ಪ್ರಕೃತಿ ಪ್ರಭಾವದೊಳಗೆ ಅರಳಿದ ಕುವೆಂಪು
Team Udayavani, Dec 30, 2019, 3:43 PM IST
ಮಂಡ್ಯ: ಪ್ರಕೃತಿಯ ಪ್ರಭಾವದಿಂದ ಕುವೆಂಪುರವರ ಬರಹಗಳು ಮೂಡಿಬಂದವು ಎಂದು ಕಾವೇರಿ ನೀರಾವರಿ ನಿಗಮದ ಸಹಾಯಕ ಎಂಜಿನಿಯರ್ ಜಿ.ಎನ್. ಕೆಂಪರಾಜು ತಿಳಿಸಿದರು.
ಪರಿಸರ ರೂರಲ್ ಡೆವಲೆಪ್ಮೆಂಟ್ ಸೊಸೈಟಿ, ಕಿರಗಂದೂರು ನೀರು ಬಳಕೆದಾರರ ಸಹಕಾರ ಸಂಘದ ವತಿಯಿಂದ ತಾಲೂಕಿನ ಕಿರಗಂದೂರು ಗ್ರಾಮದ ನಾಡಪ್ರಭು ಕೆಂಪೇಗೌಡ ಉದ್ಯಾನದಲ್ಲಿ ನಡೆದ ಕುವೆಂಪು ಜನ್ಮ ದಿನದ ನಿಮಿತ್ತ ಸಸ್ಯ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುವೆಂಪು ಕೊಡುಗೆ ಅನನ್ಯ: ಪ್ರಕೃತಿ ಆಸ್ವಾದಿಸಿ ಪ್ರಪಂಚಕ್ಕೆ ಶ್ರೇಷ್ಠ ಸಾಹಿತ್ಯ ನೀಡಿದ ಕುವೆಂಪುರವರ ಕೊಡುಗೆ ಅನನ್ಯ. ಗುಡಿ ಗೋಪುರ ಚರ್ಚುಗಳನ್ನು ಬಿಟ್ಟು ಹೊರಬನ್ನಿ ಎಂದು ಸಾರುತ್ತಾ, ಸಸ್ಯ ಸಂಕುಲಗಳ ಬಗ್ಗೆ ಅಪಾರ ಮಮಕಾರ ತೋರಿದ ಕುವೆಂಪುಅವರಿಗೆ ನಾಡು ನಿಜವಾದ ರೀತಿಯಲ್ಲಿ, ಸಸ್ಯ ನಮನಸಲ್ಲಿಸಬೇಕಾಗಿದೆ ಎಂದರು.
ಲಿಯೋಟಾಲ್ಸ್ಟಾಯ್, ಅರಬಿಂದು, ರವೀಂದ್ರನಾಥ್ ಠ್ಯಾಗೋರ್ರವರ ಬರಹಗಳಿಗಿನ್ನ ಕುವೆಂಪುರವರ ಬರಹಗಳು ವಿಶ್ವಪ್ರಜ್ಞೆಯನ್ನು ಉಂಟುಮಾಡುವಂತಹುಗಳಾಗಿದ್ದವು. ಮಾನವತಾವಾದಿಯಾಗಿದ್ದ ಕುವೆಂಪುರವರು ಶ್ರಮಜೀವಿಗಳ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿದ್ದರು ಎಂದರು.
ಕೃಷ್ಣರಾಜಸಾಗರ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಸಹಕಾರ ಮಹಾಮಂಡಳದ ಉಪಾಧ್ಯಕ್ಷ ಮಂಗಲ ಎಂ. ಯೋಗೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಲ-ನೆಲ ನಿರ್ವಹಣೆಗೆ ಕುವೆಂಪುರವರ ಬರಹಗಳು ಸ್ಪೂರ್ತಿದಾಯಕವಾಗಿವೆ. ಬಾಲ್ಯಾವಸ್ಥೆಯಲ್ಲೇ ಮಕ್ಕಳಿಗೆ ಜೀವ ಸಂಕುಲಗಳ ಬಗ್ಗೆ ಸ್ಪೂರ್ತಿಯನ್ನು ಒದಗಿಸುವ ಪಠ್ಯಗಳು ಹೊರಹೊಮ್ಮಲು ಕುವೆಂಪುರವರ ಸಾಹಿತ್ಯವೇ ಕಾರಣವಾಗಿದೆ. ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ ಇತರೆ ಕೃತಿಗಳು ಪ್ರಕೃತಿಯ ಸೊಬಗನ್ನು ಪ್ರಪಂಚಕ್ಕೆ ಸಾರಿದ್ದಾಗಿದೆ ಎಂದು ಹೇಳಿದರು.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ದೊಡ್ಡಲಿಂಗೇಗೌಡ ಸಸ್ಯ ನಮನ ಕಾರ್ಯಕ್ರಮಕ್ಕೆ ಗಿಡ ನೆಡುವುದರ ಮೂಲಕ ಚಾಲನೆ ನೀಡಿದರು. ಮಂಡ್ಯ ತಾಲೂಕು ಕಾವೇರಿ ಹೌಸ್ಬಿಲ್ಡಿಂಗ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಸಿ.ಸಿ.ಮಹದೇವು, ಕಿರಗಂದೂರು ನೀರು ಬಳಕೆದಾರರ ಸಹಕಾರ ಸಂಘದ ಉಪಾಧ್ಯಕ್ಷ ಕೆ. ತಿಮ್ಮೇಗೌಡ, ಡಿಸಿಸಿ ಬ್ಯಾಂಕ್ ಗಾಂ— ಬಜಾರ್ ಶಾಖೆಯ ವ್ಯವಸ್ಥಾಪಕ ಆತ್ಮಾನಂದ, ಶಿವರಾಜು, ನರಸಿಂಹಮೂರ್ತಿ, ಕುಮಾರ್ಏ ಇತರರು ಉಪಸ್ಥಿತರಿದ್ದರು. ಕರ್ನಾಟಕ ಜಾ ನಪದ ಅಕಾಡೆಮಿ ಮಾಜಿ ಸದಸ್ಯ ಗೊರವಾಲೆ ಚಂದ್ರಶೇಖರ್, ಕಲಾವಿದ ಬಸವರಾಜ ಸಂತೆಕಸಲಗೆರೆ ಅವರು ಕುವೆಂಪು ಗೀತಗಾಯನ ಸಾಧರಪಡಿಸಿದರು.
ಕುವೆಂಪು ಸಸ್ಯನಮನ ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಜೀವವೈವಿಧ್ಯತಾ ಗಿಡಗಳನ್ನು ನೆಡಲಾಯಿತು. ಹೊನ್ನೆ , ಜಟ್ರೋಫಾ, ಹೊಂಗೆ, ನೇರಳ ಸಹಿತ ವಿವಿಧ ಗಿಡಗಳನ್ನು ನೆಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ
MUST WATCH
ಹೊಸ ಸೇರ್ಪಡೆ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!