Hunsur; ಹಾಡ ಹಗಲೇ ಚಿರತೆ ದಾಳಿಗೆ ಮೇಕೆಗಳು ಬಲಿ: ಸೆರೆಗೆ ರೈತರ ಆಗ್ರಹ
Team Udayavani, Oct 18, 2023, 10:03 PM IST
ಹುಣಸೂರು: ಹಾಡಹಗಲೇ ಜಮೀನಿನಲ್ಲಿ ಮೇಯುತ್ತಿದ್ದ ಮೇಕೆಗಳ ಮೇಲೆ ದಾಳಿ ನಡೆಸಿರುವ ಚಿರತೆ ಎರಡು ಮೇಕೆಯನ್ನು ಕೊಂದು ಹಾಕಿರುವ ಘಟನೆ ತಾಲೂಕಿನ ಕೊಳ್ಳಗಟ್ಟದಲ್ಲಿ ನಡೆದಿದೆ.
ಬಿಳಿಕೆರೆ ಹೋಬಳಿಯ ಕೊಳಗಟ್ಟ ಗ್ರಾಮದ ಕುಮಾರ್ರಿಗೆ ಸೇರಿದ ಮೇಕೆಗಳು ಇವಾಗಿದ್ದು, ತಮ್ಮ ಜಮೀನಿನಲ್ಲಿ ಮೇಯಲು ಬಿಟ್ಟದ್ದ ಮೇಕೆಗಳ ಮೇಲೆ ಚಿರತೆಯು ದಾಳಿ ನಡೆಸಿದೆ, ಈ ವೇಳೆ ಮೇಕೆಗಳು ಜೋರಾಗಿ ಚೀರಾಟ ನಡೆಸಿವೆ. ಅಕ್ಕಪಕ್ಕದಲ್ಲಿದಲ್ಲಿದ್ದ ದನಗಾಹಿಗಳು ಜೋರಾಗಿ ಕೂಗಿಕೊಂಡಿದ್ದರಿಂದ ಮೇಕೆಗಳನ್ನು ಬಿಟ್ಟು ಚಿರತೆ ಓಡಿ ಹೋಗಿದೆ. ಹತ್ತಿರ ಬಂದು ನೋಡುವಷ್ಟರಲ್ಲಿ ಮೇಕೆಗಳು ಸಾವನ್ನಪ್ಪಿದ್ದವು.
ಕೊಳಗಟ್ಟ ಗ್ರಾಮವು ಅರಬ್ಬಿತಿಟ್ಟು ರಕ್ಷಿತಾರಣ್ಯದ ಪಕ್ಕದಲ್ಲೇ ಇದ್ದು, ಕೊಳಗಟ್ಟ, ಕುಪ್ಪೆ, ರಂಗಯ್ಯನಕೊಪ್ಪಲು, ಮಧುಗಿರಿಕೊಪ್ಪಲು ಭಾಗದಲ್ಲಿ ಚಿರತೆಗಳ ಹಾವಳಿ ಸಾಕಷ್ಟಿದ್ದು, ಸಾಕುಪ್ರಾಣಿಗಳನ್ನು ರಕ್ಷಿಸಿಕೊಳ್ಳಲು ರೈತರು ಪರದಾಡುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ರೈತರು ಮಾಹಿತಿ ನೀಡಿದ ಕೂಡಲೆ ಬೋನಿಟ್ಟು ಚಿರತೆಗಳನ್ನು ಬಂಧಿಸುವಂತೆ ರೈತರು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ