ಮಂಡ್ಯದಲ್ಲಿ ಪತ್ನಿ ಡಿಸಿ-ಮೈಸೂರಿನಲ್ಲಿ ಪತಿ: ಗೌತಮ್ ಬಗಾದಿಗೆ ಶುಭ ಕೋರಿದ ಪತ್ನಿ ಅಶ್ವಥಿ
Team Udayavani, Jun 6, 2021, 5:17 PM IST
ಮಂಡ್ಯ: ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಅವರ ಜಾಗಕ್ಕೆ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾಗಿದ್ದ ಡಾ.ಗೌತಮ್ ಬಗಾದಿ ನೇಮಕವಾಗಿದ್ದಾರೆ. ವಿಶೇಷವೆಂದರೆ ಮೈಸೂರು ಡಿಸಿ ಗೌತಮ್ ಬಗಾದಿ ಮತ್ತು ನೆರೆಯ ಮಂಡ್ಯ ಜಿಲ್ಲಾಧಿಕಾರಿ ಎಸ್.ಅಶ್ವಥಿ ಅವರು ದಂಪತಿಗಳು. ಈ ಹಿನ್ನೆಲೆಯಲ್ಲಿ ಎಸ್.ಅಶ್ವಥಿ ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಪತಿ ಡಾ.ಗೌತಮ್ ಬಗಾದಿಗೆ ಶುಭ ಕೋರಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೌತಮ್ ಬಗಾದಿ ಭಾನುವಾರ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅವರಿಂದ ಮೈಸೂರು ಜಿಲ್ಲೆಗೆ ಒಳ್ಳೆಯದಾಗಲಿ. ಜಿಲ್ಲೆಯ ಕೆಲಸಗಳು ಸರಾಗವಾಗಿ ನಡೆಯಲಿ. ಈ ಬಗ್ಗೆ ನಾನು ಹೆಚ್ಚು ಮಾತನಾಡುವುದು ಸರಿಯಲ್ಲ. ಆದರೂ ಪತಿ ಗೌತಮ್ ಜಿಲ್ಲಾಧಿಕಾರಿಯಾಗಿ ಬಂದಿರುವುದರಿಂದ ಅವರಿಂದ ಮೈಸೂರು ಜಿಲ್ಲೆಯ ಜನಕ್ಕೆ ಒಳಿತಾಗಬೇಕೆಂಬುದು ನನ್ನ ಆಶಯ ಎಂದರು.
ಇದನ್ನೂ ಓದಿ:ವರ್ಗಾವಣೆ ಬೆನ್ನಲ್ಲೇ ಸಿಎಂ ಭೇಟಿಗೆ ದೌಡಾಯಿಸಿದ ರೋಹಿಣಿ ಸಿಂಧೂರಿ
ನನ್ನ ಪತಿ ನಾನು ಪ್ರತಿನಿಧಿಸುವ ಪಕ್ಕದ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬಂದಿರುವುದು ಖುಷಿ ತಂದಿದೆ. ಆದರೆ ನಮ್ಮಿಬ್ಬರ ವೈಯಕ್ತಿಕ ವಿಚಾರಕ್ಕಿಂತ ರಾಜ್ಯ ಹಾಗೂ ಎರಡು ಜಿಲ್ಲೆಗಳ ಹೊಣೆ ನಮ್ಮ ಮೇಲಿದೆ. ಅದನ್ನು ನಾವಿಬ್ಬರೂ ನಿಭಾಯಿಸಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಪತಿ-ಪತ್ನಿ ಅಕ್ಕಪಕ್ಕದ ಜಿಲ್ಲೆಗಳ ಜಿಲ್ಲಾಧಿಕಾರಿಗಳಾಗಿ ನೇಮಕವಾಗಿದ್ದು, ಇಬ್ಬರಿಗೂ ಖುಷಿ ತಂದಿದ್ದು, ಮಂಡ್ಯ ಡಿಸಿ ಎಸ್.ಅಶ್ವಥಿ ಸಂತಸ ವ್ಯಕ್ತಪಡಿಸಿದರು.
ಪತಿ-ಪತ್ನಿ ಡಿಸಿ ಆಗಿದ್ದು ಮೊದಲೇನಲ್ಲ: ಮೈಸೂರು ಹಾಗೂ ಮಂಡ್ಯ ಜಿಲ್ಲೆಗೆ ಪತಿ ಹಾಗೂ ಪತ್ನಿ ಜಿಲ್ಲಾಧಿಕಾರಿಯಾಗಿ ಒಟ್ಟಿಗೆ ಕೆಲಸ ನಿರ್ವಹಿಸಿದ್ದು, ಇದು ಮೊದಲೇನಲ್ಲ. ನಾಲ್ಕು ವರ್ಷಗಳ ಹಿಂದೆ ಶಿಖಾ ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದರೆ ಅವರ ಪತಿ ಡಾ.ಅಜಯ್ ನಾಗಭೂಷಣ್ ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದರು. ಆದರೆ ಇದೀಗ ಅಶ್ವಥಿ ಹಾಗೂ ಗೌತಮ್ ಬಗಾದಿ ಪತಿ-ಪತ್ನಿ ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸುವ ಅವಕಾಶ ಸಿಕ್ಕಿದೆ.
ಇದರಲ್ಲಿ ಶಿಖಾ ಅವರ ಪತಿ ಡಾ.ಅಜಯ್ ನಾಗಭೂಷಣ್ ಹಾಗೂ ಅಶ್ವಥಿ ಪತಿ ಡಾ.ಗೌತಮ್ ಬಗಾದಿ ಇಬ್ಬರೂ ವೈದ್ಯಕೀಯ ಶಿಕ್ಷಣ ಪಡೆದಿರುವುದು ವಿಶೇಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ