ಚಿರಿಬಿ ಪ್ರೌಢಶಾಲಾ 86 ವಿದ್ಯಾರ್ಥಿಗಳಿಗೆ ಒಬ್ಬನೇ ಶಿಕ್ಷಕ!
ಶಾಲೆಗೆ ಸೌಲಭ್ಯ ಒದಗಿಸಲು ಪೋಷಕರ ಒತ್ತಾಯ
Team Udayavani, Aug 30, 2019, 11:57 AM IST
•ಎಂ. ರವಿಕುಮಾರ
ಕೊಟ್ಟೂರು: ಸಮೀಪದ ಚಿರಿಬಿ ಗ್ರಾಮದಲ್ಲಿ ಸರ್ಕಾರಿ ಶಾಲೆ ಇದೆ. ಆದರೆ ಶಿಕ್ಷಕರ ಕೊರತೆಯಿದ್ದು, ಅವ್ಯವಸ್ಥೆಯಿಂದ ಮುಳುಗಿದೆ.
ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಇಂತಹ ಡಿಜಿಟಲ್ ಯುಗದಲ್ಲಿ ಸರ್ಕಾರಿ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಶಿಕ್ಷಕರೇ ಇಲ್ಲದಿರುವುದು ದುಸ್ತರವಾಗಿದೆ. ಇಲ್ಲಿನ ಚಿರಿಬಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ 86 ವಿದ್ಯಾರ್ಥಿ, ವಿದ್ಯಾರ್ಥಿನಿಯರಿದ್ದು, ಶಿಕ್ಷಕರೇ ಇಲ್ಲದೆ ವಿದ್ಯಾಭ್ಯಾಸ ಮಾಡಬೇಕಾಗಿದೆ. ಏಕೆಂದರೆ ಇದೇ ಶಾಲೆಯ ಪ್ರಾಥಮಿಕ ಶಾಲೆಯಲ್ಲಿರುವ ಶಿಕ್ಷಕರೇ ಬಿಡುವಿನ ಸಮಯದಲ್ಲಿ ಪ್ರೌಢ ಶಾಲೆಗೆ ಹೋಗಿ ಪಾಠ ಬೋಧನೆ ಮಾಡುತ್ತಾರೆ. ಈಗಾಗಲೇ ಈ ಶಾಲೆ 8-10 ವರ್ಷಗಳ ಕಾಲದಿಂದಲೂ ಹೀಗೆ ಮುಂದುವರಿದಿದೆ. 10ನೇ ತರಗತಿಯು ಪ್ರತಿಯೊಬ್ಬ ವಿದ್ಯಾರ್ಥಿಗೂ ಮುಖ್ಯ ಘಟ್ಟವಾಗಿದ್ದು, ಇಂತಹ ಘಟ್ಟವನ್ನು ಉತ್ತೀರ್ಣವಾಗಲೂ ಶಿಕ್ಷಕರ ಅಗತ್ಯ ಬಹಳ ಇದೆ. ಆದರೆ ಶಾಲೆಯಲ್ಲಿ ಗುರುಗಳೇ ಇಲ್ಲದೇ ಪಾಠ ಬೋಧನೆಯಿಂದ ವಿದ್ಯಾರ್ಥಿಗಳು ಕಲಿಯುವುದು ಹೇಗೆ?.
ಶಾಲೆಯಲ್ಲಿ ಇರಬೇಕಾದ ಅವಶ್ಯಕ ಪರಿಸರ ಇಲ್ಲದೆ ಎಲ್ಲೆಂದರಲ್ಲಿ ಕಸದ ರಾಶಿ, ಹಾಳಾಗಿರುವ ಶೌಚಾಲಯ, ಕೊಠಡಿ ಇಲ್ಲದೆ ಇರುವುದು, ಸರಿಯಾದ ಬೋಧನಾ ಸಲಕರಣೆ ಇಲ್ಲದಿರುವುದು, ಮಕ್ಕಳಿಗೆ ಅಗತ್ಯವಾಗಿ ಜೀವ ಜಲ ಶುದ್ಧ ಕುಡಿಯುವ ನೀರು ಇಲ್ಲದಿರುವುದು ಎದ್ದು ಕಾಣುತ್ತದೆ.
ಬಿಸಿಯೂಟ ರುಚಿಯಿಲ್ಲದೇ ಇರುವ ಅಡುಗೆ ಮಕ್ಕಳಿಗೆ ನೀಡುತ್ತಾರೆ. ಆದ್ದರಿಂದ ಸ್ಥಳೀಯ ಆಡಳಿತ ಜಾಗರೂಕರಾಗಿ ಇನ್ನಾದರೂ ಸರಿಪಡಿಸಬೇಕಾಗಿದೆ. ಈ ಸಂಬಂಧ ಅಲ್ಲಿನ ಮುಖ್ಯಗುರುಗಳನ್ನು ಪೋಷಕರು ಪ್ರಶ್ನಿಸಿದರೆ ಎಲ್ಲ ವ್ಯವಸ್ಥೆ ಚೆನ್ನಾಗಿದೆ ಎಂದು ಹೇಳಿ ಕಳಿಸುತ್ತಾರೆ.
ಶಿಕ್ಷಕರಿಲ್ಲದೇ ಇರುವುದು ಶಾಲಾ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಿದೆ. ಏಕೆಂದರೆ ಇಲ್ಲಿನ ಹಳ್ಳಿಗಾಡಿನ ಮಕ್ಕಳು ಬಡ ಮಕ್ಕಳು ಹತ್ತಿರದ ಸಿಟಿಗೆ ಹೋಗಿ ಡೊನೇಷನ್ ನೀಡಿ ಅಭ್ಯಸಿಸಲು ಆಗುವುದಿಲ್ಲ. ಹೀಗಾಗಿ ಸರ್ಕಾರಿ ಶಾಲೆಯಲ್ಲಿ ಸಿಗುವ ಸೌಲಭ್ಯಗಳು ಸಿಗುತ್ತಿಲ್ಲ. ಈಗಾಗಲೇ ವಿದ್ಯಾರ್ಥಿಗಳಿಗೆ ಅರ್ಧವರ್ಷ ಕಳೆದು ಹೋಗಿದೆ. ಹೊಸದಾಗಿ ಶಿಕ್ಷಕರು ಈಗ ಬಂದರೂ ಹಳೆಯ ಪಾಠಗಳ ಅರಿವು ಎಲ್ಲಿ ಆಗುತ್ತದೆ. ವಿದ್ಯಾರ್ಥಿಗಳಿಗೆ ಸಮವಸ್ತ್ರಗಳೇ ಇಲ್ಲ. ಹಿಂದಿನ ವರ್ಷದ ಸಮವಸ್ತ್ರಗಳನ್ನೆ ಹೊಸದಾಗಿ ರೂಪಿಸಿಕೊಂಡು ಬರುವಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಿದ್ದಾರೆ.
ಶಾಲೆ ಬಗ್ಗೆ ಗಮನಹರಿಸಿ ಶಿಕ್ಷಕರನ್ನು ನೇಮಿಸುತ್ತೇನೆ. ಯಾವುದೇ ಅವಶ್ಯಕ ವ್ಯವಸ್ಥೆಗಳನ್ನು ಮಾಡುತ್ತೇನೆ. ಈಗಾಗಲೇ ಹೊಸ ಶಿಕ್ಷಕರನ್ನು ನೇಮಿಸಿದ್ದೇವೆ. ಹೊಸ ಕಟ್ಟಡಕ್ಕೂ ಅನುಮೋದನೆ ನೀಡಲಾಗಿದೆ. ಕೂಡಲೇ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ.
•ಉಮಾದೇವಿ,
ಕ್ಷೇತ್ರ ಶಿಕ್ಷಣಾಧಿಕಾರಿ, ಕೂಡ್ಲಿಗಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!
Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು
Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್ ಗರಿ
MUST WATCH
ಹೊಸ ಸೇರ್ಪಡೆ
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ