ಕೋಟೆಯಲ್ಲಿ ಉದ್ಯೋಗ ಮೇಳ
Team Udayavani, Oct 1, 2018, 11:45 AM IST
ಎಚ್.ಡಿ.ಕೋಟೆ: ಗ್ರಾಮೀಣ ಭಾಗದ ನಿರುದ್ಯೋಗಿಗಳು ಕೇವಲ ಸರ್ಕಾರಿ ಕೆಲಸವೇ ಬೇಕೆಂದು ಹಠ ಹಿಡಿಯದೆ ಸ್ಥಳೀಯ ಉದ್ಯೋಗ ಮೇಳಗಳಲ್ಲಿ ಪಾಲ್ಗೊಂಡು ಪ್ರತಿಷ್ಠಿತ ಕಂಪನಿಗಳಲ್ಲಿಯೇ ಕೆಲಸಕ್ಕೆ ಸೇರಿ ಸ್ವಾಭಿಮಾನಿಗಳಾಗಿ ಬದುಕಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ಪಟ್ಟಣದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಉದ್ಯೋಗ ಮೇಳಗಳು ತಾಲೂಕು ಮಟ್ಟದಲ್ಲಿ ಆಯೋಜಿಸಿ ಗ್ರಾಮೀಣ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿಕೊಡುವುದು ನನ್ನ ಕನಸಿನ ಯೋಜನೆ.
ಸ್ವಾಭಿಮಾನಿಗಳಾಗಿ ಬದುಕಲು ಹಾಗೂ ನಿಮ್ಮನ್ನೇ ಅವಲಂಬಿಸಿರುವ ಕುಟುಂಬ ಪೋಷಣೆಗೆ ಇಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಉದ್ಯೋಗ ಮೇಳ ಗ್ರಾಮೀಣ ನಿರುದ್ಯೋಗಿಗಳಿಗೆ ವರದಾನವೆಂದೇ ಭಾವಿಸಬೇಕೆಂದರು.
ಪ್ರತಿಷ್ಠಿತ ಕಂಪನಿಗಳು: ಮೇಳದಲ್ಲಿ ಇನ್ಫೋಸಿಸ್, ವೈಟ್ ಹಾರ್ಸ್, ಹೀರೋ, ಸಿಎಫ್ಟಿಆರ್ಐ, ಗುರುಕುಲ ತರಬೇತಿ ಸಂಸ್ಥೆ, ಎಲ್ಐಸಿ, ಮತ್ತು ಗ್ಲೋಬಾಲ್ ಮ್ಯಾನೇಜ್ಮೆಂಟ್, ಮುತ್ತೂಟ್ ಫಿನ್ ಕಾರ್ಪ, ಫ್ರೆಶ್ ವರ್ಲ್ಡ್, ಕೆನರಾ ಬ್ಯಾಂಕ್, ಎಸ್ಬಿಐ ಲೈಫ್ ಮತ್ತಿತರ 30ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಪಾಲ್ಗೊಂಡಿದ್ದವು, ತಾಲೂಕಿನ 3 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಭಾರೀ ಮಳೆ; ಮನೆಗಳಿಗೆ ನುಗ್ಗಿದ ಮಳೆನೀರು; ಬೆಳೆ ಹಾನಿ, ರೈತರಿಗೆ ಸಂಕಷ್ಟ
Eshwar Khandre ವನ್ಯಜೀವಿಗಳ ಹಾವಳಿ: ಕಾಡಂಚಿನಲ್ಲಿ ಕಂದಕ ನಿರ್ಮಾಣಕ್ಕೆ ಆದ್ಯತೆ
HD Revanna ನನ್ನನ್ನು ಅಪಹರಿಸಿಲ್ಲ, ಸಂಬಂಧಿಕರ ಮನೆಯಲ್ಲಿದ್ದೇನೆ
ಯಾರನ್ನೂ ರಾಜಕೀಯವಾಗಿ ಸಮಾಧಿ ಮಾಡಲು ಸಾಧ್ಯವಿಲ್ಲ: ಸಿದ್ದರಾಮಯ್ಯ
Siddaramaiah ಪಕ್ಷ ಬೇರೆಯಾದರೂ ಸಂಸದ ಪ್ರಸಾದ್ ಜತೆಗಿನ ಸ್ನೇಹಕ್ಕೆ ಧಕ್ಕೆ ಇರಲಿಲ್ಲ
MUST WATCH
ಹೊಸ ಸೇರ್ಪಡೆ
Rahul Gandhi ಅವರಿಗೆ ಪತ್ರ ಬರೆದು ಬಹಿರಂಗ ಚರ್ಚೆಗೆ ಪ್ರತಿನಿಧಿ ಸಿದ್ದ ಎಂದ ತೇಜಸ್ವಿ ಸೂರ್ಯ
Nomination; ವಾರಾಣಸಿಯಲ್ಲಿ ಪ್ರಧಾನಿ ಮೋದಿ ಮೆಗಾ ರೋಡ್ ಶೋ
Hunsur: ಭಾರೀ ಮಳೆ; ಮನೆಗಳಿಗೆ ನುಗ್ಗಿದ ಮಳೆನೀರು; ಬೆಳೆ ಹಾನಿ, ರೈತರಿಗೆ ಸಂಕಷ್ಟ
Eshwar Khandre ವನ್ಯಜೀವಿಗಳ ಹಾವಳಿ: ಕಾಡಂಚಿನಲ್ಲಿ ಕಂದಕ ನಿರ್ಮಾಣಕ್ಕೆ ಆದ್ಯತೆ
Yadgir: ಸಿಡಿಲು ಬಡಿದು ಕುರಿಗಾಹಿ ಮೃತ್ಯು, 17 ಕುರಿಗಳು ಸಾವು