ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಎಸ್ಗೆ ದೂರು
Team Udayavani, Jan 11, 2018, 6:50 AM IST
ಮೈಸೂರು: ನವ ಕರ್ನಾಟಕ ನಿರ್ಮಾಣ ಯಾತ್ರೆ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಹಣ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ವಿಶ್ವನಾಥ್ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.
ಈ ಸಂಬಂಧ ಮುಖ್ಯಕಾರ್ಯದರ್ಶಿ ರತ್ನಪ್ರಭಾ ಅವರಿಗೆ ಪತ್ರ ಬರೆದಿರುವ ವಿಶ್ವನಾಥ್, ಮುಖ್ಯಮಂತ್ರಿ ಕಾಂಗ್ರೆಸ್ ಸರ್ಕಾರದ ಸಾಧನೆಯನ್ನು ಕಾಂಗ್ರೆಸ್ ಪಕ್ಷದ ವೇದಿಕೆಯ ಮೂಲಕ ಕಾರ್ಯಕ್ರಮ ರೂಪಿಸಿ ತಮ್ಮ ಪಕ್ಷದಿಂದ ವೆಚ್ಚ ಭರಿಸುತ್ತಿರುವುದಾಗಿ ಜನತೆಗೆ ತಿಳಿಸಲು ಯಾರ ತಗಾದೆಯೂ ಇಲ್ಲ. ಆದರೆ ಪರ್ಯಟನೆ ವೇಳೆ, ಪ್ರಚಾರ, ಪೆಂಡಾಲು, ಭೂರಿ ಭೋಜನಕ್ಕೆ ಸರ್ಕಾರಿ ಖರ್ಚು ಮಾಡುತ್ತಿದ್ದಾರೆ. ಅಲ್ಲದೆ ವೇದಿಕೆಯಲ್ಲಿ ರಾಜಕೀಯ, ಚುನಾವಣಾ ಭಾಷಣಗಳನ್ನು ಮಾಡಿಕೊಂಡು ಅಧಿಕಾರ ದುರುಪ ಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ .