ಅನುದಾನ ತಾರತಮ್ಯ: ಪ್ರತಿಭಟನೆ
Team Udayavani, Dec 29, 2019, 4:19 PM IST
ಮಳವಳ್ಳಿ: ಪುರಸಭೆಯ ಕೆಲವೊಂದು ವಾರ್ಡ್ಗಳಿಗೆ ಶಾಸಕರು ಹಾಗು ಅಧಿಕಾರಿಗಳು ಅನುದಾನ ನೀಡದೇ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪುರಸಭೆ ಕಾಂಗ್ರೆಸ್ ಸದಸ್ಯರು ಹಾಗೂ ಮುಖಂಡರು ಪಟ್ಟಣದ ಪುರಸಭೆ ಮುಂದೆ ಪ್ರತಿಭಟನೆ ನಡೆಸಿದರು.
ಶಾಸಕರು 23 ಪುರಸಭೆ ಸದಸ್ಯರನ್ನು ಕರೆಸಿ ಸಭೆ ನಡೆಸಿ ವಾರ್ಡ್ಗಳಿಗೆ ಅವಶ್ಯಕವಿರುವ ಕಾಮಗಾರಿಗಳನ್ನು ನಡೆಸುವ ಬಗ್ಗೆ ಮಾಹಿತಿ ಪಡೆದು ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯನ್ನು ನೀಡಿದ್ದರು. ಆದರೇ ಸರ್ಕಾರದಿಂದ ಪ್ರಸಕ್ತ ಸಾಲಿನಲ್ಲಿ ಬಂದಂತಹ 2.49 ಕೋಟಿ ರೂ. ಅನುದಾನದಲ್ಲಿ 23 ವಾರ್ಡ್ ಗಳಿಗೂ ಹಂಚಿಕೆ ಮಾಡಬೇಕಿತ್ತು. ಆದರೇ 3,4,8,15,18,19,21 ವಾರ್ಡ್ ಗಳಿಗೆ ಯಾವುದೇ ಅನುದಾನ ನೀಡಿಲ್ಲ, ಬೇರೆ ವಾರ್ಡ್ಗಳಿಗೆ ಎರಡು ಮೂರು ಭಾರಿ ಅನುದಾನ ನೀಡುತ್ತಿದ್ದರೂ ರಾಜಕೀಯ ವೈಷಮ್ಯದಿಂದ ನಮ್ಮ ವಾರ್ಡ್ಗಳಿಗೆ ಅನುದಾನ ನೀಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕ ಕೆಲಸಗಳು ಯಾವುದೂ ನಡೆಯುತ್ತಿಲ್ಲ. ಇಲ್ಲಿರುವ ಅಧಿಕಾರಿಗಳು ಇಷ್ಟಬಂದ ರೀತಿಯಲ್ಲಿ ವರ್ತಿಸುತ್ತಾರೆ. ಇಲ್ಲಿ ಹೇಳುವವರೂ ಕೇಳುವವರು ಯಾರೂ ಇಲ್ಲದಂತಾಗಿದೆ ಈ ಬಗ್ಗೆ ಜನಪ್ರತಿನಿಧಿಗಳು ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. 19ನೇ ವಾಡ್ ಪುರಸಭೆ ಸದಸ್ಯ ಶಿವಸ್ವಾಮಿ, 15ನೇ ವಾರ್ಡ್ನ ರಾಜಶೇಖರ್ ಪುರಸಭೆ ಮಾಜಿ ಸದಸ್ಯರಾದ ಗಂಗರಾಜೇ ಅರಸ್, ಕೃಷ್ಣ, ವೆಂಕಟೇಶ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ