ಮಳೆ ಆರ್ಭಟಕ್ಕೆ ಕೊಚ್ಚಿ ಹೋದ ಭತ್ತದ ಬೆಳೆ
Team Udayavani, Sep 6, 2022, 2:06 PM IST
ಶ್ರೀರಂಗಪಟ್ಟಣ: ಭಾನುವಾರ ಸುರಿದ ನಗರಕೆರೆ ಮಾರ್ಗದ ರಸ್ತೆ ಧಾರಾಕಾರ ಮಳೆಗೆ ಆರ್ಬಿಲ್ಎಲ್ ನಾಲೆ ಏರಿ ಒಡೆದು ನಾಟಿ ಮಾಡಿದ ಭತ್ತದ ಜಮೀನು ಜಲಾವೃತವಾಗಿ ಬೆಳಗೊಳ ಹಾಗೂ ಹೊಸಾನಂದೂರು ಗ್ರಾಮದ ಬಳಿ ಅಪಾರ ಹಾನಿಯಾಗಿದೆ.
ಆರ್ಬಿಎಲ್ಎಲ್ ನಾಲೆಯಲ್ಲಿ ನೀರಿನ ಜತೆಗೆ ಮಳೆ ನೀರು ಪ್ರಮಾಣ ಹೆಚ್ಚಾಗಿ ನಾಲೆಯ ಏರಿ ಮೇಲೆಲ್ಲಾ ನೀರು ಹರಿದು ಆನಂದೂರು ಗ್ರಾಮದ ಬಳಿ ನಾಲೆ ಏರಿಗೆ ಹಾನಿಯಾಗಿದೆ. ಇದರಿಂದಾಗಿ ರೈತರ ಓಡಾಟಕ್ಕೆ ತೊಂದರೆಯಾಗಿದೆ.
ಕೆಆರ್ಎಸ್ ಕೆಳಭಾಗದ ಗ್ರಾಮಗಳ ಜಮೀನುಗಳಿಗೆ ಸುಮಾರು 15 ಕಿ.ಮೀ ಉದ್ದದ ಆರ್ಬಿಎಲ್ಎಲ್ ನಾಲೆ ಉದ್ದಕ್ಕೂ ಮಳೆ ಆರ್ಭಟಕ್ಕೆ ನೀರು ನಾಲೆಯಲ್ಲಿ ಹೆಚ್ಚಾಗಿ ಏರಿ ಮೇಲೆ ಹರಿದಿದೆ.
ಹೆಚ್ಚಿನ ನೀರು ಹಳ್ಳಗಳ ಮೂಲಕ ಹರಿದು ವಿರಿಜಾ ನಾಲೆಗೆ ಸೇರಿ ವಿರಿಜಾ ನಾಲೆಯೂ ತುಂಬಿದೆ. ಹೊಸ ಆನಂದೂರು ಹಾಗೂ ಬೆಳಗೊಳ ಗ್ರಾಮದ ಕೆರೆ ಗದ್ದೆ ಬಯಲು ಪ್ರದೇಶದ ಜಮೀನು ಸಂಪೂರ್ಣ ಜಲಾವೃತವಾಗಿದೆ.
ಈಗಾಗಲೇ ಭತ್ತದ ನಾಟಿ ಕಾರ್ಯ ಮುಗಿಸಿ ನೆಮ್ಮದಿಯಿಂದಿದ್ದ ರೈತರು ಕಂಗಾಲಾಗಿದ್ದು. ಹಳ್ಳದ ಕಾಮಗಾರಿ ನಡೆಸದ ಕಾರಣ ಈ ಭಾಗದ ರೈತರುಪ್ರತಿ ವರ್ಷ ಇಂತಹ ಸಂಕಷ್ಟ ಎದುರಿಸುವಂತಾಗಿದೆ ಎಂದು ಸ್ಥಳೀಯ ರೈತ ಚಂದ್ರು ಅಳಲು ತೋಡಿಕೊಂಡರು.
ಕಳಪೆ ಮಟ್ಟದ ದುರಸ್ತಿ ಕಾರ್ಯ: ಆರ್ಬಿಎಲ್ಎಲ್ ನಾಲೆ ಒಡೆಯಲು ನೀರಿನ ರಭಸವೇ ಕಾರಣ. ನಾಲೆ ಏರಿ ಹಾಗೂ ಏರಿಕೆಳಭಾಗದ ಹಳ್ಳ ದುರಸ್ತಿ ಕಳಪೆ ಮಟ್ಟದಿಂದ ಕೂಡಿರುವುದು ಕಂಡು ಬಂದಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ನಾಲೆಏರಿ ದುರಸ್ತಿ, ಬೆಳೆ ಹಾನಿ ಪರಿಹಾರವಿತರಣೆ ಮಾಡಬೇಕು ಎಂದು ರೈತ ಮುಖಂಡ ಬೆಳಗೊಳ ವಿಷಕಂಠು ಒತ್ತಾಯ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sugar ಕಾರ್ಖಾನೆಗಳಿಗೆ ಈಗ ಕಬ್ಬು “ಬರ’! ನೀರಿನ ಕೊರತೆಯಿಂದ ಬೆಳೆಯದ ಕಬ್ಬು
Ambulance ಸಕಾಲಕ್ಕೆ ಬಂದಿದ್ದರೆ ನಟಿ ಬದುಕುತ್ತಿದ್ದರು: ಸ್ನೇಹಿತ
HD ಕುಮಾರಸ್ವಾಮಿಗೂ ರೇವಣ್ಣ ಸ್ಥಿತಿಯೇ ಬರಲಿದೆ: ಕಾಂಗ್ರೆಸ್ ಶಾಸಕ ಉದಯ್
Protest: ಕೆರಗೋಡು ಹನುಮ ಧ್ವಜ ವಿವಾದ; ಜೆಡಿಎಸ್, ಭಜರಂಗದಳ, ವಿ.ಹಿಂ.ಪ. ಪ್ರತಿಭಟನೆ
Mandya: ಮತ್ತೆ ಹೆಣ್ಣುಭ್ರೂಣ ಹತ್ಯೆ ಜಾಲ ಪತ್ತೆ; ನಾಲ್ವರ ಬಂಧನ
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ
Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ
Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್