Fraud: ದುಬೈಗೆ ಪ್ರವಾಸ ಕರೆದೊಯ್ಯುವುದಾಗಿ ನಂಬಿಸಿ 3 ಲಕ್ಷ ರೂ. ವಂಚನೆ: ದೂರು
Team Udayavani, Feb 21, 2024, 2:47 PM IST
ಮೈಸೂರು: ದುಬೈಗೆ ಪ್ರವಾಸ ಕರೆದೊಯ್ಯುವುದಾಗಿ ಹೇಳಿ ವಂಚಕನೊಬ್ಬ ನಗರದ ವ್ಯಕ್ತಿಯೊಬ್ಬರಿಗೆ 3 ಲಕ್ಷ ರೂ. ವಂಚಿಸಿರುವ ಬಗ್ಗೆ ನಜರಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೇರಳ ಮೂಲದ ಪ್ರೇಮದಾಸ್ ಎಂಬುವನ ವಿರುದ್ಧ ನಗರದ ಬೋಗಾದಿ ನಿವಾಸಿ ಕೃಷ್ಣೇಗೌಡ ಎಂಬವರು ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಕೃಷ್ಣೇಗೌಡ ಹಾಗೂ ಇನ್ನಿತರರು ಈ ಹಿಂದೆ ಜಮ್ಮು, ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿ ಕೇರಳದ ಪ್ರೇಮದಾಸ್ ಪರಿಚಯವಾಗಿದ್ದರು. ನಾನು ಟ್ರಾವೆಲ್ ಏಜೆಂಟ್ ಆಗಿದ್ದು, ಪ್ರವಾಸಗಳನ್ನು ಆಗಾಗ್ಗೆ ಏರ್ಪಡಿಸುತ್ತೇನೆ ಎಂದು ಹೇಳಿದ್ದನು. ಪ್ರವಾಸ ಮುಗಿಸಿ ವಾಪಸ್ಸಾದ ಕೃಷ್ಣೇಗೌಡ ಹಾಗೂ ಸ್ನೇಹಿತರು ದುಬೈಗೆ ಪ್ರವಾಸ ತೆರಳಲು ಸಿದ್ಧತೆ ನಡೆಸಿದ್ದರು. ಈ ವೇಳೆ ಪ್ರೇಮದಾಸ್ನನ್ನು ಅವರ ಸಂಪರ್ಕಿಸಿದರು. ಆತ ಕೂಡ ದುಬೈ ಪ್ರವಾಸವನ್ನು ಏರ್ಪಡಿಸುವುದಾಗಿ ಹೇಳಿದ್ದ. ಆತನ ಮಾತನ್ನು ನಂಬಿದ ಅವರು ನಜರಬಾದ್ನ ಖಾಸಗಿ ಹೋಟೆಲ್ನಲ್ಲಿ 25 ಸಾವಿರ ರೂ. ಮುಂಗಡ ನೀಡಿದ್ದರು. ನಂತರ ಹಂತಹಂತವಾಗಿ ಆತನಿಗೆ 3 ಲಕ್ಷ ರೂ. ನೀಡಿದ್ದರು. ನಂತರ ಆತ ಪ್ರವಾಸಕ್ಕೆ ದಿನಾಂಕವನ್ನು ನಿಗದಿಪಡಿಸಲಿಲ್ಲ. ಆತನನ್ನು ಪ್ರಶ್ನಿಸಲು ಮುಂದಾದ ವೇಳೆ ಆತನ ಮೊಬೈಲ್ ಸ್ವಚ್ ಆಫ್ ಆಗಿತ್ತು. ಹೀಗಾಗಿ ಅವರು ಆತನ ವಿರುದ್ಧ ನಜರಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲಿಸರು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad; ವಾರಂಟಿ ಇಲ್ಲದ ಕಾಂಗ್ರೆಸ್ ನ ಗ್ಯಾರಂಟಿ ನಂಬಬೇಡಿ: ಅಣ್ಣಾಮಲೈ
Shobha Karandlaje; 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ
Honnavar; ಖಾಸಗಿ ಬಸ್ ಪಲ್ಟಿ: 2 ಸಾವು, 45ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ
Yellapur: ಟಿಪ್ಪರ್ ಗೆ ಢಿಕ್ಕಿಯಾಗಿ ಬೈಕ್ ಸಹಸವಾರೆ ಬಾಲಕಿ ಮೃತ್ಯು
CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ