4.46 ಕೋಟಿ ರೂ.ದುರುಪಯೋಗ: ಪಿಇಎಸ್ ಕಾಲೇಜು ಸಿಬ್ಬಂದಿ ಬಂಧನ
Team Udayavani, Jul 9, 2022, 4:31 PM IST
ಮಂಡ್ಯ: ನಗರದ ಪ್ರತಿಷ್ಠಿತ ಪಿಇಎಸ್(ಜನತಾ ಶಿಕ್ಷಣ ಟ್ರಸ್ಟ್) ಕಾಲೇಜಿನಲ್ಲಿ 4.46 ಕೋಟಿ ರೂ. ಹೆಚ್ಚು ಅವ್ಯವಹಾರ ನಡೆದಿರುವ ಹಿನ್ನೆಲೆಯಲ್ಲಿ ಕಾಲೇಜಿನ ಇಬ್ಬರು ಸಿಬ್ಬಂದಿಯನ್ನು ಸೈಬರ್, ಆರ್ಥಿಕ, ಮಾದಕ ದ್ರವ್ಯ ಕ್ರೈಂ ಬ್ರಾಂಚ್ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಪಿಇಎಸ್ ಕಾಲೇಜಿನ ಸಹಾಯಕ ಆಡಳಿತಾ ಧಿಕಾರಿ ಜೆ.ಶೇಷಪ್ಪ ಹಾಗೂ ನಗದು ಶಾಖೆಯ ವಿಭಾಗದ ಸಹಾಯಕ ಎಂ.ಸಿ.ಸತೀಶ್ ಅವರನ್ನು ಬಂಧಿಸಲಾಗಿದೆ. ಕಾಲೇಜಿನ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಹಾಗೂ ಸರ್ಕಾರದ ಅನುದಾನವನ್ನು ನಕಲಿ ದಾಖಲೆ ಸೃಷ್ಟಿಸಿ ಲಪಟಾಯಿಸಿರುವ ಆರೋಪ ಕೇಳಿ ಬಂದಿತ್ತು. ಅಲ್ಲದೆ, ವಿವಿಧ ಅಭಿವೃದ್ಧಿ ಹೆಸರಿನಲ್ಲೂ ಹಣ ದುರುಪಯೋಗ ಮಾಡಿಕೊಂ ಡಿರುವುದು ತನಿಖೆಯಿಂದ ತಿಳಿದು ಬಂದಿದೆ.
ಪಿಇಎಸ್ ಕಾಲೇಜಿನ ಶಿಸ್ತು ಪ್ರಾಧಿಕಾರಿ ಹಾಗೂ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್ ನೀಡಿದ ದೂರಿನ ಆಧಾರದ ಮೇಲೆ ಹಾಗೂ ವಕೀಲ ರಾಜಶೇಖರ್ ಅವರನ್ನು ಆಂತರಿಕ ತನಿಖಾಧಿ ಕಾರಿಯಾಗಿ ನೇಮಿಸಿ ತನಿಖೆ ಕೈಗೊಳ್ಳಲಾಗಿತ್ತು. ತನಿಖೆಯಲ್ಲಿ ಎಸ್ಟೇಟ್ ಆಫೀಸರ್ ಆರ್.ಎಂ.ಶಿವರಾಮು, ಸಹಾಯಕ ಆಡಳಿತಾಧಿ ಕಾರಿ ಜೆ.ಶೇಷಪ್ಪ, ನಗದು ಸಹಾಯಕ ಎಂ.ಸಿ.ಸತೀಶ್, ಶಿವರಾಮು ಅವರ ಸಂಬಂಧಿಗಳಾದ ಹೃತ್ವಿಕ್, ಕೆ.ಸಿ.ನಿರಂಜನ್ ಸೇರಿ 11 ಮಂದಿಯ ಮೇಲೆ ಎಫ್ಐಆರ್ ದಾಖಲಾಗಿದೆ.
ಇದರಲ್ಲಿ ಇಬ್ಬರನ್ನು ಬಂ ಧಿಸಲಾಗಿದೆ. ತನಿಖೆಯಲ್ಲಿ ಪಿಇಎಸ್ ಕಾಲೇಜಿನ ನಿವೃತ್ತ ಸಹಾಯಕ ಆಡಳಿತಾಧಿ ಕಾರಿ ಬಸವರಾಜು, ನಿವೃತ್ತ ಪ್ರಾಂಶುಪಾಲರಾದ ಡಾ.ವಿ.ಶ್ರೀಧರ್, ಎಚ್.ವಿ.ರವೀಂದ್ರ, ಹಾಲಿ ಪ್ರಾಂಶುಪಾಲ ಡಾ.ಮಹಾಲಿಂಗೇಗೌಡ ವಿರುದ್ಧ ವೂ ತನಿಖೆ ಕೈಗೊಳ್ಳಲಾಗಿತ್ತು. ಆದರೆ, ಇದರಲ್ಲಿ ಶಿವರಾಮು, ಜೆ.ಶೇಷಪ್ಪ, ಎಂ.ಸಿ.ಸತೀಶ್, ಹೃತ್ವಿಕ್, ನಿರಂಜನ್, ನೇಮಿನಾಥ್ ಸೇರಿ 11 ಮಂದಿಯ ವಿರುದ್ಧದ ಆರೋಪ ರುಜುವಾತಾಗಿದೆ ಎಂದು ಎಫ್ಐಆರ್ ನಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ