“ಹಿಂದೂ ಧರ್ಮದ ಬಗ್ಗೆ ಮಾತನಾಡಿದ್ರೆ ಕೊಂದುಹಾಕ್ತೇವೆ ಅಂತಾರೆ’


Team Udayavani, Jun 25, 2017, 11:38 AM IST

mys4.jpg

ಮೈಸೂರು: ಹಿಂದೂ ಧರ್ಮದಷ್ಟು ಭಯಂಕರವಾದ ಧರ್ಮ ಈ ಪ್ರಪಂಚದಲ್ಲಿ ಮತ್ತೂಂದಿಲ್ಲ. ಇದನ್ನು ಹೇಳಿದರೆ ತನ್ನನ್ನು ಕೊಂದು ಹಾಕುತ್ತೇವೆ ಎನ್ನುತ್ತಾರೆ ವಿನಾ ತಿಳಿದುಕೊಳ್ಳುವ ಪ್ರಯತ್ನ ಮಾಡುವುದಿಲ್ಲ ಎಂದು ವಿಚಾರವಾದಿ ಪೊ›.ಕೆ.ಎಸ್‌.ಭಗವಾನ್‌ ಅಸಮಾಧಾನ ವ್ಯಕ್ತಪಡಿಸಿದರು. 

ಚಾರ್ವಾಕ ಸೋಷಿಯಲ್‌ ಆ್ಯಂಡ್‌ ಕಲ್ಚರಲ್‌ ಟ್ರಸ್ಟ್‌ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ದೇವರು-ಧರ್ಮ-ರಾಜಕಾರಣ ಕುರಿತು ಅವರು ಮಾತನಾಡಿದರು. ಹಳೆಯ ಯಾವುದೇ ದೇವಸ್ಥಾನಗಳಲ್ಲಿ ಬೆಳಕಿಲ್ಲ. ಅದೇ ರೀತಿ ಸಮಾಜವನ್ನೂ ಕಗತ್ತಲಲ್ಲಿಟ್ಟಿದ್ದಾರೆ. ಜನ ಬುದ್ಧಿವಂತರಾದರೆ ಪ್ರಶ್ನೆ ಮಾಡುತ್ತಾರೆ. ಒತ್ತಾಯ ಮಾಡಿ ಪ್ರತಿಭಟನೆ ಮಾಡುತ್ತಾರೆ ಎಂಬ ಕಾರಣಕ್ಕೆ ಎಲ್ಲ ಕಾಲದಲ್ಲಿಯೂ ಜನರನ್ನು ಕತ್ತಲಲ್ಲಿಡುತ್ತಾ ಬಂದಿದ್ದಾರೆ.

ಯಾವುದೋ ಶಕ್ತಿ ತನ್ನನ್ನು ಕಾಪಾಡುತ್ತಿದೆ ಎಂಬ ಭಯದಿಂದ ಮನುಷ್ಯ ದೇವರನ್ನು ಸೃಷ್ಟಿ ಮಾಡಿಕೊಂಡ, ಒಂದೊಂದು ಬುಡಕಟ್ಟು ಕೂಡ ಒಂದೊಂದು ದೇವರನ್ನು ಸೃಷ್ಟಿ ಮಾಡಿಕೊಂಡಿತು. ಆ ನಂತರದಲ್ಲಿ ಧರ್ಮ ಹುಟ್ಟಿಕೊಂಡಿತು. ನಂತರದಲ್ಲಿ ಪುರೋಹಿತಶಾಹಿಗಳು ದುಡಿಯುವ ವರ್ಗವನ್ನು ಸೃಷ್ಟಿಸಿದರು ಎಂದು ಅವರು ಪ್ರತಿಪಾದಿಸಿದರು.

ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂದು ವಿಂಗಡಿಸಿ ಕಂದಾಚಾರದ ಮೂಲಕ ಎಲ್ಲರನ್ನೂ ಹಿಡಿದಿಡುವ ಕೆಲಸವನ್ನು ಪುರೋಹಿತಶಾಹಿ ಮಾಡಿದೆ. ಕ್ರಿ.ಪೂ.6ನೇ ಶತಮಾನದಲ್ಲಿ ಬುದ್ಧ, ಮಹಾವೀರರು ಇಂತಹ ಕಂದಾಚಾರಗಳನ್ನು ಪ್ರಶ್ನೆ ಮಾಡಲು ಶುರು ಮಾಡಿದರು ಎಂದು ಹೇಳಿದರು. ದೇಶದ ಮೇಲೆ ಮುಸ್ಲಿಮರು ಆಕ್ರಮಣ ಮಾಡಲೂ ಈ ವೈದಿಕ ಧರ್ಮದವರೇ ಕಾರಣ ಎಂದ ಅವರು, ಧರ್ಮ ಇದ್ದ ಕಡೆ ರಾಜಕಾರಣ ಇರಲ್ಲ.

ಜಾತಿ ಇದ್ದ ಕಡೆ ಮಾತ್ರ ರಾಜಕಾರಣ ಇರುತ್ತೆ ಎಂದರು. ಮತ ಧರ್ಮ ಎಂದು ಪ್ರತಿಪಾದಿಸುವವರಿಗೆ ಎರಡೂ ಶಬ್ದದ ನಿಜವಾದ ಅರ್ಥಗೊತ್ತಿಲ್ಲ. ಮತವೇ ಬೇರೆ, ಧರ್ಮವೇ ಬೇರೆ. ವೈಚಾರಿಕ ವಿಚಾರಗಳಿಲ್ಲದೆ ಹುಟ್ಟಿಕೊಂಡಿದ್ದೇ ಮತ, ಮನುಷ್ಯ ತನ್ನ ಮಾನಸಿಕ ಶಕ್ತಿಯನ್ನು ಬಳಸಿಕೊಳ್ಳದಿದ್ದರೆ ಬೆಳವಣಿಗೆಯಾಗಲ್ಲ ಎಂದರು.

ಸಮುದ್ರಕ್ಕೆ ಎಲ್ಲಾ ನದಿಗಳು ಸೇರಿದರೂ ಇದು ಇಂತಹ ನದಿಯ ನೀರು ಎಂದು ಗುರುತಿಸಲಾಗುವುದಿಲ್ಲ. ಅದೇ ರೀತಿ ಸಮುದ್ರಗಳು ಸೇರಿಕೊಂಡಂತೆ ಮನುಷ್ಯ ಜನಾಂಗ ಸೇರಿದೆ. ಆದರೆ, ನಾವು ಹಿಂದೂ, ಮುಸ್ಲಿಂ, ಕ್ರೆ„ಸ್ತ ಎಂದು ಒಡೆದು ಹಾಕಿದ್ದೇವೆ. ಸಮುದ್ರದ ಉದಾಹರಣೆಕೊಟ್ಟು ಮಾನವ ಜನಾಂಗ ಒಂದು ಎಂದು ಹೇಳಿದ ಬುದ್ಧನನ್ನು ರಾಮಯಾಣದಲ್ಲಿ ರಾಮನ ಬಾಯಲ್ಲಿ ನಿಂದಿಸಲಾಗಿದೆ ಎಂದು ಹೇಳಿದರು.

ವೇದ, ಉಪನಿಷತ್‌, ಸಂಸ್ಕೃತ ಗ್ರಂಥಗಳಲ್ಲೆಲ್ಲೂ ಹಿಂದೂ ಎಂಬ ಪದ ಉಲ್ಲೇಖವಿಲ್ಲ. ಆದರೆ, ಅನಾದಿ ಕಾಲದಲ್ಲಿ ಹೀನರನ್ನು ಹಿಂದೂ ಎಂದು ಕರೆಯಲಾಗುತ್ತಿತ್ತು. ಹೀಗಾಗಿ ಗೌರವ ಇದ್ದವರ್ಯಾರೂ ನಾನು ಹಿಂದೂ ಎಂದು ಹೇಳಿಕೊಳ್ಳಬಾರದು ಎಂದರು. ಬಸವಣ್ಣ ದಯೆಯೇ ಧರ್ಮದ ಮೂಲ ಎಂದಿದ್ದಾರೆ. ಆದರೆ, ಇಂದು ಭಯವೇ ಧರ್ಮದ ಮೂಲವಾಗಿದೆ ಎಂದು ಲೇವಡಿ ಮಾಡಿದರು.

ಉರಿಲಿಂಗಿಪೆದ್ದಿಮಠದ ಜಾnನಪ್ರಕಾಶ ಸ್ವಾಮೀಜಿ ಅಧ್ಯಕ್ಷತೆವಹಿಸಿದ್ದರು. ಚಿಂತಕಿ ನಂದಾ ಹಳೆಮನೆ, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್‌.ಶಿವರಾಮ್‌, ಚಿಂತಕಿ ಡಾ.ರತಿರಾವ್‌, ರಘೋತ್ತಮ್‌ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.