ನಂಜನಗೂಡು: ಗುರು ಪೂರ್ಣಿಮೆ ಪುಣ್ಯ ಸ್ನಾನಕ್ಕೆ ತಡೆಯೊಡ್ಡಿದ ಕಪಿಲೆ
Team Udayavani, Jul 13, 2022, 3:35 PM IST
ನಂಜನಗೂಡು: ಪವಿತ್ರವಾದ ಗುರು ಪೂರ್ಣಿಯೆಂದು ನಂಜನಗೂಡಿಗೆ ಅಗಮಿಸಿದ ಶ್ರೀಕಂಟೇಶ್ವರನ ಭಕ್ತ ವೃಂದ ಇಂದು ಕಪಿಲಾ ತೀರ್ಥ ಸ್ನಾನ ಮಡಲಾಗದೇ ಪರಿತಪಿಸುವಂತಾಯಿತು.
ಕಪಿಲೆ ನದಿ ತುಂಬಿ ಹರಿಯಲಾರಂಭಿಸಿದ್ದರಿಂದಾಗಿ ಸ್ನಾನಘಟ್ಟವೆಲ್ಲ ನೀರಿನಿಂದಾವೃತ್ತವಾಗಿತ್ತು, ಹಾಗಾಗಿ ಪೊಲೀಸರು ಇಲ್ಲಿ ಭಕ್ತರ ಸ್ನಾನಕ್ಕೆ ನಿರ್ಬಂಧ ಹೇರಿದ್ದರಿಂದ ಸಹಸ್ರಾರು ಭಕ್ತರಿಗೆ ನಿರಾಷೆಯಾಯಿತು.
ಗುರುಪೂರ್ಣಿಮೆ ಪ್ರಯಕ್ತ ಶಾಸಕ ಹರ್ಷವರ್ಧನ ಸೇರಿದಂತೆ 15, 000ಕ್ಕೂ ಹೆಚ್ಚು ಜನ ಇಂದು ಶ್ರೀಕಂಠೇಶ್ವರನ ದರ್ಶನ ಪಡೆದರು.
ಶ್ರೀಧರ್ ಆರ್ ಭಟ್