ನಂಜನಗೂಡು: ಮತಬೇಟೆ ಆರಂಭಿಸಿದ ದರ್ಶನ್
Team Udayavani, Apr 4, 2023, 10:51 AM IST
ನಂಜನಗೂಡು/ಹುಲ್ಲಹಳ್ಳಿ: ನಂಜನಗೂಡಿನ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ ಸೋಮವಾರ ಬೇಲದ ಕುಪ್ಪೆಗೆ ತೆರಳಿ ಮಹದೇಶ್ವರರಿಗೆ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರವನ್ನು ಅಧಿಕೃತ ವಾಗಿ ಆರಂಭಿಸಿದರು.
ನಂತರ ಬಂಕಳ್ಳಿಗೆ ಆಗಮಿಸಿ ಅಲ್ಲಿ ಮತಯಾ ಚಿ ಸು ವುದರೊಂದಿಗೆ ತಾಲೂಕಿನ ಚುನಾವಣಾ ಕಣಕ್ಕೆ ರಂಗು ತುಂಬುವ ಪ್ರಯತ್ನಿಸಿದರು. ನಂತರ ಮಾತನಾಡಿದ ಅವರು, ಜನಸೇವೆ ತಮಗೆ ಹೊಸದು ಯಾವುದೇ ಕಾರಣಕ್ಕೂ ಮತ ನೀಡಿದ ಮತದಾರ ಪ್ರಭುಗೆ ಅನ್ಯಾಯ ಮಾಡಲಾರೆ. ನಂಜನಗೂಡು ಕ್ಷೇತ್ರದ ಜನತೆಗೆ ಅನುದಿನವೂ ಪ್ರಾಮಾಣಿಕವಾಗಿ ಕೈಲಾದ ಸೇವೆ ಮಾಡಿ ಮತ ನೀಡಿದ ನಿಮ್ಮ ಋಣ ತೀರಿಸುವೆ ಎಂದರು. ತಂದೆ ಧ್ರುವನಾರಾಯಣರ ಅಕಾಲಿಕ ಮರಣದಲ್ಲಿ ಜನ ತಮ್ಮ ತಂದೆಗೆ ತೋರಿದ ಗೌರವ ತನ್ನನ್ನು ವಿಸ್ಮಯಗೊಳಿಸಿದೆ. ಅದೇ ರೀತಿಯಲ್ಲಿ ನಿಮ್ಮ ಪ್ರೀತಿ ವಿಶ್ವಾಸವನ್ನು ಹಿಡಿದಿಟ್ಟುಕೊಳ್ಳವ ಮಹದಾಸೆ ತಮ್ಮದಾಗಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಕಳಲೆ ಕೇಶವ ಮೂರ್ತಿ ನೇತೃತ್ವದಲ್ಲಿ ತಾಲೂಕು ಕಾಂಗ್ರೆಸ್ ನಾಯಕರೇ ಇಲ್ಲಿನ ಚುನಾವಣೆಯ ಹೊಣೆಗಾರಿಕೆ ನಿಭಾಯಿಸುತ್ತಾರೆ. ತಮ್ಮನ್ನು ಮತ ನೀಡಿ ಆಶೀರ್ವದಿಸಿ ಎಂದು ಮತದಾರರಿಗೆ ಶಿರಬಾಗಿ ನಮಿಸಿದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ತಾಲೂಕಿನ ಜನ ಬದಲಾವಣೆಯೊಂದಿಗೆ ದರ್ಶನ್ ಧ್ರುವನಾರಾ ಯಣರ ಯಶಸ್ಸನ್ನು ಸಹ ಬಯಸಿದ್ದಾರೆ ಎಂದರು.
ನಾವೀಗ ಮತದಾರರ ಆಶೀರ್ವಾದಕ್ಕಾಗಿ ದರ್ಶನ್ ಧ್ರುವನಾರಾಯಣರೊಂದಿಗೆ ಕ್ಷೇತ್ರದ ಪ್ರತಿ ಗ್ರಾಮ ಹಾಗೂ ಮನೆ ಮನೆಗೆ ಬೇಟಿ ನೀಡಲು ಆರಂಭಿಸಿದ್ದು ಶೀಘ್ರ ನಾಮಪತ್ರ ಸಲ್ಲಿಸಲಾಗುವುದು. ಮಾಜಿ ಸಚಿವ ಎಂ.ಮಹದೇವ ಅವರ ಪತ್ನಿ ರಾಜಮ್ಮ ಪುತ್ರ ವಿದ್ಯಾಲಂಕಾರ ದರ್ಶನ್ ಧ್ರುವನಾರಾಯ ಣರನ್ನು ಆಶೀರ್ವದಿಸಿದ್ದು ಮತಯಾಚನೆಗೂ ನಮ್ಮೊಂದಿಗಿದ್ದಾರೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ, ಸಿ.ಎಂ. ಶಂಕರ್, ಶ್ರೀಕಂಠ, ಸೋಮೇಶ, ಬಿ.ಎಂ.ನಾಗೇಶ ರಾಜು, ಶಿವಪ್ಪದೇವರು, ದೊರೆಸ್ವಾಮಿ ನಾಯಕ, ಮಾರುತಿ, ಅಶೋಕ , ಸಂಜಯ , ಹುಚ್ಚೇಗೌಡ, ಲತಾ ಸಿದ್ಧಶೆಟ್ಟಿ, ನಾರಾಯಣ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ