ಹಿಂದುಳಿದ ಸಮುದಾಯದವರು ಸಂಘಟಿತರಾಗಬೇಕು


Team Udayavani, Feb 21, 2018, 1:08 PM IST

m1-hindilida.jpg

ಮೈಸೂರು: ಸರ್ವಜ್ಞರ ಜನ್ಮ ರಹಸ್ಯವನ್ನೇ ಮರೆಮಾಚುವ ಕೆಲಸ ನಡೆದಿದ್ದು, ಅಂತಹ ಸುಳ್ಳುಗಳಿಗೆ ಕಿವಿಗೊಡದೆ ಸಮಾಜಕ್ಕೆ ಅವರು ನೀಡಿರುವ ಕೊಡುಗೆಗಳನ್ನು ಸ್ಮರಿಸಬೇಕು ಎಂದು ಶಾಸಕ ಎಂ.ಕೆ.ಸೋಮಶೇಖರ್‌ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿಯಾಗಿ ಮಂಗಳವಾರ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,  ತ್ರಿಪದಿಗಳ ಮೂಲಕ ಸಾಹಿತ್ಯ ಲೋಕಕ್ಕೆ ಅದ್ಭುತ ಕೊಡುಗೆ ನೀಡಿರುವ ಸರ್ವಜ್ಞರನ್ನು ನೆನೆಸಿಕೊಳ್ಳುವ ಕಾರ್ಯ ಮಹತ್ತರವಾದುದು.

ಮಹಾನ್‌ ದಾರ್ಶನಿಕರನ್ನು ಸಮಾಜಕ್ಕೆ ಪರಿಚಯಿಸುವ ಜತೆಗೆ ಹಿಂದುಳಿದ ಸಮಾಜಗಳು ಸಂಘಟಿತರಾಗಲಿ ಎಂಬ ಕಾರಣದಿಂದ ಸಿದ್ದರಾಮಯ್ಯ ಸರ್ಕಾರ ಹಲವು ದಾರ್ಶನಿಕರ ಜಯಂತಿಗಳನ್ನು ಆಚರಿಸುತ್ತಿದೆ ಎಂದರು. ಮಹಾನ್‌ ಕವಿ ಸರ್ವಜ್ಞರ ಅನುಭವಾಮೃತದಿಂದ ಬಂದಿರುವ ತ್ರಿಪದಿಗಳು ಸಾರ್ವಕಾಲಿಕ.

ಆಡುಮುಟ್ಟದ ಸೊಪ್ಪಿಲ್ಲ ಎಂಬಂತೆ ಸರ್ವಜ್ಞ ಮುಟ್ಟದ ವಿಷಯವೇ ಇಲ್ಲ. ತಾವು ಅನುಭವಿಸಿದ ನೋವನ್ನೇ ಅವರು ತ್ರಿಪದಿಗಳಲ್ಲಿ ಹೇಳಿದ್ದಾರೆ ಎಂದರು. ಹಿಂದುಳಿದ ಸಮಾಜದಲ್ಲಿ ಹುಟ್ಟಿದ ವ್ಯಾಸ, ವಾಲ್ಮೀಕಿ, ಸರ್ವಜ್ಞರ ಹುಟ್ಟನ್ನೇ ಮರೆಮಾಚುವ ಕೆಲಸ ನಡೆದಿದೆ. ಇಂತಹ ಸುಳ್ಳುಗಳಿಗೆ ಕಿವಿಗೊಡದೆ ಸಮಾಜಕ್ಕೆ ಅವರು ನೀಡಿರುವ ಕೊಡುಗೆಗಳನ್ನು ಸ್ಮರಿಸಿರಿ ಎಂದು ಹೇಳಿದರು.

ಸಮಾಜ ಜಾಗೃತಿಗೆ ಅನುಕೂಲ: ಮುಖ್ಯಭಾಷಣ ಮಾಡಿದ ಹುಣಸೂರಿನ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಆರ್‌.ಗುರುಸ್ವಾಮಿ, ಸರ್ಕಾರ ವರ್ಷಕ್ಕೆ 30 ಜಯಂತಿಗಳನ್ನು ಮಾಡುತ್ತಾ ಬಂದಿದೆ. ಇದರ ಹಿಂದೆ ರಾಜಕೀಯ ಉದ್ದೇಶ ಏನೇ ಇದ್ದರೂ ಇದರಿಂದ ಸಮಾಜದ ಜಾಗೃತಿಗೆ ಅನುಕೂಲವಾಗಲಿದೆ ಎಂದರು.

ಕನ್ನಡ ಪ್ರಜ್ಞೆ ಇದ್ದ ಕವಿ ಸರ್ವಜ್ಞ, ಜನಸಾಮಾನ್ಯರನ್ನು ಎಚ್ಚರಿಸಲು ತ್ರಿಪದಿ ಬರೆದ. ವೈದಿಕಶಾಹಿಗಳು ಪ್ರತಿಭಾವಂತರೆಲ್ಲ ನಮ್ಮ ಬೀಜದಿಂದಲೇ ಹುಟ್ಟಿದವರು ಎಂಬ ಭಾÅಂತಿಯಲ್ಲಿದ್ದಾರೆ. ಇತರೆ ವರ್ಗದ ಪ್ರತಿಭಾವಂತರನ್ನು ಹೈಜಾಕ್‌ ಮಾಡುವ ಕೆಲಸ ನಡೆದಿದೆ. ಸರ್ವಜ್ಞನನ್ನು ಅನೈತಿಕತೆಯ ಸಂಬಂಧದಿಂದ ಹುಟ್ಟಿದವನು ಎಂದು ದಾಖಲಿಸಲಾಗಿದೆ. ಕುಂಬಾರ ಗುಂಡಯ್ಯನನ್ನೂ ವಿದ್ವಾಂಸರು ಅಲಕ್ಷ್ಯ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮೈಸೂರು ಮಹಾ ನಗರಪಾಲಿಕೆ ಸದಸ್ಯ ಪ್ರಕಾಶ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಚೆನ್ನಪ್ಪ, ಕನ್ನಡ ಚಳವಳಿಗಾರ ತಾಯೂರು ವಿಠಲಮೂರ್ತಿ, ಸಮುದಾಯದ ಮುಖಂಡರುಗಳಾದ ನಾಗಣ್ಣ, ರೇಣುಕಾಂಬ, ರಾಮು, ಹರೀಶ್‌, ತಿಮ್ಮಶೆಟ್ಟಿ, ಗುರುಪುರ ಸಣ್ಣಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

31 ಜನ ಜನಪ್ರತಿನಿಧಿಗಳಲ್ಲಿ ಬಂದವರು ಒಬ್ಬರೇ!: ಕವಿ ಸರ್ವಜ್ಞ ಜಯಂತಿ ಸರ್ಕಾರಿ ಕಾರ್ಯಕ್ರಮವಾದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆವತಿಯಿಂದ ಶಿಷ್ಠಾಚಾರದ ಪ್ರಕಾರ ಜಿಲ್ಲೆಯ 31 ಮಂದಿ ಚುನಾಯಿತ ಪ್ರತಿನಿಧಿಗಳ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿತ್ತು. ಆದರೆ, ಶಾಸಕ ಎಂ.ಕೆ.ಸೋಮಶೇಖರ್‌ ಹೊರತುಪಡಿಸಿದರೆ ಯಾವುದೇ ಜನಪ್ರತಿನಿಧಿಗಳು ಇತ್ತ ಬರಲಿಲ್ಲ.

ಜತೆಗೆ ಸಂಘಟನೆ ಕೊರತೆಯಿಂದ ಬೆರಳೆಣಿಕೆ ಸಭಿಕರಿಂದ ಕಲಾಮಂದಿರ ಭಣಗುಡುತ್ತಿತ್ತು.ಪೇಚಿಗೆ ಸಿಲುಕಿದ ಶಾಸಕ ಸೋಮಶೇಖರ್‌ ಶಾಸಕ ಎಂ.ಕೆ.ಸೋಮಶೇಖರ್‌ ತಮ್ಮ ಭಾಷಣದ ನಡುವೆ ಕೇಂದ್ರ ಸರ್ಕಾರ ಏನೂ ಮಾಡಿಲ್ಲ ಎಂದಾಗ ಸಭಿಕರೊಬ್ಬರು ರಾಜ್ಯಸರ್ಕಾರವು ಏನೂ ಮಾಡಿಲ್ವಲ್ಲಾ ಎಂದಾಗ ಪೇಚಿಗೆ ಸಿಲುಕಿದರು. ಹಿಂದುಳಿದ ಸಮಾಜಗಳವರು ಸಂಘಟಿತರಾಗಬೇಕು. ಆಗ ಮಾತ್ರ ಸರ್ಕಾರಿ ಸೌಲಭ್ಯ ಪಡೆಯಲು ಸಾಧ್ಯ.

ಇಲ್ಲವಾದಲ್ಲಿ ಬಲಿಷ್ಠರ ಪಾಲಾಗುತ್ತವೆ ಎಂದು ಹೇಳಲು ಹೊರಟ ಶಾಸಕ ಸೋಮಶೇಖರ್‌, ಕೇಂದ್ರ ಸರ್ಕಾರ ಏನೂ ಮಾಡಿಲ್ಲ ಎಂದರು. ಸಭಿಕರ ಮಧ್ಯೆಯಿಂದ ರಾಜ್ಯ ಸರ್ಕಾರ ಸಹ ಏನೂ ಮಾಡಿಲ್ವಲ್ಲಾ ಸಾರ್‌ ಎಂಬ ಪ್ರಶ್ನೆ ತೂರಿಬಂತು. ಇದರಿಂದ ಪೇಚಿಗೆ ಸಿಲುಕಿದ ಶಾಸಕರು, ಇದು, ಇದು ಪ್ರಾರಂಭ ಮಾಡಿದ್ದೇವಲ್ಲ, 3 ವರ್ಷದ ಹಿಂದೆ ಸರ್ವಜ್ಞ ಜಯಂತಿ ಶುರು ಮಾಡಿದ್ದೇವೆ. ನಾನಾಗಿ ರಾಜಕೀಯ ಮಾತನಾಡಲಿಲ್ಲ. ನೀವಾಗಿ ಕೇಳಿದ್ದಕ್ಕೆ ಹೇಳಿದೆ ಎಂದು ಸಮಜಾಯಿಷಿ ನೀಡಿದರು.

ಟಾಪ್ ನ್ಯೂಸ್

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.