡಾಯವಲ್ಲ. ಹಿಜಾಬ್ ಕೇವಲ ಮುಸ್ಲಿಂ ಹಾಕೋದಲ್ಲ, ಅದು ಹೆಣ್ಣುಮಕ್ಕಳು ಕೆಲವು ಕಡೆ ಹಾಕುತ್ತಾರೆ. ಹಿಜಾಬ್ ಮತ್ತು ಮುಸ್ಲಿಂ ಹೆಣ್ಣು ಮಕ್ಕಳಿಗೆ ಮಾತ್ರವಲ್ಲ. ಅದರ ಬಗ್ಗೆ ಚರ್ಚೆ ಮಾಡಬೇಕು, ಜಗಳ ಮಾಡಬಾರದು. ಆ ಚರ್ಚೆ ಜೊತೆಗೆ ರಾಜಕೀಯ ಬಂದಿದೆ. ಇದು ಓಟ್‌ಗಾಗಿ ಬಂದಿದೆ ಎಂದರು.

ಪಿಎಂ ಅಭ್ಯರ್ಥಿ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಹೆಸರು ಘೋಷಣೆಯಾಗಲಿ ಎಂದು ಹೇಳಿದ ಮೊದಲಿಗ ನಾನು. ಕಳೆದ ಜುಲೈ ತಿಂಗಳಲ್ಲಿ ಟಿವಿ ಸಂದರ್ಶನವೊಂದರಲ್ಲಿ ಕಾಂಗ್ರೆಸ್ ಘೋಷಣೆ ಮಾಡಬೇಕೆಂದು ಹೇಳಿದ್ದೇನೆ. ಅವರಿಗೆ ರಾಜಕೀಯ ಅನುಭವವಿದೆ. ಕರ್ನಾಟಕದಲ್ಲಿ ಮಂತ್ರಿ, ಸಂಸದರಾಗಿದ್ದಾರೆ. ಅವರು ದಲಿತ ವ್ಯಕ್ತಿಯಿದ್ದಾರೆ. ಈಗಲೂ ಅವರನ್ನು ಪಿಎಂ ಅಭ್ಯರ್ಥಿ ಎಂದು ಇಂಡಿಯಾ ಒಕ್ಕೂಟ ಹಾಗೂ ಕಾಂಗ್ರೆಸ್ ಪಕ್ಷವೂ ಘೋಷಣೆ ಮಾಡಲಿ ಎಂದು ಹೇಳುವೆ. ಇದು ನನ್ನ ವಯಕ್ತಿಕ ಅಭಿಪ್ರಾಯ.
-ಬಸವರಾಜ ರಾಯರೆಡ್ಡಿ, ಯಲಬುರ್ಗಾ ಶಾಸಕ.

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.