ಪ್ರತಿಮಾ ಗ್ಯಾಲರಿಯ ಬೊಂಬೆಮನೆಯಲ್ಲಿ ಬೊಂಬೆಗಳ ಲೋಕ ಅನಾವರಣ


Team Udayavani, Sep 14, 2019, 3:00 AM IST

pratma

ಮೈಸೂರು: ದಸರಾ ಎಂದರೆ ಜಂಬೂಸವಾರಿ ಮಾತ್ರವಲ್ಲ ಮೈಸೂರಿನಲ್ಲಿ ದಸರಾ ಬೊಂಬೆ ಹಬ್ಬವೂ ನಡೆಯುತ್ತೆ, ನವರಾತ್ರಿ ಸಂದರ್ಭದಲ್ಲಿ ಮನೆ ಮನೆಗಳಲ್ಲಿ ಬೊಂಬೆ ಕೂರಿಸಿ ಪೂಜಿಸಲಾಗುತ್ತದೆ. ನಗರದ ನಜರ್‌ಬಾದ್‌ನಲ್ಲಿರುವ ಪ್ರತಿಮಾ ಗ್ಯಾಲರಿಯಲ್ಲಿ ಏರ್ಪಡಿಸಿರುವ ಬೊಂಬೆ ಪ್ರದರ್ಶನ ಎಲ್ಲರ ಗಮನ ಸೆಳೆಯುತ್ತಿದೆ.

ಪ್ರತಿಮಾ ಗ್ಯಾಲರಿಯ ಈ ಬೊಂಬೆ ಮನೆ ಹತ್ತಾರು ಕಥೆಗಳನ್ನು ಹೇಳುತ್ತಾ, ಇತಿಹಾಸವನ್ನು ಮರು ಪರಿಚಯಿಸುವ ಕೆಲಸ ಮಾಡುತ್ತಿದೆ. 60 ವರ್ಷಗಳ ಹಿಂದೆ ತಯಾರಾದ ಬಾರ್ಬೀ ಬೊಂಬೆಯ ಷಷ್ಟಬ್ದಿಪೂರ್ತಿಗೆ ಬೊಂಬೆ ಮನೆಯಲ್ಲಿ ವಿಶೇಷ ಅಂಕಣ ಮಾಡಲಾಗಿದೆ. ಬಾರ್ಬೀಗೊಂಬೆಯ ವೈವಿಧ್ಯಮಯ ಅವತಾರಗಳ ಜೊತೆಗೆ ಜರ್ಮನಿ, ಉಜ್ಬೇಕಿಸ್ತಾನ್‌, ಫ್ರಾನ್ಸ್‌, ಥೈಲ್ಯಾಂಡ್‌, ವಿಯೆಟ್ನಾಂ, ಬ್ರಿಟನ್‌ ಮತ್ತಿತರ ಸುಮಾರು ಹತ್ತು ದೇಶಗಳ ಸಾಂಪ್ರದಾಯಿಕ ಬೊಂಬೆಗಳ ದೃಶ್ಯಾವಳಿ ಮನಮೋಹಕವಾಗಿದೆ.

ವರ್ಣಾಂಕಿತ: ವರ್ಣಾಂಕಿತ ಎಂಬ ಮತ್ತೊಂದು ವಿಶೇಷ ಅಂಕಣದಲ್ಲಿ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನ ನೀಡಲಾಗಿರುವ ನಾಮ-ತಿಲಕಗಳನ್ನು ಪ್ರದರ್ಶಿಸಲಾಗಿದೆ. ಹಿಂದೂ ಧರ್ಮದ ವಿವಿಧ ಪ್ರಭೇದಗಳ, ಮನೆ-ಮಠಗಳ ಸಂಪ್ರದಾಯದ ಶಿರಾರ್ಥ, ವಸ್ತ್ರ, ಅಲಂಕರಣ, ಸಂಜ್ಞಾ ವೈಶಿಷ್ಟéಗಳು, ಸನಾತನ ಜ್ಞಾನದ ಸಮಾಜಮುಖಿ ಸಂಘ ಸೂಚಿಗಳು, ಕುಂಕುಮ, ಅರಿಶಿನ, ಕಾಡಿಗೆ, ವಿಭೂತಿ-ಭಸ್ಮಗಳಲ್ಲದೆ,

ಅಗರು, ಗೋಪಿಚಂದನ, ತುಲಸೀಚೂರ್ಣ, ಕೇಸರಿ, ಸಿಂಧೂರ, ಅಂಗಾರಕ, ಭಂಡಾರ, ಬುಕ್ಕ, ಸಾದ್‌, ಗಂಧಾಕ್ಷತ, ಗೋರೋಚನ, ಗುಲಾಲ್‌ ಇತ್ಯಾದಿ ದ್ರವ್ಯ ವಿಶೇಷಗಳ ಬಳಕೆ, ಹಣೆಯ ಜೊತೆಗೆ ಕೆನ್ನೆ, ಕಪೋಲ, ನಾಸಿಕಗಳು ಕೆಲವೊಮ್ಮೆ ದೇಹದ ಬೇರೆ ಬೇರೆ ಭಾಗಗಳಲ್ಲಿ ತಿಲಕ ಅಲಂಕಾರ ಮಾಡಿಕೊಳ್ಳುವುದು ಸಹಜ. ಹಲವು ಜನಾಂಗಗಳವರು, ಅವರ ನಂಬಿಕೆಗಳು ಹೇಗೆ ವೈವಿಧ್ಯವೋ ಅಂತೆಯೇ ಅವರ ತಿಲಕಗಳು ಕೂಡ ವಿಶಿಷ್ಟ.

ಗಣ್ಯರ ವಿಶೇಷತೆ: ಇದರ ಜೊತೆಗೆ ಈ ವರ್ಷ ಮಹಾತ್ಮ ಗಾಂಧಿ ಸೇರಿದಂತೆ ಹಲವಾರು ಮಹನೀಯರ ಜನ್ಮ ವಾರ್ಷಿಕೋತ್ಸವಗಳ ವಿಶೇಷವಿದೆ. ಮಹಾತ್ಮ ಗಾಂಧಿ 150ನೇ ವರ್ಷ, ಮೈಸೂರಿನ 24ನೇಯ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌-135, ಪಂ.ಜವಹರಲಾಲ್‌ ನೆಹರು-130, ಮೈಸೂರಿನ 25ನೇ ಮಹಾರಾಜ ಜಯಚಾಮರಾಜ ಒಡೆಯರ್‌ರ 100ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಬೊಂಬೆ ಮನೆಯಲ್ಲಿ ಇವರುಗಳಿಗೆ ಸಂಬಂಧಿಸಿದ ಬೊಂಬೆಗಳು, ಚಿತ್ರಪಟಗಳು, ಛಾಯಾಚಿತ್ರಗಳು ಹಾಗೂ ವಸ್ತು ವಿಶೇಷಗಳ ಪ್ರದರ್ಶನ ಆಯೋಜಿಸಲಾಗಿದೆ.

ದೇವತೆಯ ಕೈಯಲ್ಲಿ ಕುಳಿತು ಅವರೊಡನೆ ಸಲ್ಲಾಪ ನಡೆಸುವಂತೆ ಕಾಣುವ ಲೀಲಾ ಶುಕ ಗಿಳಿಯ ಹಲವಾರು ಬಣ್ಣಗಳಿಂದ ಕಣ್ಣು ಕೋರೈಸುವಂತೆ ರಂಜಿತಗೊಂಡ ವಿವಿಧ ಆಕಾರ, ಅಳತೆಗಳ ನೂರಾರು ಗಿಳಿಗಳು ಲೀಲಾ ಶುಕ ಅಂಕಣದಲ್ಲಿವೆ. ಇವುಗಳ ಜೊತೆಗೆ ಹಲವಾರು ನವೀನ ಮಾದರಿಯ ಗೊಂಬೆಗಳು ಬೊಂಬೆ ಮನೆಯ 15ನೇ ಅವತರಣಿಕೆಯಲ್ಲಿವೆ. ಮೈಸೂರಿನ ರಾಜದಂಪತಿ ಅಪ್ಪಾಜಿ-ಅಮ್ಮಣ್ಣಿಯರು, ಗಜೇಂದ್ರಮೋಕ್ಷ, ಸಪ್ತನದಿಗಳು, ನವನಟರಾಜ, ಅತ್ತಿ ವರದರಾಜ ಸ್ವಾಮಿ, ರಾಮ-ಗುಹ ಆಲಿಂಗನ, ಗೊಂಬೆ ವಧು-ವರರ ಜೋಡಿ..

ಹೀಗೆ ಪ್ರತಿಮಾ ಗ್ಯಾಲರಿಯಲ್ಲಿ ಅನುಪಮ ಗೊಂಬೆಗಳ ಮೇಳವೇ ಸೇರಿದೆ. ನಜರ್‌ಬಾದ್‌ ಮುಖ್ಯರಸ್ತೆಯಲ್ಲಿರುವ ಪ್ರತಿಮಾ ಗ್ಯಾಲರಿಯಲ್ಲಿ ರಾಮ್‌ಸನ್ಸ್‌ ಕಲಾ ಪ್ರತಿಷ್ಠಾನ ಆಯೋಜಿಸಿರುವ ಬೊಂಬೆ ಮನೆಯನ್ನು ವರ್ಷಪೂರ್ತಿ ಬೆಳಗ್ಗೆ 10 ರಿಂದ ಸಂಜೆ 7.30ರವರೆಗೆ ವೀಕ್ಷಿಸಬಹುದು.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.