Hunsur; ಹಣಕಾಸು ವಿಚಾರಕ್ಕೆ ಗಲಾಟೆ:ಸ್ನೇಹಿತರಿಂದ ಬಿಯರ್ ಬಾಟಲ್ನಿಂದ ಹಲ್ಲೆ
Team Udayavani, Dec 13, 2023, 11:30 PM IST
ಹುಣಸೂರು: ಹಣಕಾಸು ವಿಚಾರ ಸ್ನೇಹಿತರಿಂದ ಬಿಯರ್ ಬಾಟಲ್ ನಿಂದ ಚುಚ್ಚಿ ಗಾಯಗೊಳಿಸಿರುವ ಘಟನೆ ತಾಲೂಕಿನ ಬಿಬಿಸಿ ಕಾಲೋನಿಯಲ್ಲಿ ನಡೆದಿದ್ದು, ಪೊಲೀಸರು ಒರ್ವನನ್ನು ಬಂಧಿಸಿದ್ದಾರೆ.
ಬಿಬಿಸಿ ಕಾಲೋನಿಯ ಶಿವು(25)ಗಾಯಗೊಂಡಾತ.ಇದೇ ಗ್ರಾಮದ ಈರಪ್ಪ ಮತ್ತವನ ಸಹೋದರ ಗಣೇಶ್ ಕೃತ್ಯನಡೆಸಿದವರು. ಗಣೇಶನ್ನು ಬಂಧಿಸಿದ್ದರೆ. ಈರಣ್ಣ ನಾಪತ್ತೆಯಾಗಿದ್ದಾನೆ.
ಮೂವರು ಒಂದೇ ಗ್ರಾಮದವರಾಗಿದ್ದು, ಈರಪ್ಪನಿಂದ ಶಿವು ೩೦ ಸಾವಿರ ರೂ ಸಾಲ ಪಡೆದಿದ್ದ, ಈಗಾಗಲೆ ಬಡ್ಡಿಸೇರಿ 1.5 ಲಕ್ಷರೂ. ಹಣ ಹಿಂದಿರುಗಿಸಿದ್ದ, ಇನ್ನೂ ಹಣ ಕೊಡಬೇಕೆಂದು ಈರಪ್ಪ ಶಿವುನನ್ನು ಆಗಾಗ್ಗೆ ಗಲಾಟೆ ಮಾಡುತ್ತಿದ್ದ, ಮಾಮೂಲಿನಂತೆ ಶಿವುನನ್ನು ಗ್ರಾಮದ ಬಳಿಯ ಬಾರ್ ಹತ್ತಿರ ಬರಲು ಈರಣ್ಣ ಕರೆ ಮಾಡಿ ಮೂವರು ಒಟ್ಟಿಗೆ ಸೇರಿದ್ದರು. ಹಣಕಾಸಿನ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಶಿವಿನ ಮೇಲೆ ಬಿಯರ್ ಬಾಟಲ್ ನಿಂದ ಹಲ್ಲೆಗೆ ಮುಂದಾದಾಗ ತತ್ ಕ್ಷಣವೇ ಶಿವು ತಪ್ಪಿಸಿಕೊಂಡಿದ್ದರಿಂದ ಬೆನ್ನು ಹಾಗೂ ತೋಳಿಗೆ ಪೆಟ್ಟು ಬಿದ್ದು ಗಾಯಗಳಾಗಿದ್ದು, ಗಲಾಟೆ ಕೇಳಿದವರು ಹುಣಸೂರು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಗಣೇಶನನ್ನು ಬಂಧಿಸಿದ್ದು, ಈರಪ್ಪ ತಲೆ ಮರೆಸಿಕೊಂಡಿದ್ದಾನೆ.