Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ
Team Udayavani, Apr 18, 2024, 3:57 PM IST
ರಾಯಚೂರು: ಎಐಸಿಸಿ ಅಧ್ಯಕ್ಷ ಸ್ಥಾನ ಪ್ರಮುಖ ಹುದ್ದೆಯಲ್ಲ. ಅದು ಪಕ್ಷದ ಕಚೇರಿ ಕಸ ಗುಡಿಸುವುದಕ್ಕೆ, ಸಂಘಟನೆಗೆ ಮಾತ್ರ ಸೀಮಿತ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಟೀಕಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿ, ಕಾಂಗ್ರೆಸ್ ದಲಿತ ವಿರೋಧಿ ಪಕ್ಷ. 75 ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಕರ್ನಾಟಕದಲ್ಲಿ ಖರ್ಗೆಯವರನ್ನು ಮುಖ್ಯಮಂತ್ರಿ ಮಾಡಬಹುದಿತ್ತು. ಯಾಕೆ ಮಾಡಲಿಲ್ಲ. ಮುಖ್ಯಮಂತ್ರಿ ಮಾಡಿದ್ದರೆ ದಲಿತರಿಗೆ ಅಧಿಕಾರ ಕೊಟ್ಟಂತೆ. ಎಐಸಿಸಿ ಅಧ್ಯಕ್ಷರನ್ನು ಮಾಡಿದ ಮಾತ್ರಕ್ಕೆ ಅಧಿಕಾರ ಕೊಟ್ಟಂತೆ ಅಲ್ಲ. ಅದು ಆಫೀಸಿನ ಕಚೇರಿ ಕಸ ಗುಡಿಸುವುದಕ್ಕೆ, ಸಂಘಟನೆ ಮಾಡುವ ಕೆಲಸವಷ್ಟೇ ಎಂದು ವಾಗ್ದಾಳಿ ನಡೆಸಿದರು.
ನಿಮ್ಮ ಪಕ್ಷವನ್ನು ಸದೃಢಗೊಳಿಸಲು ದಲಿತರು ಬೇಕು. ಅಧಿಕಾರ ಮಾಡಲಿಕ್ಕೆ ಯಾಕೆ ದಲಿತರು ಬೇಡವೇ? ಪರಮೇಶ್ವರ ಅವರನ್ನು ಸಿಎಂ ಮಾಡಿದ್ರಾ? ಕೆ.ಎಚ್. ಮುನಿಯಪ್ಪನ್ನ ಮಾಡಿದ್ರಾ? ಬೇರೆ ಯಾರನ್ನೂ ಮುಖ್ಯಮಂತ್ರಿ ಮಾಡಲಿಲ್ಲ. ನೀವು ಅಧಿಕಾರಕ್ಕೆ ಬರುವುದಿಲ್ಲ ಎಂದು ನಿಮಗೆ ಗೊತ್ತಾಗಿದೆ. ಮಮತಾ ಬ್ಯಾನರ್ಜಿ ಮಲ್ಲಿಕಾರ್ಜುನ ಖರ್ಗೆಯವರನ್ನು ಮುಂದಿನ ಪ್ರಧಾನಿ ಅಂತ ಘೋಷಿಸಬೇಕು ಎಂದರೆ, ಸಿದ್ದರಾಮಯ್ಯ ಬೇಡ ಬೇಡ ರಾಹುಲ್ ಗಾಂಧಿ ಬೇಕು ಎಂದರು. ಅಲ್ಲಿಗೆ ದಲಿತ ವಿರೋಧಿ ಮನಸ್ಥಿತಿ ಇರುವುದು ಗೊತ್ತಾಯಿತಲ್ಲ ಎಂದು ಟೀಕೆ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು
Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ