ಸುಜ್ಞಾನದ ಕಡೆ ವ್ಯಾಸ ಮಹರ್ಷಿ ದಾರಿ; ನಿರ್ಮಲಾನಂದನಾಥ ಸ್ವಾಮೀಜಿ

ಗುರು ಕರುಣೆಯಿಂದ ಬೆಳೆದವನು ಜಗತ್ತಿಗೇ ಬೆಳಕಾಗುತ್ತಾನೆ.

Team Udayavani, Jul 15, 2022, 6:19 PM IST

ಸುಜ್ಞಾನದ ಕಡೆ ವ್ಯಾಸ ಮಹರ್ಷಿ ದಾರಿ; ನಿರ್ಮಲಾನಂದನಾಥ ಸ್ವಾಮೀಜಿ

ನಾಗಮಂಗಲ: ವೃತ್ತವೊಂದನ್ನು ವ್ಯಾಸವು ವಿಭಜಿಸುವಂತೆ ಅಖಂಡ ಜ್ಞಾನವನ್ನು ನಾಲ್ಕು ಭಾಗವಾಗಿ ಭಾಗ ಮಾಡಿಕೊಟ್ಟ ಕೀರ್ತಿ ವೇದ ವ್ಯಾಸ ಮಹರ್ಷಿಗಳಿಗೆ ಸಲ್ಲುತ್ತದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಏರ್ಪಡಿಸಿದ್ದ ಗುರುಪೂರ್ಣಿಮಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸುಜ್ಞಾನದ ಕಡೆಗೆ: ಗಣಿತದಲ್ಲಿ ವೃತ್ತವನ್ನು ವಿಭಜಿಸುವುದು ವ್ಯಾಸ. ಅಂತೆಯೇ ನಾಲ್ಕು ವೇದಗಳಾದ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದಗಳನ್ನು ಸಮವಾಗಿ ವಿಭಜಿಸಿದ ವ್ಯಾಸ ಮಹರ್ಷಿಗಳು ವೇದ, ಪುರಾಣ ಮತ್ತು ವಿಜ್ಞಾನಕ್ಕೂ ಇರುವ ಬಾಂಧವ್ಯವನ್ನು ತಿಳಿಸುವ ಮೂಲಕ ಜ್ವಾನವನ್ನು ಬಳಸಿ ಅಜ್ಞಾನದಿಂದ ಸುಜ್ಞಾನದ ಕಡೆಗೆ ಸಾಗುವಂತೆ ದಾರಿ ತೋರಿಸಿದರು ಎಂದು ಹೇಳಿದರು.

ಗುರುಪೂರ್ಣಿಮೆ: ಪೃಥ್ವಿಯ ಜೀವನಸಾರವಾದ ವೇದಗಳನ್ನು ವ್ಯಾಸಪೂರ್ಣಿಮೆಯಂದು ಕೊಟ್ಟಿದ್ದರಿಂದ ವ್ಯಾಸ ಪೂರ್ಣಿಮೆ, ಗುರುಪೂರ್ಣಿಮೆ ಎಂದು ಕರೆಯುತ್ತಾರೆ ಎಂದು ತಿಳಿಸಿದರು. ಮನುಷ್ಯನಿಗೆ ಆರೋಗ್ಯ ಕೆಟ್ಟರೆ ಔಷಧಿ ಕೊಡುತ್ತಾರೆ. ಆದರೆ, ಮನಸ್ಸಿನ ಆರೋಗ್ಯ ಕೆಟ್ಟರೆ ಜ್ಞಾನದ ಔಷಧಿ ಬೇಕಾಗುತ್ತದೆ. ಅಂತಹ ಔಷಧಿಯನ್ನು ಸರ್ವರಿಗೂ ಹಂಚಿ ಅಜ್ಞಾನ ತೊಲಗಿಸುವವನೇ ಗುರು ಎಂದರು.

ಉಪದೇಶ ಪಾಲಿಸಿ: ಗೌತಮ ಬುದ್ಧನ ಸಿದ್ಧಾಂತಗಳನ್ನು ಉಲ್ಲೇಖೀಸುತ್ತ ಗುರುವಿನ ಉಪದೇಶ ಮತ್ತು ಬೋಧನೆಯಿಂದ ಇಂದಲ್ಲ ನಾಳೆ ಗಮ್ಯ ತಲುಪುಲು ಸಾಧ್ಯ ಎನ್ನುವ ಮೂಲಕ ಭಾರತದ ಆಧ್ಯಾತ್ಮ ಸಾಧನೆ ಮೈಲಿಗಲ್ಲುಗಳನ್ನು ಮೌಲ್ಯಯುತ ಕಥೆಗಳ ಮೂಲಕ ಉಪದೇಶಿಸಿದರು. ಅಲ್ಲದೇ, ಗುರುವಿನ ಮಾರ್ಗದರ್ಶನವನ್ನು ಸರಿಯಾದ ಮಾರ್ಗದಲ್ಲಿ ಪಾಲಿಸಿದರೆ ಅಜ್ಞಾನದಿಂದ ಸುಜ್ಞಾನದ ಕಡೆಗೆ ಸಾಗಬಹುದು ಎಂದು ಹೇಳಿದರು.

ಆಧ್ಯಾತ್ಮ ಸಾಧಕರೂ, ವಿದ್ವಾಂಸರೂ ಆದ ರಾಮಚಂದ್ರ ಅಪ್ಪಾಮೇತ್ರೆ ಮಾತನಾಡಿ, ಗುರುವಿನ ಮಹತ್ವ ಕುರಿತ ವ್ಯಾಖ್ಯಾನದೊಂದಿಗೆ ಜಗತ್ತಿನಲ್ಲಿ ಗುರು ಮತ್ತು ಹುಣ್ಣಿಮೆಗಿರುವ ವಿಶಿಷ್ಟ ಬಾಂಧವ್ಯ ಸಮೀಚೀನಗೊಳಿಸಿ, ದಿನದ ವಿಶೇಷತೆ ಬಣ್ಣಿಸಿದರು.

ಜಗತ್ತಿಗೇ ಬೆಳಕು: ಚುಂಚನಗಿರಿಯ ಹಿರಿಯ ಸಂತ ಪುರುಷೋತ್ತಮಾನಂದನಾಥ ಸ್ವಾಮೀಜಿ ಮಾತನಾಡಿ, ಪಂಚ ಋಣಗಳಿಂದ ಮುಕ್ತನಾಗಿ ಗುರು ಕರುಣೆಯಿಂದ ಬೆಳೆದವನು ಜಗತ್ತಿಗೇ ಬೆಳಕಾಗುತ್ತಾನೆ. ಗುರು ಸ್ಮರಣೆಯಲ್ಲಿ ಕೈವಲ್ಯ ಕಾಣುವಂತಾಗಲಿ ಎಂದು ಹಾರೈಸಿದರು. ಪದ್ಮ ಪ್ರಶಸ್ತಿ ಪುರಸ್ಕೃತೆ ಅಂಕೋಲಾದ ತುಳಸಿಗೌಡ, ಕೆ.ಆರ್‌. ಪೇಟೆ ತಹಶೀಲ್ದಾರ್‌ ಎಂ.ಆರ್‌. ರೂಪಾ, ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಶಾಖಾಮಠಗಳ
ಯತಿವರ್ಯರು, ಆದಿಚುಂಚನಗಿರಿ ವಿವಿಯ ಉಪ ಕುಲಪತಿ ಡಾ. ಎಂ.ಎ.ಶೇಖರ್‌, ರಿಜಿಸ್ಟ್ರಾರ್‌ ಡಾ.ಸಿ.ಕೆ. ಸುಬ್ಬರಾಯ ಮತ್ತಿತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.